Last Updated:
ದುಲಿಪ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕೆ.ಎಲ್. ರಾಹುಲ್ ಅವರ ಉಪಸ್ಥಿತಿಯನ್ನು ವರದಿಗಾರರು ಪ್ರಶ್ನಿಸಿದಾಗ, ನಾಯಕ ತಿಲಕ್ ವರ್ಮಾ ರಾಹುಲ್ ಚೆನ್ನೈಗೆ ಬಂದಿಲ್ಲ ಮತ್ತು ಪಂದ್ಯದ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ಟೆಸ್ಟ್ ತಂಡದ (Team India) ಉಪನಾಯಕ ಕೆ.ಎಲ್. ರಾಹುಲ್ (KL Rahul) 2026ರ ದುಲೀಪ್ ಟ್ರೋಫಿ ಫೈನಲ್ನಿಂದ (Duleep Trophy Final) ಹಿಂದೆ ಸರಿದಿದ್ದಾರೆ. ರಾಹುಲ್ ಅವರನ್ನು ದಕ್ಷಿಣ ವಲಯದ ಪರ ಆಡಲು ಬಿಸಿಸಿಐ (BCCI) ನಿಯೋಜಿಸಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅವರು ತಂಡವನ್ನು ಸೇರಲು ಸಾಧ್ಯವಾಗಿಲ್ಲ. ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪೂರ್ವ ವಲಯದ ವಿರುದ್ಧದ ಪ್ರಶಸ್ತಿ ಹಣಾಹಣಿಗೆ ಕೇವಲ ಒಂದು ದಿನ ಮೊದಲು, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ರಾಹುಲ್ ಅನುಪಸ್ಥಿತಿಯನ್ನು ದೃಢಪಡಿಸಿದ್ದಾರೆ.














