IND vs WI: ಏಷ್ಯನ್ ಗೇಮ್ಸ್​​ನಿಂದ ನಿತೀಶ್ ಕುಮಾರ್ ಹೊರಕ್ಕೆ! ಮಾಸ್ಟರ್ ಪ್ಲಾನ್ ಮಾಡಿ ಏಕದಿನ ತಂಡಕ್ಕೆ ಕರೆಸಿಕೊಂಡ ಬಿಸಿಸಿಐ | ಕ್ರೀಡಾ ಸುದ್ದಿ | ACTPnews

ನಿತೀಶ್ ಕುಮಾರ್ ರೆಡ್ಡಿ(AFP)


Last Updated:

ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆರಂಭದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ಕ್ಕಾಗಿ ಭಾರತದ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ದಿಢೀರ್ ವಾಪಸ್ ತೆಗೆದುಕೊಳ್ಳಲಾಗಿದೆ.

 ನಿತೀಶ್ ಕುಮಾರ್ ರೆಡ್ಡಿ(AFP)
ನಿತೀಶ್ ಕುಮಾರ್ ರೆಡ್ಡಿ(AFP)

ವೆಸ್ಟ್ ಇಂಡೀಸ್ ವಿರುದ್ಧ (India vs West Indies) ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಿಸಿಸಿಐ (BCCI) ಭಾರತೀಯ ತಂಡವನ್ನು ಪ್ರಕಟಿಸಿದೆ. ಬುಧವಾರ ಬಿಡುಗಡೆಯಾದ ಹೇಳಿಕೆಯಲ್ಲಿ 15 ಸದಸ್ಯರ ತಂಡವನ್ನು ವಿವರಿಸಿದೆ. ದೀರ್ಘಕಾಲದ ನಂತರ ಹಲವು ಆಟಗಾರರು ಏಕದಿನ ತಂಡಕ್ಕೆ ಮರಳಿದ್ದರೆ, ಕೆಲವರು ಮೊದಲ ಬಾರಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli-Rohit Sharma) ತಂಡಕ್ಕೆ ಮರಳುತ್ತಿದ್ದಾರೆ. ಹಾಗೆಯೇ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಕೂಡ ದೀರ್ಘ ವಿರಾಮದ ನಂತರ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಉಪನಾಯಕ ಶ್ರೇಯಸ್ ಅಯ್ಯರ್ ಈ ಸರಣಿಗೆ ಲಭ್ಯವಿಲ್ಲದಿರುವುದರಿಂದ, ಆಯ್ಕೆಗಾರರು ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಿದ್ದಾರೆ. ಕೆ.ಎಲ್. ರಾಹುಲ್ ಅವರಿಗೆ ಉಪನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.

ಏಷ್ಯನ್ ಗೇಮ್ಸ್​ನಿಂದ ನಿತೀಶ್ ಹೆಸರು ವಾಪಸ್ ತೆಗೆದ ಬಿಸಿಸಿಐ

ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆರಂಭದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ಕ್ಕಾಗಿ ಭಾರತದ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಭಾರತದ ತವರಿನ ಕ್ರಿಕೆಟ್ ಸೀಸನ್‌ನ ಮಹತ್ವ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ನಿರ್ಣಾಯಕ ಏಕದಿನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಅವರ ಬಳಕೆಯ ಕಾರ್ಯತಂತ್ರವನ್ನು ಬದಲಾಯಿಸಿದೆ.

ಖಾಯಂ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಫಿಟ್​​ನೆಸ್​ ಸಾಧಿಸಲು ವಿಫಲರಾಗಿರುವುದರಿಂದ, ಅವರ ಸ್ಥಾನಕ್ಕಾಗಿ ನಿತೀಶ್ ಕುಮಾರ್​ಗೆ ಅವಕಾಶ ನೀಡಲಾಗಿದೆ. 2027ರ ಏಕದಿನ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಆಲ್​ರೌಂಡರ್​ ಆಗಿ ಬಳಸಿಕೊಳ್ಳಲು ನಿರ್ಧಾರ

ಬಿಸಿಸಿಐ ಆಯ್ಕೆಗಾರರ ಪ್ರಕಾರ, ನಿತೀಶ್ ಅವರ ವೇಗದ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಆಕ್ರಮಣಕಾರಿ ಬ್ಯಾಟಿಂಗ್ ಕೌಶಲ್ಯವು 50 ಓವರ್‌ಗಳ ಏಕದಿನ ಮಾದರಿಯಲ್ಲಿ ಭಾರತ ತಂಡದ ಸಮತೋಲನವನ್ನು ಮತ್ತಷ್ಟು ಬಲಪಡಿಸಲಿದೆ. ಇದೇ ಕಾರಣಕ್ಕಾಗಿ ಅವರನ್ನು ಏಷ್ಯನ್ ಗೇಮ್ಸ್ ತಂಡದಿಂದ ಮುಕ್ತಗೊಳಿಸಿ, ವೆಸ್ಟ್ ಇಂಡೀಸ್ ವಿರುದ್ಧದ 15 ಸದಸ್ಯರ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ‘ಮೆನ್ ಇನ್ ಮರೂನ್’ ಎಂದೂ ಕರೆಯಲ್ಪಡುವ ವೆಸ್ಟ್ ಇಂಡೀಸ್ ತಂಡವು, ಭಾರತದಲ್ಲಿ ನಡೆಯಲಿರುವ ಈ ಸರಣಿಯ ಅವಧಿಯಲ್ಲಿ ಕಠಿಣ ಸವಾಲು ನೀಡುವ ಇರಾದೆಯೊಂದಿಗೆ ಮೈದಾನಕ್ಕಿಳಿಯಲಿದೆ. ಇಂತಹ ಸಂದರ್ಭದಲ್ಲಿ ನಿತೀಶ್ ಅವರಿಗೆ ಸೀಮಿತ ಓವರ್‌ಗಳ ಈ ಅತ್ಯುನ್ನತ ಮಾದರಿಯಲ್ಲಿ ತಮ್ಮ ಉಪಯುಕ್ತತೆಯನ್ನು ಸಾಬೀತುಪಡಿಸಲು ಸುವರ್ಣ ಅವಕಾಶ ಸಿಕ್ಕಂತಾಗಿದೆ.

ಹೊಸಬರಿಗೆ ಅವಕಾಶ

ರಣಜಿಯಲ್ಲಿ ಮಿಂಚಿದ ಆಕಿಬ್ ನಬಿ ತಂಡದಲ್ಲಿ ಸ್ಥಾನ ಪಡೆದಿದ್ದರೆ, ನಮನ್ ಧೀರ್ ಮೊದಲ ಬಾರಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಧ್ರುವ್ ಜುರೆಲ್ ಅವರನ್ನು ಬ್ಯಾಕಪ್ ವಿಕೆಟ್-ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಬಹಳ ದಿನಗಳಿಂದ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಯಶಸ್ವಿ ಜೈಸ್ವಾಲ್ ಏಕದಿನ ತಂಡಕ್ಕೆ ವಾಪಸ್ ಆಗಿದ್ದಾರೆ.

ಭಾರತದ ಏಕದಿನ ತಂಡ

ಶುಭ್​‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆ.ಎಲ್. ರಾಹುಲ್ (ಉಪನಾಯಕ), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಆಖಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed