IND vs SL: ನಾಲ್ವರು ಆಟಗಾರರ ಪ್ರವೇಶ, ಮೂವರು ಔಟ್! ಶ್ರೀಲಂಕಾ ಪ್ರವಾಸದಲ್ಲಿ ಯಾರ್ಯಾರಿದ್ದಾರೆ? ಇಲ್ಲಿದೆ ಟೀಂ ಇಂಡಿಯಾ ಸ್ಕ್ವಾಡ್ | ಕ್ರೀಡಾ ಸುದ್ದಿ | ACTPnews

News18


Last Updated:

India Test Squad for Sri Lanka Tour: ಬಿಸಿಸಿಐ ಶ್ರೀಲಂಕಾ ವಿರುದ್ಧ ಆಡುವ ಭಾರತದ ಪ್ಲೇಯಿಂಗ್ ಇಲೆವೆನ್ ತಂಡವನ್ನು ಪ್ರಕಟ ಮಾಡಿದ್ದು, ಆ ಪೈಕಿ ಸಾರಾಂಶ್ ಜೈನ್ ಎಂಬ ಹೊಸ ಹೆಸರು ಸಹ ಸೇರಿಕೊಂಡಿದೆ. ಅನುಭವಿ ರವೀಂದ್ರ ಜಡೇಜಾ ಟೀಂ ಇಂಡಿಯಾಗೆ ಮರಳಿದ್ದು, ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ನಡೆಯಲಿದೆ.

News18
News18

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ (IND vs SL) ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಬಿಸಿಸಿಐ ಶ್ರೀಲಂಕಾ ವಿರುದ್ಧ ಆಡುವ ಭಾರತದ ಪ್ಲೇಯಿಂಗ್ ಇಲೆವೆನ್ ತಂಡವನ್ನು ಪ್ರಕಟ ಮಾಡಿದ್ದು, ಆ ಪೈಕಿ ಸಾರಾಂಶ್ ಜೈನ್ ಎಂಬ ಹೊಸ ಹೆಸರು ಸಹ ಸೇರಿಕೊಂಡಿದೆ. ಅನುಭವಿ ರವೀಂದ್ರ ಜಡೇಜಾ ಟೀಂ ಇಂಡಿಯಾಗೆ ಮರಳಿದ್ದು, ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊ (ಎಸ್‌ಎಸ್‌ಸಿ) ನಲ್ಲಿ ನಡೆಯಲಿದೆ.

ಯಾರು ಇನ್, ಯಾರು ಔಟ್?

ಹಿಂದಿನ ಟೆಸ್ಟ್ ಸರಣಿಗೆ ಹೋಲಿಸಿದರೆ, ನಾಲ್ವರು ಆಟಗಾರರು ತಂಡಕ್ಕೆ ಮರಳಿದ್ದಾರೆ, ಮೂವರು ಕೈಬಿಡಲಾಗಿದೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಸಾರಾಂಶ್ ಜೈನ್ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ, ಆದರೆ ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷ್ ದುಬೆ ತಂಡದಿಂದ ಹೊರಗುಳಿದಿದ್ದಾರೆ. ವಿದರ್ಭ ಪರ ಆಡುವ ಹರ್ಷ್ ದುಬೆ, ಸಾರಾಂಶ್ ಜೈನ್ ಅವರಂತೆಯೇ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಅನ್ನೋದು ಗಮನಾರ್ಹ. ಕೇವಲ ಒಂದು ಸರಣಿಯ ನಂತರ ಅವರನ್ನು ಕೈಬಿಡಲು ಕಾರಣವೇನೆಂದು ಪ್ರಸ್ತುತ ತಿಳಿದಿಲ್ಲ.

ಇದನ್ನೂ ಓದಿ: Team India: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ತಂಡ ಪ್ರಕಟ, 8 ತಿಂಗಳ ನಂತರ ಆಲ್‌ರೌಂಡರ್ ಎಂಟ್ರಿ!

15 ಜನರ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಬಿ. ಸಾಯಿ ಸುದರ್ಶನ್ ಅವರನ್ನು ಸೇರಿಸಿಕೊಳ್ಳಲಾಗಿದೆ, ಆದರೆ ಅವರ ಲಭ್ಯತೆಯು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಿಂದ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಗಾಯಗೊಂಡ ಕಾರಣ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್‌ಗೆ ಆಯ್ಕೆಗೆ ಲಭ್ಯವಿರಲಿಲ್ಲ.

ಭಾರತೀಯ ಟೆಸ್ಟ್ ತಂಡ:

ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾಹ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed