Last Updated:
Kichcha Sudeep: ಕಿಚ್ಚ ಸುದೀಪ್ ಅವರು ದಳಪತಿ ವಿಜಯ್ ಮಗನ ಮೊದಲ ಸಿನಿಮಾ ಬಗ್ಗೆ ಏನಂದ್ರು? ಸಿಗ್ಮಾ ಪ್ರಿ ರಿಲೀಸ್ ಇವೆಂಟ್ನಲ್ಲಿ ಕಿಚ್ಚ ಮಾತನಾಡಿದ್ದೇನು?
ತಮಿಳುನಾಡು ಸಿಎಂ ವಿಜಯ್ (Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಅವರ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿಗ್ಮಾ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ನಡೆದಿತ್ತು. ಈ ವೇಳೆ ಬಹಳಷ್ಟು ಗಣ್ಯರು ಸಿನಿಮಾ ಬಗ್ಗೆ, ಜೇಸನ್ ಬಗ್ಗೆ ಮಾತನಾಡಿದ್ದರು. ಇವೆಂಟ್ ಕಳೆದ ನಂತರ ಕಿಚ್ಚ ಸುದೀಪ್ ಅವರು ಮಾತನಾಡಿದ ಕ್ಲಿಪ್ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಇದೀಗ ಕಿಚ್ಚ ಅವರ ವಿಡಿಯೋ ವೈರಲ್ ಆಗಿದ್ದು ಸಿಗ್ಮಾ ವೇದಿಕೆಯಲ್ಲಿ ಈ ವಿಡಿಯೋವನ್ನು ಪ್ಲೇ ಮಾಡಲಾಗಿದೆ. ಅದರಲ್ಲೇನಿದೆ?
“ಐರನ್ ಲೆಗ್” ನಿಂದ “ಗೋಲ್ಡನ್ ಲೆಗ್” ವರೆಗೆ – ಭಾರತೀಯ ಚಿತ್ರರಂಗದಲ್ಲಿ 3 ದಶಕಗಳ ಗಮನಾರ್ಹ ಪ್ರಯಾಣ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಸಿಗ್ಮಾ ಕಾರ್ಯಕ್ರಮದಲ್ಲಿ, ಕಿಚ್ಚ ಸುದೀಪ್ ಅವರು ತಮ್ಮ ಅದ್ಭುತ ಸಿನಿಮಾ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಹೋರಾಟಗಳು, ಮೈಲಿಗಲ್ಲುಗಳು, ಅನುಭವಗಳು, ಪಾಠಗಳು ಮತ್ತು ಅವರ ಪರಂಪರೆಯನ್ನು ರೂಪಿಸಿದ ನೆನಪುಗಳನ್ನು ಹೇಳಿದ್ದಾರೆ. ಕಿಚ್ಚ ಸುದೀಪ್ ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡುವ ಮತ್ತು ತಮ್ಮ ಟ್ರೇಡ್ಮಾರ್ಕ್ ಶೈಲಿ ಮತ್ತು ನಮ್ರತೆಯಿಂದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ವಿಶೇಷ ನೋಟ ಮೆಚ್ಚುಗೆ ಗಳಿಸಿತು.
ಕಿಚ್ಚ ಮಾತನಾಡಿ, ಸೀರಿಯಲ್ಗೆ ಹೋದೆ. ಸೀರಿಯಲ್ನಲ್ಲಿ ಕೆಲಸ ಮಾಡಿ ಸಣ್ಣದಾಗಿ ಹೆಸರು ಬಂತು. ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ನಾನು ಸಿನಿಮಾಗೆ ಸೇರಿಕೊಂಡೆ. ಕೆಲವೊಂದು ಸಿನಿಮಾ ಮಾಡಿದೆ. ಇನ್ನೊಮ್ಮೆ ಪ್ರಮುಖ ಪಾತ್ರದಲ್ಲಿ ಒಂದು ಅವಕಾಶ ಬಂತು. ಅದನ್ನೂ ಮಾಡಿದೆ. ಕಂಪ್ಲೀಟ್ ಆ್ಯಕ್ಷನ್. ಸಿನಿಮಾ ಓಪನಿಂಗ್ನಲ್ಲಿ ಬ್ಲಾಕ್ಬಸ್ಟರ್ ಎಂದರು. 10ನೇ ದಿನ ರಾಜ್ಕುಮಾರ್ ಅವರ ಬಳಿ ಹೋದೆ, ಸಿನಿಮಾ ನಿಂತು ಹೋಗಿತ್ತು. ಕೂಡಲೇ ಅವನು ಐರನ್ ಲೆಗ್ ಎನ್ನುವ ಮಾತು ಬಂತು, ಕೆಲಸ ಸಿಗೋದು ಕಡಿಮೆ ಆಯಿತು ಎಂದರು.
ಕೊನೆಗೂ ಒಂದು ಸಿನಿಮಾ ಮಾಡಿದೆ. ಈ ಸಿನಿಮಾ ಆಗದಿದ್ದರೆ ಸಿನಿಮಾ ಬಿಟ್ಟು ಹೋಗುವುದು ಎಂದು ನಿರ್ಧರಿಸಿದೆ. ಆ್ಯಕ್ಸಿಡೆಂಟ್ ಆಗಿ ಕಾಲೆಲ್ಲಾ ಮುರಿತವಾಗಿತ್ತು. ಆಗ ಎಲ್ಲರೂ ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದರು. ಸಾಕಷ್ಟು ಸಮಸ್ಯೆಗಳ ನಂತರ ಕೊನೆಗೂ ಸಿನಿಮಾ ರಿಲೀಸ್ ಆಯಿತು. ಅದು ದೊಡ್ಡ ಹಿಟ್ ಆಯಿತು. ಹೌದು, ನಂಬಿಕೆಯೇ ಎಲ್ಲವೂ..ನಿಮ್ಮ ಆ್ಯಟಿಡ್ಯೂಡ್ ಬಿಟ್ಟುಕೊಡಬೇಡಿ ಎಂದರು.
ಚಿತ್ರದಲ್ಲಿ ಸಂದೀಪ್ ಕಿಶನ್, ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಅನ್ಬು ಥಾಸನ್, ಯೋಗ್ ಜಪೀ, ಮಗಲಕ್ಷ್ಮಿ, ಶೀಲಾ ರಾಜ್ಕುಮಾರ್, ಕಮಲೇಶ್ ಮತ್ತು ಕಿರಣ್ ಕೊಂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿಗ್ಮಾವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಬಾಸ್ಕರನ್ ನಿರ್ಮಿಸಿದ್ದಾರೆ.














