Last Updated:
ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನ ಮತ್ತೊಮ್ಮೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ತನ್ನ 250 ಮಿಲಿಯನ್ ಜನಸಂಖ್ಯೆಯನ್ನು ಉಲ್ಲೇಖಿಸಿ ಸಹಾಯ ಮಾಡಿ ಎಂದು ಅಂಗಲಾಚಿದೆ.
ಸಿಂಧೂ ಜಲ ಒಪ್ಪಂದದ (Sindu Water) ಕುರಿತು ಭಾರತದ ಕಟ್ಟುನಿಟ್ಟಿನ ನಿಲುವು ಹಾಗೆಯೇ ಉಳಿದಿದೆ. ಸಿಂಧೂ ಒಪ್ಪಂದ ರದ್ದಾದ ನಂತರ ಪಾಕಿಸ್ತಾನ (Pakistan) ನೀರಿನ ಕೊರತೆಯಿಂದ ಬಳಲುತ್ತಿದೆ. ಸದ್ಯ ಪಾಕಿಸ್ತಾನದ ಜನರು ಪ್ರತಿ ಹನಿ ನೀರಿಗೂ ಹಂಬಲಿಸುತ್ತಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಪುನಃಸ್ಥಾಪಿಸಬೇಕೆಂದು ಪಾಕಿಸ್ತಾನ ಪದೇ ಪದೇ ಮನವಿ ಮಾಡುತ್ತಿದೆ. ಆದರೆ ಭಾರತ ಇದರಿಂದ ಹಿಂದೆ ಸರಿದಿಲ್ಲ. ಭಾರತದ (India) ನಿಲುವು ಸ್ಪಷ್ಟವಾಗಿದೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.














