Last Updated:
ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ಕಚೇರಿ ಆವರಣದಲ್ಲಿ ಆಗಸ್ಟ್ 11 ಮತ್ತು 12 ರಂದು ಈ ಕೊನೆಯ ಸುತ್ತಿನ ಮುಖಾಮುಖಿ ಸಂದರ್ಶನಗಳು ನಡೆದ್ದಿದ್ದವು. ಈ ವೇಳೆ 16 ಅಭ್ಯರ್ಥಿಗಳನ್ನ ಫೈನಲ್ ಸುತ್ತಿಗೆ ಆಯ್ಕೆಮಾಡಲಾಗಿತ್ತು. ಇಂದು ಆ 16 ಮಂದಿಯಲ್ಲಿ ಮೂವರನ್ನ ಫೈನಲ್ ಮಾಡಲಾಗಿದೆ.
ಅಯೋಧ್ಯೆ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Shri Ram Janmbhoomi Teerth Kshetra ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಹುದ್ದೆಯ ಆಯ್ಕೆಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿಯು ತನ್ನ ಅಂತಿಮ ಹಂತದ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಯೋಧ್ಯೆಯಲ್ಲಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ಕಚೇರಿ ಆವರಣದಲ್ಲಿ ಆಗಸ್ಟ್ 11 ಮತ್ತು 12 ರಂದು ಈ ಕೊನೆಯ ಸುತ್ತಿನ ಮುಖಾಮುಖಿ ಸಂದರ್ಶನಗಳು ನಡೆದಿದ್ದವು. ಈ ವೇಳೆ 16 ಅಭ್ಯರ್ಥಿಗಳನ್ನು ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಇಂದು ಆ 16 ಮಂದಿಯಲ್ಲಿ ಮೂವರನ್ನು ಫೈನಲ್ ಮಾಡಲಾಗಿದೆ.














