9 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ (ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್)
ಈ ಚಿತ್ರದಲ್ಲಿ ಇವರು ಒಬ್ಬ ಲಾಯರ್ ಆಗಿದ್ದಾರೆ. ಈ ಲಾಯರ್ ಪಾತ್ರದ ಪೋಸ್ಟರ್ ರಿವೀಲ್ ಆಗಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ರಿವೀಲ್ ಆಗಿದೆ.
ಈ ಚಿತ್ರಕ್ಕೆ ಮಹಾನ್ ಅಂತ ಹೆಸರಿಟ್ಟಿದ್ದಾರೆ. ಆದರೆ, ಆ ‘ಮಹಾನ್’ ವ್ಯಕ್ತಿ ಯಾರು ಅನ್ನುವ ಪ್ರಶ್ನೆನೂ ಬರುತ್ತದೆ. ಅದಕ್ಕೆ ಡೈರೆಕ್ಟರ್ ಪಿ.ಸಿ.ಶೇಖರ್ ಉತ್ತರ ಕೊಟ್ಟಿದ್ದಾರೆ.
ಮನೆಯಲ್ಲಿ ನಾವು ತಪ್ಪು ಮಾಡಿದರೆ ಅಪ್ಪ ಮತ್ತು ಅಮ್ಮ ಬುದ್ಧಿ ಹೇಳುತ್ತಾರೆ. ಆದರೆ, ಸಮಾಜದಲ್ಲಿಯೇ ಆ ತಪ್ಪುಗಳಾದರೆ ಏನ್ ಆಗ್ಬೇಕು. ಅದನ್ನ ತಿದ್ದುವ ಕೆಲಸವನ್ನ ಮಹಾನ್ ವ್ಯಕ್ತಿ ಮಾಡ್ತಾರೆ ಅಂತಲೂ ಪಿ.ಸಿ.ಶೇಖರ್ ಹೇಳಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಅವರೇ ಈ ಚಿತ್ರದಲ್ಲಿ ‘ಮಹಾನ್’ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಇದನ್ನ ಸ್ವತಃ ಪಿ.ಸಿ.ಶೇಖರ್ ಹೇಳಿಕೊಂಡಿದ್ದಾರೆ.
ಮಹಾನ್ ಸಿನಿಮಾ
(ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್)
ಶಿವಣ್ಣನ ಜೊತೆಗೆ ಎಲ್ಲರೂ ಕೆಲಸ ಮಾಡೋಕೆ ಇಷ್ಟಪಡ್ತಾರೆ. ನನಗೂ ಆ ಆಸೆ ಇತ್ತು. ಅದು ಈಗ ಈಡೇರಿದೆ ಅಂತಲೇ ಡೈರೆಕ್ಟರ್ ಪಿ.ಸಿ.ಶೇಖರ್ ಹೇಳಿದ್ದಾರೆ.
ಈ ಹಿಂದೆ ಶಿವಣ್ಣ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ರಿಷಿ ಅನ್ನೋ ಚಿತ್ರದಲ್ಲಿ ಇವರು ನಟಿಸಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು.
ಮಹಾನ್ ಚಿತ್ರದಲ್ಲಿ ಶಿವಣ್ಣ ಲಾಯರ್ ರೋಲ್ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಇಲ್ಲಿ ರೈತನ ಪಾತ್ರ ಮಾಡಿದ್ದಾರೆ. ಮಾಸ್ ಲೀಡರ್ ಆದ್ಮೇಲೆ ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ನಟಿಸಿರಲಿಲ್ಲ.
ಮಹಾನ್ ವ್ಯಕ್ತಿ ಶಿವಣ್ಣ
ಆದರೆ, 9 ವರ್ಷದ ಬಳಿಕ ಈಗ ಮಹಾನ್ ಚಿತ್ರದಲ್ಲಿ ಇವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಈ ಚಿತ್ರದಲ್ಲಿ ಮಿತ್ರ ಇದ್ದಾರೆ. ರಾಧಿಕಾ ನಾರಾಯಣ್ ನಟಿಸಿದ್ದಾರೆ. ನಮ್ರತಾ ಗೌಡ, ಕಿರಣ್ ಶ್ರೀನಿವಾಸ್, ವರ್ಷ ಬೋಳಮ್ಮ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಈ ಮಹಾನ್ ಚಿತ್ರ ರೈತರ ಬಗೆಗಿನ ಚಿತ್ರವೇ ಆಗಿದೆ. ಈ ಕತೆ ಮೇಲೆ ಡೈರೆಕ್ಟರ್ ಪಿ.ಸಿ.ಶೇಖರ್ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನ ಅಷ್ಟೆ ನೀಟ್ ಆಗಿಯೂ ತೆರೆಗೆ ತರ್ತಿದ್ದಾರೆ.
ಇದರ ನಡುವೆ ಒಂದು ಪ್ರಶ್ನೆ ಇತ್ತು. ಈ ಚಿತ್ರಕ್ಕೆ ಮಹಾನ್ ಅನ್ನುವ ಪ್ರಶ್ನೇ ಏನೋ ಇತ್ತು. ಆದರೆ, ಆ ಮಹಾನ್ ವ್ಯಕ್ತಿ ಯಾರು ಅನ್ನೋದು ಕುತೂಹಲವೂ ಇತ್ತು. ಅದಕ್ಕೆ ಈಗ ಶಿವರಾಜ್ ಕುಮಾರ್ ರೂಪದಲ್ಲಿ ತೆರೆ ಬಿದಿದ್ದೆ ಅಂತಲೇ ಹೇಳಬಹುದು.












