Last Updated:
ಕ್ರಿಕೆಟ್ ಕೂಸು ಐರ್ಲೆಂಡ್ ವಿಶ್ವ ಚಾಂಪಿಯನ್ ಭಾರತ ತಂಡವನ್ನು 34 ರನ್ಗಳಿಂದ ಬೃಹತ್ ಅಂತರದಿಂದ ಸೋಲಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಈ 5 ಸ್ಟಾರ್ ಆಟಗಾರರೇ ಪ್ರಮುಖ ಕಾರಣ.
ಬೆಲ್ಫಾಸ್ಟ್(Belfast)ನಲ್ಲಿ ಐರ್ಲೆಂಡ್ (Ireland) ಮತ್ತು ಭಾರತ (India) ನಡುವೆ ಮೊದಲ ಟಿ20 ಪಂದ್ಯ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು 34 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು. ಕ್ರಿಕೆಟ್ (Cricket) ಕೂಸು ಐರ್ಲೆಂಡ್ ವಿಶ್ವ ಚಾಂಪಿಯನ್ ಭಾರತ ತಂಡವನ್ನು 34 ರನ್ಗಳಿಂದ ಬೃಹತ್ ಅಂತರದಿಂದ ಸೋಲಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿ ಟಿ20 (Series) ಸರಣಿ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಐರ್ಲೆಂಡ್ ತಂಡ ಭಾರತಕ್ಕೆ ಮರೆಯಲಾಗದ ಸೋಲನ್ನು ನೀಡಿತು.
ಟೀಮ್ ಇಂಡಿಯಾ ಸೋಲುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾ ಪರ ಪದೇ ಪದೇ ಫೇಲ್ ಆಗುತ್ತಿರುವ ಆಟಗಾರನ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ. ಅಷ್ಟಕ್ಕೂ, ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಕಾರಣವಾದ ಆಟಗಾರರು ಯಾರು ಗೊತ್ತಾ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ.
ವಾಷಿಂಗ್ಟನ್ ಸುಂದರ್ ಕೇವಲ ಒಂದು ಓವರ್ ಬೌಲ್ ಮಾಡಿ 19 ರನ್ ಬಿಟ್ಟುಕೊಟ್ಟರು. ನಂತರ ಅವರು ಬ್ಯಾಟಿಂಗ್ನಲ್ಲೂ ಫೇಲ್ ಆದರು. ಸುಂದರ್ 12 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಔಟಾದರು. ಸುಂದರ್ ಇನ್ನಿಂಗ್ಸ್ ಉದ್ದಕ್ಕೂ ಮೈದಾನದಲ್ಲಿ ಸಿಲುಕಿಕೊಂಡಂತೆ ತೋರುತ್ತಿತ್ತು.
ನಾಯಕ ಶ್ರೇಯಸ್ ಅಯ್ಯರ್ ಕೂಡ ನಿರಾಶೆ ಮೂಡಿಸಿದರು. ಪವರ್ಪ್ಲೇನಲ್ಲಿ ಬ್ಯಾಟಿಂಗ್ಗೆ ಇಳಿದ ಅವರು 7 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು. ಅಯ್ಯರ್ ಔಟಾದ ನಂತರ, ಟೀಮ್ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಅಯ್ಯರ್ ಕೂಡ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ.
ಉಪನಾಯಕ ತಿಲಕ್ ವರ್ಮಾ ಅವರಿಂದ ಟೀಮ್ ಇಂಡಿಯಾ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ, ಈ ಪಂದ್ಯದಲ್ಲಿ ತಿಲಕ್ ಆಟ ಕಾಣಿಸಲಿಲ್ಲ. ತಿಲಕ್ ವರ್ಮಾ ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಅವರು 21 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿ ಔಟಾದರು. ಅವರ ನಿಧಾನಗತಿಯ ಇನ್ನಿಂಗ್ಸ್ ಇತರ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡವನ್ನು ಹೆಚ್ಚಿಸಿತು.
ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಭಾರೀ ನಿರಾಶೆ ಮೂಡಿಸಿದರು. ಆರಂಭಿಕರಾಗಿ 4 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರು. ಅವರು ತುಂಬಾ ಕಳಪೆ ಶಾಟ್ ಆಡಿ ಇನ್ನಿಂಗ್ಸ್ನ 7ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಸಂಜು ಸ್ಯಾಮ್ಸನ್ ಉತ್ತಮ ಆರಂಭ ನೀಡಿದ್ದರೆ, ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿರುತ್ತಿತ್ತು.
ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಪ್ರಸಿದ್ಧ್ ಕೃಷ್ಣ ಟಿ20 ತಂಡಕ್ಕೆ ಮರಳಿದರು. ಆದರೆ ಅವರೇ ತಮ್ಮಗೆ ಸಿಕ್ಕ ಅವಕಾಶವನ್ನು ಹಾಳುಮಾಡಿಕೊಂಡರು. ಅವರು ನಾಲ್ಕು ಓವರ್ಗಳಲ್ಲಿ 14.20 ಎಕಾನಮಿ ದರದಲ್ಲಿ 57 ರನ್ಗಳನ್ನು ಬಿಟ್ಟುಕೊಟ್ಟರು. ಇದರಿಂದಾಗಿ ಐರ್ಲೆಂಡ್ 182 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರಸಿದ್ಧ್ ಕೃಷ್ಣ ಪದೇ ಪದೇ ವಿಫಲರಾಗಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧ್ ಕೃಷ್ಣ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ.
IRE vs IND: ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಈ 5 ಸ್ಟಾರ್ ಆಟಗಾರರೇ ವಿಲನ್; ಪದೇ ಪದೇ ಕೈ ಕೊಡ್ತಾ ಇರೋ ಪ್ಲೇಯರ್ ಮೇಲೆ ಫ್ಯಾನ್ಸ್ ಫುಲ್ ಗರಂ













