Payal Mehta: ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ನಿಧನ; ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಸಂತಾಪ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಿರಿಯ ಪತ್ರಕರ್ತೆ ನಿಧನ


Last Updated:

Payal Mehta: ಬೆಳಗ್ಗಿನ ಜಾವ ಪಾಯಲ್ ಮೆಹ್ತಾ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಮತ್ತು ರಾಷ್ಟ್ರೀಯ ವಿದ್ಯಮಾನಗಳಿಗೆ ಹೆಸರಾಗಿದ್ದ ಪಾಲ್ ಮೆಹ್ತಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಿರಿಯ ಪತ್ರಕರ್ತೆ ನಿಧನ
ಹಿರಿಯ ಪತ್ರಕರ್ತೆ ನಿಧನ

ಮುಂಬೈ: ಹಿರಿಯ ಪತ್ರಕರ್ತೆ (Senior journalist), ಸಿಎನ್‌ಎನ್‌ ನ್ಯೂಸ್ 18ನ ಅಸಿಸ್ಟೆಂಟ್ ಎಡಿಟರ್ (CNN-News18 Assistant Editor) ಪಾಯಲ್ ಮೆಹ್ತಾ (Payal Mehta) ನಿಧನರಾಗಿದ್ದಾರೆ. 46 ವರ್ಷದ ಪಾಯಲ್ ಮೆಹ್ತಾ ಮುಂಬೈನ (Mumbai) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗಿನ ಜಾವ ಪಾಯಲ್ ಮೆಹ್ತಾ ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಮತ್ತು ರಾಷ್ಟ್ರೀಯ ವಿದ್ಯಮಾನಗಳಿಗೆ ಹೆಸರಾಗಿದ್ದ ಪಾಲ್ ಮೆಹ್ತಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.  

ವರದಿಗಾರಿಕೆಯಲ್ಲಿ ಹೆಸರು ಮಾಡಿದ್ದ ಪಾಯಲ್ ಮೆಹ್ತಾ

ಪಾಯಲ್ ಮೆಹ್ತಾ ಅವರು ಮೆಹ್ತಾ ಅವರು ಸಂಸತ್ತು, ಸರ್ಕಾರ ಮತ್ತು ಬಿಜೆಪಿಯ ವರದಿಗಳನ್ನು ಒಳಗೊಂಡ ಕಠಿಣ ಪರಿಶ್ರಮಿ ಪತ್ರಕರ್ತರಾಗಿ ಹೆಸರುವಾಸಿಯಾಗಿದ್ದರು. ಹಿರಿಯ ಪತ್ರಕರ್ತೆ ಶೀಲಾ ಭಟ್, “ಮುಂಬೈಗೆ ಭೇಟಿ ನೀಡಿದಾಗ ಅವರಿಗೆ ಅಸ್ವಸ್ಥತೆ ಉಂಟಾಯಿತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ಚಿಕಿತ್ಸೆ ನೀಡುವ ಮೊದಲು, ಅವರ ನಾಡಿಮಿಡಿತ ನಿಶ್ಯಬ್ದವಾಯಿತು” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಯಲ್ ಮೆಹ್ತಾ ನಿಧನಕ್ಕೆ ಮೋದಿ ಕಂಬನಿ

ಪತ್ರಕರ್ತೆ ಪಾಯಲ್ ಮೆಹ್ತಾ ಅವರ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಪ್ರಧಾನಿಯವರು ಅವರನ್ನು ಕಠಿಣ ಪರಿಶ್ರಮಿ ಪತ್ರಕರ್ತೆ ಎಂದು ಬಣ್ಣಿಸಿದ್ದಾರೆ, ಅವರು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರ ವರದಿಗಾರಿಕೆಗೆ ತಂದರು. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸಂತಾಪ ಸೂಚಿಸಿದ ಶ್ರೀ ಮೋದಿ, ಈ ಕಷ್ಟದ ಸಮಯದಲ್ಲಿ ದೇವರು ಅವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಪಾಯಲ್ ಬೇಗ ನಮ್ಮನ್ನು ಅಗಲಿದ್ದಾರೆ

ಪಾಯಲ್ ಮೆಹ್ತಾ ಅವರ ನಿಧನದ ಸುದ್ದಿ ತಿಳಿದು ರಕ್ಷಣಾ ಸಚಿವ ಸಿಂಗ್ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಪಾಯಲ್ ಮೆಹ್ತಾ ಅವರು ತುಂಬಾ ಬೇಗ ನಮ್ಮನ್ನು ಅಗಲಿದ್ದಾರೆ. ಪಾಯಲ್ ಅತ್ಯಂತ ಶ್ರಮಶೀಲ ಮತ್ತು ಸಮರ್ಪಿತ ಪತ್ರಕರ್ತೆಯಾಗಿದ್ದು, ಸಂಸತ್ತಿನ ಬೀಟ್ ಅನ್ನು ಹೆಚ್ಚಿನ ಬದ್ಧತೆ ಮತ್ತು ವೃತ್ತಿಪರತೆಯಿಂದ ವರದಿ ಮಾಡಿದರು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಾಯಲ್ ಮೆಹ್ತಾ ನಿಧನಕ್ಕೆ ಗಣ್ಯರ ಕಂಬನಿ

ಇನ್ನು ಪಾಯಲ್ ಮೆಹ್ತಾ ನಿಧನಕ್ಕೆ ಪಕ್ಷಾತೀತವಾಗಿ ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಗೃಹಸಚಿವ ಅಮಿತ್ ಶಾ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸೇರಿದಂತೆ ಹಲವರು ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports