ಬಿಗ್ ಬಾಸ್ ಮನೆಯ ನಾಮಿನೇಷನ್ ಪ್ರಕ್ರಿಯೆ ಮಕ್ಕಳ ಆಟದ ರೀತಿನೇ ಕಾಣಿಸುತ್ತಿದೆ. ಕಿರಣ್ ಶಾಸ್ತ್ರಿ, ಕಾವ್ಯ ಗೌಡ, ವೈಷ್ಣವಿ ವಿ.ಕೌಂಡಿನ್ಯ ನಡುವಿನ ನಾಮಿನೇಷನ್ ಪ್ರಕ್ರಿಯೆ ಇಲ್ಲಿ ಭಾರೀ ಹಲ್ಚಲ್ ಎಬ್ಬಿಸಿದೆ.
ಔಟ್ ಮಾಡ್ಯಾರ ನಿನ್ನ..
(ಚಿತ್ರ ಕೃಪೆ: ವೈಷ್ಣವಿ ವಿ. ಕೌಂಡಿನ್ಯ ಇನ್ಸ್ಟಾಗ್ರಾಮ್).
ಕಾವ್ಯ ಗೌಡ ಹೇಳ್ತಾರೆ. ನಾನು ಸುಮ್ನೆ ಹೋಗಿ ಬಂಡೆಗೆ ತಲೆ ಚೆಚ್ಚಿಕೊಳ್ಳುವುದಿಲ್ಲ ಅಂತ ಹೇಳ್ತಾರೆ. ಗೊತ್ತಾತ್ತಿಲ್ಲೋ? ನಾನು ಬಂಡೇನೆ ಅಂತಲೇ ಕಿರಣ್ ಶಾಸ್ತ್ರಿ ಹೇಳ್ತಾರೆ.
ವೈಷ್ಣವಿ ಮತ್ತು ಕಿರಣ್ ಶಾಸ್ತ್ರಿ ನಾಮಿನೇಷನ್ ಕೂಡ ಹೀಗೆ ಆಗಿದೆ. ವೈಷ್ಣವಿ ವಿ.ಕೌಂಡಿನ್ಯ ಹೇಳ್ತಾರೆ. ಕಿರಣ್ ಶಾಸ್ತ್ರಿ ಏನೂ ಅಲ್ಲ. ತಾವೇ ಹೀರೋ ಅನ್ನುವ ರೀತಿನೇ ಇರ್ತಾರೆ ಅಂತಲೇ ಹೇಳ್ತಾರೆ.
ಆಗ ಕಿರಣ್ ಶಾಸ್ತ್ರಿ ಹೇಳ್ತಾರೆ. ನೀನು ಏನೂ ಅಲ್ಲ. ಶಕ್ತಿನೂ ಇಲ್ಲ. ಸಾಮರ್ಥ್ಯನೂ ಇಲ್ಲ. ಸುಮ್ನೆ ತಂದು ಮನೆ ಬಾಗಿಲಿಗೆ ನಿಲ್ಲಿಸಿದ್ದಾರೆ ಅಂತಲೇ ಹೇಳ್ತಾರೆ.
ಇದಕ್ಕೆ ವೈಷ್ಣವಿ ಹೇಳ್ತಾರೆ. ನನ್ನ ಶಕ್ತಿ ಸಾಮಾರ್ಥ್ಯ ತೋರುವ ಟಾಸ್ಕ್ ಬಂದಿಲ್ಲ. ಬಂದಾಗ ಮಾಡುವ ಅಂತಲೇ ಹೇಳ್ತಾರೆ. ಆಗಲೆ ಕಿರಣ್ ಶಾಸ್ತ್ರಿ ಈ ವ್ಯಂಗ್ಯ ಮಾಡ್ತಾರೆ. “ಔಟ್ ಮಾಡ್ಯಾರ ನಿನ್ನ ಔಟ್ ಮಾಡ್ಯಾರ” ಅಂತಲೇ ಹೇಳ್ತಾರೆ ನೋಡಿ.
ವೈಷ್ಣವಿ ವ್ಯಂಗ್ಯ ಮಾಡಿದ ಕಿರಣ್ ಶಾಸ್ತ್ರಿ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಕಿರಣ್ ಶಾಸ್ತ್ರಿ ಮನೆಯಲ್ಲಿ ಅಬ್ಬರಿಸುತ್ತಿದ್ದಾರೆ. ಕ್ಯಾಪ್ಟನ್ ಟಾಸ್ಕ್ ಅಲ್ಲಿ ಸೋತಿರೋದಕ್ಕೆ ಇಷ್ಟೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಇದರಿಂದ ಮನೆಯಲ್ಲಿ “ಬಳೆ ಸದ್ದು” ಅಂತಹ ದೊಡ್ಡಮಟ್ಟದಲ್ಲಿ ಏನೂ ಸೌಂಡ್ ಮಾಡಲಿಲ್ಲ. ಆದರೆ, ಶಾಸ್ತ್ರಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.
ನಾನು ಬಂಡೆಗೆ ತಲೆ ಚೆಚ್ಚಿಕೊಳ್ಳುವುದಿಲ್ಲ
(ಚಿತ್ರ ಕೃಪೆ: ಕಾವ್ಯ ಗೌಡ ಇನ್ಸ್ಟಾಗ್ರಾಮ್)
ಕ್ಯಾಪ್ಟನ್ ಟಾಸ್ಕ್ ಅಲ್ಲಿ ಶಾಸ್ತ್ರಿ ಸೋತಿದ್ದಾರೆ. ಇದಕ್ಕೆ ಕಾರಣ, ತಾಂಡವ್ ರಾಮ್ ಹಾಗೂ ಗಗನ್ ಅವರೇ ಆಗಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇವರು, ಟಾಸ್ಕ್ ಅನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಅನೋದೇ ಶಾಸ್ತ್ರಿ ಸಿಟ್ಟು ಮತ್ತು ದೂರಾಗಿದೆ.
ಈ ಒಂದು ಸೋಲು ಶಾಸ್ತ್ರಿಯನ್ನ ಕಂಗೆಡಿಸಿದೆ. ಅದಕ್ಕೇನೆ ಮನೆಮಂದಿಯನ್ನ ಶಾಸ್ತ್ರಿ ಬೈಕೊಂಡು ಓಡಾಡ್ತಿದ್ದಾರೆ ಅಂತ ಹೇಳಬಹುದು.













