Last Updated:
ಶ್ರಾವಣ ಮಾಸದ ಸೋಮವಾರದಂದು ಇಂದು ಪ್ರಸಿದ್ಧ ದೇವಾಲಯದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ 7 ಮಂದಿ ಭಕ್ತರು ಸಾವನಪ್ಪಿದ್ದರು. ಇದೀಗ ಈ ದುರ್ಘಟನೆಗೆ ಕಾರಣ ಬಯಲಾಗಿದೆ.
ಪ್ರಸಿದ್ಧ ದೇವಾಲಯವೊಂದರಲ್ಲಿ ಇಂದು ಶ್ರಾವಣ ಸೋಮವಾರ ಭೀಕರ ಕಾಲ್ತುಳಿತ (Stampede) ಸಂಭವಿಸಿದೆ. ಬಿಹಾರದ ಲಖಿಸರೈನಲ್ಲಿರುವ ಪ್ರಸಿದ್ಧ ಅಶೋಕ್ ಧಾಮ್ ದೇವಾಲಯದಲ್ಲಿ ಸೋಮವಾರ ದೊಡ್ಡ ಅಪಘಾತ (Accident) ಸಂಭವಿಸಿದೆ. ಶ್ರಾವಣ ಮಾಸದ ಮೊದಲನೇ ಸೋಮವಾರದಂದು ದೇವಾಲಯದಲ್ಲಿ ಭಕ್ತರು ಸೇರಿದ್ದ ಭಾರಿ ಗುಂಪಿನ ನಡುವೆ ಕಾಲ್ತುಳಿತ ಸಂಭವಿಸಿದೆ. ಅಪಘಾತದಲ್ಲಿ ಏಳು ಭಕ್ತರು ಸಾವನ್ನಪ್ಪಿದರೆ, ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.














