IRE vs IND: ಐರ್ಲೆಂಡ್ ವಿರುದ್ಧ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ; ಮೂವರು ಡ್ರಾಪ್, ವೈಭವ್‌ಗೆ ಎಂಟ್ರಿ! | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ ಮತ್ತು ಶ್ರೇಯಸ್ ಅಯ್ಯರ್


Last Updated:

ಐರ್ಲೆಂಡ್ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿತು. ಕ್ರಿಕೆಟ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಮೊದಲ ಸೋಲು ಇದು. ಈ ಸೋಲಿನ ನಂತರ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ.

ವೈಭವ್ ಸೂರ್ಯವಂಶಿ ಮತ್ತು ಶ್ರೇಯಸ್ ಅಯ್ಯರ್
ವೈಭವ್ ಸೂರ್ಯವಂಶಿ ಮತ್ತು ಶ್ರೇಯಸ್ ಅಯ್ಯರ್

ಟೀಮ್ ಇಂಡಿಯಾ(Team India)ದ ಐರ್ಲೆಂಡ್ (Ireland) ಪ್ರವಾಸವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಬೆಲ್‌ಫಾಸ್ಟ್‌(Belfast)ನಲ್ಲಿ ನಡೆದ ಮೊದಲ ಟಿ20ಐನಲ್ಲಿ ಟೀಮ್ ಇಂಡಿಯಾವನ್ನು ಐರ್ಲೆಂಡ್ 34 ರನ್‌ಗಳ ಸೋಲಿಸಿತು. ಸೂರ್ಯಕುಮಾರ್ ಯಾದವ್ (Suryakumar Yadav) ಬದಲಿಗೆ ಆಯ್ಕೆಯಾದ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಶೈನಿಂಗ್ ಕಾಣಿಸಲಿಲ್ಲ. ಕ್ರಿಕೆಟ್ (Cricket) ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ಭಾರತವನ್ನು ಟಿ20ಐ ಪಂದ್ಯದಲ್ಲಿ ಸೋಲಿಸಿತು.

ಈ ಅವಮಾನಕರ ಸೋಲಿನ ನಂತರ, ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಬಹುತೇಕ ಖಚಿತವಾಗಿವೆ. ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಲ್ಲಿ ಮೂರು ಸಂಭಾವ್ಯ ಬದಲಾವಣೆಗಳನ್ನು ತಿಳಿಯೋಣ ಬನ್ನಿ.

ವೈಭವ್ ಪಾದಾರ್ಪಣೆ ಮಾಡ್ತಾರಾ?

ಕ್ರಿಕೆಟ್ ಅಭಿಮಾನಿಗಳು ವೈಭವ್ ಸೂರ್ಯವಂಶಿ ಮೊದಲ ಟಿ20ಐನಲ್ಲಿ ಪಾದಾರ್ಪಣೆ ಮಾಡುವುದನ್ನು ನೋಡಲು ಕಾತುರರಾಗಿದ್ದರು. ಆದರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕ ಜೋಡಿಯನ್ನು ಮುಂದುವರಿಸಲು ನಿರ್ಧರಿಸಿತು. ಸಂಜು ಮೊದಲ ಪಂದ್ಯದಲ್ಲಿ ಕೇವಲ 5 ರನ್ ಗಳಿಸುವ ಮೂಲಕ ವಿಫಲರಾದರು. ಈಗ, ವೈಭವ್ ಸೂರ್ಯವಂಶಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು.

ಸೂರ್ಯಾಂಶ್‌ಗೆ ಅವಕಾಶ?

ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿದಾಗ ಅಭಿಮಾನಿಗಳು ಆಶ್ಚರ್ಯಚಕಿತರಾದರು. ಸುಂದರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವ ಬೀರುವಲ್ಲಿ ವಿಫಲರಾದರು. ಅವರನ್ನು ಈಗ ತಂಡದಿಂದ ಕೈಬಿಡಬಹುದು. ವೇಗದ ಬೌಲಿಂಗ್ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಜ್ ಅವರಿಗೆ ಅವರ ಸ್ಥಾನದಲ್ಲಿ ಅವಕಾಶ ನೀಡಬಹುದು. ಅವರು ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಭಾರತ ಎ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಯಂಗ್​ ಬೌಲರ್​​ಗೆ ಸಿಗುತ್ತಾ ಚಾನ್ಸ್?

ಪ್ರಸಿದ್ಧ್ ಕೃಷ್ಣ ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಮರೆಯಲಾಗದ ಕಳಪೆ ಪ್ರದರ್ಶನ ನೀಡಿದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 57 ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಪ್ರಸಿದ್ಧ್ ಕೃಷ್ಣ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ಬದಲಾಯಿಸಬಹುದು.

ಸ್ಟಾರ್ ಬೌಲರ್ ಪ್ರಿನ್ಸ್ ಯಾದವ್ ಐಪಿಎಲ್ 2026 ರಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರಿಗೆ ಈಗ ಆಡಲು ಅವಕಾಶ ಸಿಗಬಹುದು. ಶ್ರೇಯಸ್ ಅಯ್ಯರ್ ಮತ್ತು ಗೌತಮ್ ಗಂಭೀರ್ ಎರಡನೇ ಟಿ20ಐನಲ್ಲಿ ಮೂರು ಆಟಗಾರರಿಗೆ ಚೊಚ್ಚಲ ಪ್ರವೇಶ ನೀಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed