Last Updated:
ತಿಮುರೆ ಮತ್ತು ಸಯಾಪ್ರುಬೇಶಿಯಂತಹ ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿಹೋದವು, ವಾಹನಗಳು ಹುಲ್ಲುಕಡ್ಡಿಯಂತೆ ತೇಲಿದವು, ಕಟ್ಟಡಗಳು ಅವಶೇಷಗಳಾಗಿ ಮಾರ್ಪಟ್ಟವು. ಆದಾಗ್ಯೂ, ಈ ವಿನಾಶಕಾರಿ ಪ್ರವಾಹ ನೈಸರ್ಗಿಕವಲ್ಲ, ಬದಲಾಗಿ ಚೀನಾದ ದುಷ್ಕೃತ್ಯಗಳಿಂದ ಉಂಟಾಗಿದೆ ಎಂಬುವುದು ಸದ್ಯಕ್ಕೆ ಬಂದಿರುವ ವರದಿ.
ಆಗಸ್ಟ್ 26 ರ ಬುಧವಾರ ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿ ವ್ಯಾಪಕ ಭೀತಿ ಉಂಟಾಗಿತ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ನಿರತರಾಗಿದ್ದಾಗ, ಟಿಬೆಟ್ನಿಂದ ಹರಿಯುತ್ತಿದ್ದ ಭೋಟೆ ಕೋಶಿ ನದಿಯು ಬೃಹತ್ ಪ್ರಮಾಣದ ನೀರಿನ ಹರಿವನ್ನು ಬಿಡುಗಡೆ ಮಾಡಿ ಎಲ್ಲವನ್ನೂ ನಾಶಮಾಡಿತು. ತಿಮುರೆ ಮತ್ತು ಸಯಾಪ್ರುಬೇಶಿಯಂತಹ ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿಹೋದವು, ವಾಹನಗಳು ಹುಲ್ಲುಕಡ್ಡಿಯಂತೆ ತೇಲಿದವು, ಕಟ್ಟಡಗಳು ಅವಶೇಷಗಳಾಗಿ ಮಾರ್ಪಟ್ಟವು. ಆದಾಗ್ಯೂ, ಈ ವಿನಾಶಕಾರಿ ಪ್ರವಾಹ ನೈಸರ್ಗಿಕವಲ್ಲ, ಬದಲಾಗಿ ಚೀನಾದ ದುಷ್ಕೃತ್ಯಗಳಿಂದ ಉಂಟಾಗಿದೆ ಎಂಬುವುದು ಸದ್ಯಕ್ಕೆ ಬಂದಿರುವ ವರದಿ.














