Muharram: ಮೊಹರಂ ಮೆರವಣಿಯಲ್ಲಿ 15 ಸಾವಿರ ಮಂದಿ ಕೊಲ್ಲೋ ಪ್ಲಾನ್! ವಿಷದ ಗುಳಿಗೆ ಕೊಟ್ಟಿದ್ದೇಕೆ ಪಾಪಿ ಫಯಾಜ್? | Crime News | ACTPnews

ಸಿಕ್ಕಿಬಿದ್ದ ಆರೋಪಿ ಫಯಾಜ್


Last Updated:

Muharram: ಮೊಹರಂ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ್ದ ಫಯಾಜ್ ಪ್ರೇಮ್‌ಜಿ ವಿಷಪೂರಿತ ಮಾತ್ರೆ ಹಂಚೋದಕ್ಕೆ ಮುಂದಾಗಿದ್ದ. ಬರೋಬ್ಬರಿ 15 ಸಾವಿರ ಜನರನ್ನು ವಿಷಪೂರಿತ ಮಾತ್ರೆ ಕೊಟ್ಟು ಕೊಲ್ಲೋದಕ್ಕೆ ಪ್ಲಾನ್ ಮಾಡಿದ್ದನಂತೆ!

ಸಿಕ್ಕಿಬಿದ್ದ ಆರೋಪಿ ಫಯಾಜ್
ಸಿಕ್ಕಿಬಿದ್ದ ಆರೋಪಿ ಫಯಾಜ್

ಮುಂಬೈ: ಮುಸ್ಲಿಮರ (Muslims) ಜೊತೆಗೆ ಹಿಂದೂಗಳೂ (Hindus) ಸೇರಿ ಸಹಬಾಳ್ವೆಯಿಂದ ಆಚರಿಸುವ ಹಬ್ಬ ಮೊಹರಂ. ಮುಸ್ಲಿಮರ ಈ ಹಬ್ಬದಲ್ಲಿ ಮೆರವಣಿಗೆಗೆ ವಿಶೇಷ ಮಹತ್ವ ಇದೆ. ಆದರೆ ಈ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ ವ್ಯಕ್ತಿಯೊಬ್ಬ ವಿಷಪೂರಿತ ಮಾತ್ರೆ ಹಂಚೋದಕ್ಕೆ ಮುಂದಾಗಿದ್ದ. ಬರೋಬ್ಬರಿ 15 ಸಾವಿರ ಜನರನ್ನು ವಿಷಪೂರಿತ ಮಾತ್ರೆ ಕೊಟ್ಟು ಕೊಲ್ಲೋದಕ್ಕೆ ಪ್ಲಾನ್ ಮಾಡಿದ್ದನಂತೆ! ಮುಂಬೈನಲ್ಲಿ (Mumbai) ಮೊಹರಂ (Muharram) ಮೆರವಣಿಗೆಯಲ್ಲಿ ಇಂಥದ್ದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಆತನ ಪ್ಲಾನ್ ಫೇಲ್ ಆಗಿದ್ದು, ವಿಷ ಹಾಕಲು ಯತ್ನಿಸಿದ್ದ ಫಯಾಜ್ ಪ್ರೇಮ್‌ಜಿ (Fayaz Premji) ಎಂಬಾತ ಅರೆಸ್ಟ್ ಆಗಿದ್ದಾನೆ.

ವಿಷಪೂರಿತ ಮಾತ್ರೆ ಸೇವಿಸಿ 12ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ವಿಷಕಾರಿ ಮಾತ್ರೆಗಳನ್ನು ವಿತರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸಮಯಕ್ಕೆ ಸರಿಯಾಗಿ ಬಂಧಿಸಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಆತ ಕೊಟ್ಟ ವಿಷಪೂರಿತ ಮಾತ್ರೆಗಳನ್ನು ಸೇವಿಸಿದ ಸುಮಾರು 12ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ನಂತರ ಬೈಕುಲ್ಲಾ ಪ್ರದೇಶದಲ್ಲಿ ಫಯಾಜ್ ಪ್ರೇಮ್‌ಜಿಯನ್ನು ಬಂಧಿಸಲಾಯಿತು.

15 ಸಾವಿರ ಜನರಿಗೆ ವಿಷ ಹಾಕೋ ಟಾರ್ಗೆಟ್

ಫಯಾಜ್ ಪ್ರೇಮ್‌ಜಿ ಬರೋಬ್ಬರಿ 15 ಸಾವಿರ ಜನರನ್ನು ಟಾರ್ಗೆಟ್ ಮಾಡಿ, ಕೊಲ್ಲುವ ಪ್ಲಾನ್ ಮಾಡಿದ್ದನಂತೆ. ಕ್ಯಾಪ್ಸುಲ್‌ಗಳಲ್ಲಿ ಇಲಿ ವಿಷ ಮತ್ತು ಇತರ ಕೀಟ ನಿಯಂತ್ರಣ ರಾಸಾಯನಿಕಗಳಲ್ಲಿ ಬಳಸುವ ಮಾರಕ ರಾಸಾಯನಿಕ ಸಂಯುಕ್ತವಾದ ಸತು ಫಾಸ್ಫೈಡ್ ಇತ್ತು ಎಂದು ಹೇಳಲಾಗಿದೆ. ವಿಚಾರಣೆ ವೇಳೆ ಪ್ರೇಮ್‌ಜಿ ಆ ದಿನ 15 ಸಾವಿರ ಜನರಿಗೆ ವಿಷ ನೀಡಲು ಬಯಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಸ್ವಸ್ಥರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಮೂಲಗಳ ಪ್ರಕಾರ, ಮಾತ್ರೆಗಳನ್ನು ಸೇವಿಸಿದ ನಂತರ ಕನಿಷ್ಠ 12ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಅವರಲ್ಲಿ ಒಬ್ಬರಾದ ಸಲ್ಮಾನ್ ಸಯೀದ್, ಮಾತ್ರೆ ತೆಗೆದುಕೊಂಡ ನಂತರ ಹೊಟ್ಟೆ ನೋವು ಮತ್ತು ವಾಂತಿ ಉಂಟಾಗಿದೆ ಎಂದು ಹೇಳಿದ್ದಾರಂತೆ.

ಮೊಹರಂ ಮೆರವಣಿಗೆ ವೇಳೆ ಮಾತ್ರೆ ಹಂಚುತ್ತಿದ್ದ ಖದೀಮ

ರೇ ರಸ್ತೆಯ ರೆಹಮತಾಬಾದ್ ಸ್ಮಶಾನದ ಬಳಿ ಅಶುರಾ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಪ್ರೇಮ್‌ಜಿ ಮಾತ್ರೆಗಳನ್ನು ವಿತರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಜನಸಂದಣಿಯ ಲಾಭ ಪಡೆದು, ಅವುಗಳನ್ನು ನೋವು ನಿವಾರಕಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳು ಅಂತ ಬಂದವರಿಗೆ ಮಾತ್ರೆಗಳನ್ನು ಹಂಚುತ್ತಿದ್ದನಂತೆ.

ಸಾವಿರಾರು ಮಂದಿ ಪ್ರಾಣ ಉಳಿಸಿದ ಮೂವರು ಸ್ವಯಂ ಸೇವಕರು

ಮೂವರು ಮಹಿಳಾ ಸ್ವಯಂಸೇವಕರ ಜಾಗರೂಕತೆಯಿಂದ ಸಾವಿರಾರು ಜೀವಗಳನ್ನು ಉಳಿಸಲಾಗಿದೆ. ಅವರಲ್ಲಿ ಒಬ್ಬರು ಮೊದಲು ಆರೋಪಿಯು ಅನುಚಿತ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಮಾತ್ರೆಗಳನ್ನು ವಿತರಿಸುತ್ತಿರುವುದನ್ನು ಗಮನಿಸಿದರು. ಸ್ವಯಂಸೇವಕರು ತಕ್ಷಣ ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಜನರು ಮಾತ್ರೆ ಸೇವಿಸದಂತೆ ಕೇಳಿಕೊಂಡು ಧ್ವನಿವರ್ಧಕವನ್ನು ಬಳಸಿ ಘೋಷಣೆ ಮಾಡಲಾಯಿತು.

ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರ ಬೆಳಕಿಗೆ

ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಸಾವಿರಾರು ಜನರನ್ನು ಕೊಲ್ಲುವ ಗುರಿಯನ್ನು ಹೊಂದಿದ್ದೆ ಎಂದು ಫಯಾಜ್ ಪ್ರೇಮ್‌ಜಿ ಒಪ್ಪಿಕೊಂಡಿದ್ದಾನೆ. ನಾನು ಕನಿಷ್ಠ 15,000 ಜನರನ್ನು ಕೊಲ್ಲಲು ಬಯಸಿದ್ದೆ ಅಂತ ಆತ ಪೊಲೀಸರ ಮುಂದೆ ಹೇಳಿದ್ದಾನೆ. ಆತ ಬಿಬಿಎ ಪದವೀಧರನಾಗಿದ್ದು, ಈ ಹಿಂದೆ ಇರಾನ್ ಮತ್ತು ಇರಾಕ್‌ಗೆ ಹೋಗಿ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed