Last Updated:
ರಾಜ್ಯದಲ್ಲಿ ಭಾರೀ ಮಳೆಯಿಂದ ಜಲಾಶಯಗಳು ಭರ್ತಿ. 5 ದಿನಗಳಲ್ಲಿ 50 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ. ಬರಗಾಲದ ಭೀತಿ ದೂರ, ರೈತರಿಗೆ ಸಂತಸ.
ಬೆಂಗಳೂರು: ರಾಜ್ಯದ ರೈತರಿಗೆ (Farmer) ನಿಜಕ್ಕೂ ಇದು ಹಬ್ಬದ ಕಾಲ. ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯು (Rain), ಬರಗಾಲದ ಭೀತಿಯಲ್ಲಿದ್ದ ಕನ್ನಡಿಗರಿಗೆ ದೊಡ್ಡ ನಿರಾಳತೆಯನ್ನು ತಂದಿದೆ. ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಖಾಲಿ ಬಿದ್ದಿದ್ದ ಜಲಾಶಯಗಳು (Reservoir), ಇದೀಗ ಕೇವಲ ಐದೇ ದಿನಗಳಲ್ಲಿ ಮೈದುಂಬಿಕೊಂಡಿವೆ.
ಜಲಸಂಪನ್ಮೂಲ ಇಲಾಖೆಯ ವರದಿಯ ಪ್ರಕಾರ, ಜುಲೈ 4 ರಿಂದ ಜುಲೈ 9 ರವರೆಗೆ ಕೇವಲ ಐದು ದಿನಗಳಲ್ಲಿ ಜಲಾಶಯಗಳಿಗೆ 50.91 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ. ಅಂದರೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣವು ಬಹುತೇಕ ಡಬಲ್ ಆಗಿದೆ.
ಮಳೆ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಕಾಡುತ್ತಿದ್ದ ಬರಗಾಲದ ಆತಂಕ ದೂರವಾಗುವ ಆಶಾವಾದವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ಕೃಷಿ ಚಟುವಟಿಕೆಗಳಿಗೆ ಜೀವಕಳೆ ನೀಡಿದೆ. ಮಳೆರಾಯನ ಈ ಅನಿರೀಕ್ಷಿತ ಕೃಪೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Bangalore [Bangalore],Bangalore,Karnataka












