Last Updated:
ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಎಂಟು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿದೆ. ವಿಧಾನಸಭಾ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಹರಿಯಾಣ ವಿಧಾನಸಭೆಯಿಂದ 8 ಶಾಸಕರನ್ನು ಸದನದಿಂದ ಹೊರಹಾಕಿದ್ದಾರೆ.
ಮಳೆಗಾಲದ ಅಧಿವೇಶನದ (Winter Session) ಮೊದಲ ದಿನದಂದೇ ಹರಿಯಾಣ ವಿಧಾನಸಭೆಯಲ್ಲಿ (Haryana Vidhanasabha) ಗದ್ದಲ ಸೃಷ್ಟಿಯಾಯಿತು. ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಎಂಟು ಕಾಂಗ್ರೆಸ್ ಶಾಸಕರನ್ನು (Congress MLA) ಅಮಾನತುಗೊಳಿಸಲಾಗಿದೆ. ಹೌದು, ನಿರಂತರ ಅಡ್ಡಿಪಡಿಸಿದ್ದಕ್ಕಾಗಿ ಸ್ಪೀಕರ್ ಆರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ. ನಂತರ ಇನ್ನೂ ಇಬ್ಬರು ಶಾಸಕರನ್ನು ಕೂಡ ಅಮಾನತುಗೊಳಿಸಲಾಯಿತು. ಈ ಘಟನೆಯಿಂದ ಸದನದ ಕಲಾಪಕ್ಕೆ ಅಡಚಣೆಯಾಯಿತು.














