ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಭಾಗ್ಯರಾಜ್ ದಶಕಗಳ ಕಾಲದ ಗಮನಾರ್ಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ವರದಿಗಳ ಪ್ರಕಾರ, ಮಾರ್ನಿಂಗ್ ವಾಕ್ನಿಂದ ಹಿಂದಿರುಗಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅವರ ನಿಧನವು ತಮಿಳು ಚಲನಚಿತ್ರೋದ್ಯಮದಲ್ಲಿ ಆಘಾತದ ಸೃಷ್ಟಿಸಿತ್ತು. ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ಹಿತೈಷಿಗಳು ಭಾಗ್ಯರಾಜ್ ಅವರ ಅಂತಿಮ ದರ್ಶನ ಪಡೆದರು.
ಆಘಾತಕಾರಿ ಸುದ್ದಿಯ ನಡುವೆ, ನಟ-ರಾಜಕಾರಣಿ ಖುಷ್ಬು ಸುಂದರ್ ಅವರ ಪುತ್ರಿ ಅವಂತಿಕಾ ಅವರ ಗೋವಾದಲ್ಲಿ ನಡೆದ ಮದುವೆಯಲ್ಲಿ ಭಾಗ್ಯರಾಜ್ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ವಿವಾಹದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಈ ವಿಡಿಯೋ ಕ್ಲಿಪ್ ಅನ್ನು ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಏಕೆಂದರೆ ಇದು ಕೆ. ಭಾಗ್ಯರಾಜ್ ಅವರು ಸಾವಿಗೂ ಮುನ್ನ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭವಾಗಿತ್ತು.
ಕೆ. ಭಾಗ್ಯರಾಜ್ ಅವರ ನಿಧನಕ್ಕೆ ಕೇವಲ ಎರಡು ದಿನಗಳ ಮೊದಲು ಗೋವಾದಲ್ಲಿ ಈ ತಾರೆಯರ ವಿವಾಹ ನಡೆದಿದ್ದು, ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಹಲವಾರು ಪ್ರಮುಖ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಅವರ ನಿಧನದ ಸುದ್ದಿಯ ನಂತರ, ಮದುವೆಯ ವೀಡಿಯೊ ಆನ್ಲೈನ್ನಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಅಭಿಮಾನಿಗಳು ಅದನ್ನು ನೋಡಿ ಭಾವುಕರಾಗಿದ್ದಾರೆ. ಏಕೆಂದರೆ ಇದು ಹಿರಿಯ ಚಲನಚಿತ್ರ ನಿರ್ಮಾಪಕರ ಕೊನೆಯ ಪಬ್ಲಿಕ್ ಅಪಿಯರೆನ್ಸ್. ವೈರಲ್ ಕ್ಲಿಪ್ನಲ್ಲಿ, ಚಿರಂಜೀವಿ ಮೆಟ್ಟಿಲು ಇಳಿಯುವಾಗ ವೆಂಕಟೇಶ್ ಅವರ ಹ್ಯಾಂಡ್ಶೇಖ್ ಮಾಡೋದನ್ನು ಕಾಣಬಹುದು. ಅವರೊಂದಿಗೆ ಮಾತನಾಡಿದ ನಂತರ ಮೆಗಾಸ್ಟಾರ್ ಚಿರಂಜೀವಿ ಭಾಗ್ಯರಾಜ್ ಹತ್ತಿರದಲ್ಲಿ ನಿಂತಿರುವುದನ್ನು ಗಮನಿಸಿ ಅವರಿಗೆ ಅದೇ ಪ್ರೀತಿಯಿಂದ ವಿಶ್ ಮಾಡಿದರು.
ಭಾಗ್ಯರಾಜ್ ಮುಂದೆ ಸಾಗುವ ನಗುತ್ತಾ ಹ್ಯಾಂಡ್ಶೇಖ್ ಮಾಡುತ್ತಾರೆ. ಕೆ. ಭಾಗ್ಯರಾಜ್ ಅವರ ನಿಧನದ ಸುದ್ದಿ ಹೊರಬಿದ್ದ ನಂತರ, ನಟಿ ಸುಹಾಸಿನಿ ಮಣಿರತ್ನಂ ಅವರು ವಿವಾಹ ಸಮಾರಂಭದಲ್ಲಿ ಅವರನ್ನು ಭೇಟಿಯಾದದ್ದನ್ನು ಪ್ರೀತಿಯಿಂದ ನೆನಪಿಸಿಕೊಂಡರು.
நேற்று தான் குஷ்பு மகள் கல்யாணத்துக்கு வந்தார் பாக்யராஜ் 🥺 pic.twitter.com/hchWsNrsEa
— Anshitha🫶💖🍉 (@Anshithaprincey) June 27, 2026
ಮಾಧ್ಯಮಗಳೊಂದಿಗೆ ಮಾತನಾಡಿದ ಸುಹಾಸಿನಿ, ಅನುಭವಿ ಚಲನಚಿತ್ರ ನಿರ್ಮಾಪಕರು ಮದುವೆ ಆಚರಣೆಯ ಉದ್ದಕ್ಕೂ ಎಷ್ಟು ಖುಷಿ, ಉತ್ಸಾಹದಿಂದ ಕಾಣಿಸಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಂಡರು.












