IAF Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ, ಐದು ಸೈನಿಕರು ಹುತಾತ್ಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

IAF AN-32 Crash Jorhat 5 IAF Personnel Martyred: ದುರಂತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುಃಖ ವ್ಯಕ್ತಪಡಿಸಿದ್ದು, ‘ಅಸ್ಸಾಂನ ಜೋರ್ಹತ್‌ನಲ್ಲಿ ಸಂಭವಿಸಿದ AN-32 ವಿಮಾನ ಅಪಘಾತದಲ್ಲಿ ಐವರು ವಾಯು ಯೋಧರ ನಷ್ಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

News18
News18

ಜೋರ್ಹತ್: ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಲ್ಯಾಂಡ್‌ ಆಗುವಾಗ ಭಾರತೀಯ ವಾಯುಪಡೆಗೆ (IAF) ಸೇರಿದ ವಿಮಾನವೊಂದು ಪತನಗೊಂಡು (AN-32 Aircraft Crash) ಐವರು ವಾಯುಪಡೆಯ ಸಿಬ್ಬಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದ ಬಗ್ಗೆ ತನಿಖೆಗೆ ಭಾರತೀಯ ವಾಯುಪಡೆ ಆದೇಶಿಸಿದೆ.

43 ಸ್ಕ್ವಾಡ್ರನ್‌ಗೆ ಸೇರಿದ AN-32 ವಿಮಾನವು ರೌರಿಯಾ ಪ್ರದೇಶದ ವಾಯುಪಡೆ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನವು ಸರಕುಗಳನ್ನು ಸಾಗಿಸುತ್ತಿತ್ತು. ಅಪಘಾತದ ನಂತರ ವಿಮಾನವು ಎರಡು ತುಂಡುಗಳಾಗಿ ಮುರಿದು ಬೆಂಕಿಗೆ ಆಹುತಿಯಾಗಿದೆ. ಈ ದುರಂತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡ ವಾಯುಪಡೆಯ ಸೈನಿಕರನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ ಡ್ಯಾನಿಶ್ ಆಲಂ ಎಂದು ಗುರುತಿಸಲಾಗಿದ್ದು, ಈ ಐವರು ಕರ್ತವ್ಯದ ವೇಳೆ ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ಐಎಎಫ್ ತಿಳಿಸಿದೆ. ಈ ದುಃಖದ ಸಮಯದಲ್ಲಿ ಐಎಎಫ್ ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಐಎಎಫ್ ಹೇಳಿದೆ.

ದುರಂತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುಃಖ ವ್ಯಕ್ತಪಡಿಸಿದ್ದು, ‘ಅಸ್ಸಾಂನ ಜೋರ್ಹತ್‌ನಲ್ಲಿ ಸಂಭವಿಸಿದ AN-32 ವಿಮಾನ ಅಪಘಾತದಲ್ಲಿ ಐವರು ವಾಯು ಯೋಧರ ನಷ್ಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಬದುಕುಳಿದ ಸಹ ಪೈಲಟ್

ಈ ಅಪಘಾತದಲ್ಲಿ ಸಹ ಪೈಲಟ್ ಬದುಕುಳಿದಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ನಂತರ, ಕಾರಣವನ್ನು ನಿರ್ಧರಿಸಲು ತನಿಖಾ ಸಮಿತಿಯನ್ನು ರಚಿಸಲು ಭಾರತೀಯ ವಾಯುಪಡೆ ಆದೇಶಿಸಿದೆ.

ಅಸ್ಸಾಂನ ಮೇಲ್ಭಾಗದಲ್ಲಿರುವ ಆಯಕಟ್ಟಿನ ಪ್ರಮುಖ ವಿಮಾನ ನಿಲ್ದಾಣದ ಆವರಣದಲ್ಲಿ AN-32 ಸಾರಿಗೆ ವಿಮಾನ ಅಪಘಾತಕ್ಕೀಡಾಗಿದೆ. ಅಪಘಾತದ ಸಮಯದಲ್ಲಿ ಅದು ಅರುಣಾಚಲ ಪ್ರದೇಶದಿಂದ ಜೋರ್ಹತ್‌ಗೆ ತೆರಳುತ್ತಿತ್ತು ಎಂದು ವರದಿಯಾಗಿದೆ.

AN-32 ರಷ್ಯಾದ ಅವಳಿ ಎಂಜಿನ್ ಹೊಂದಿರುವ ವಿಮಾನ

ಸೋವಿಯತ್ ಮೂಲದ AN-32 ಒಂದು ಅವಳಿ-ಎಂಜಿನ್ ಯುದ್ಧತಂತ್ರದ ಸಾರಿಗೆ ವಿಮಾನವಾಗಿದ್ದು, ಇದು ದಶಕಗಳಿಂದ ವಾಯುಪಡೆಯ ಪ್ರಮುಖ ವಿಮಾನವಾಗಿದೆ, ವಿಶೇಷವಾಗಿ ಈಶಾನ್ಯ ಮತ್ತು ಹಿಮಾಲಯ ಗಡಿಯ ಕಠಿಣ ಭೂಪ್ರದೇಶ ಮತ್ತು ಎತ್ತರದ ಪ್ರದೇಶಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಆದರೆ, ಈ ಘಟನೆಯು ಮತ್ತೊಮ್ಮೆ ವಿಮಾನದ ಕಾರ್ಯಾಚರಣೆಯ ಇತಿಹಾಸದತ್ತ ಗಮನ ಸೆಳೆದಿದೆ.

ಹಲವಾರು ಅಪಘಾತಗಳಲ್ಲಿ ಸಿಲುಕಿದ AN-32 ವಿಮಾನ

ಇದಕ್ಕೂ ಮೊದಲು ಜೂನ್ 2019 ರಲ್ಲಿ, 13 ಜನರನ್ನು ಹೊತ್ತೊಯ್ಯುತ್ತಿದ್ದ ವಾಯುಪಡೆಯ AN-32 ವಿಮಾನವು ಜೋರ್ಹತ್ ವಾಯುಪಡೆ ನಿಲ್ದಾಣದಿಂದ ಅರುಣಾಚಲ ಪ್ರದೇಶದ ಮೆಚುಕಾಗೆ ಹಾರಿದ ನಂತರ ನಾಪತ್ತೆಯಾಗಿತ್ತು ಎಂಬುದು ಗಮನಾರ್ಹ. ಬೃಹತ್ ಶೋಧ ಕಾರ್ಯಾಚರಣೆಯ ನಂತರ, ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಕಂಡುಬಂತು. ವಿಮಾನದಲ್ಲಿದ್ದ ಎಲ್ಲಾ 13 ಜನರನ್ನು ಸತ್ತಿದ್ದಾರೆ ಎಂದು ಘೋಷಿಸಲಾಯಿತು.

ಜುಲೈ 2016 ರಲ್ಲಿ, 29 ಜನರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು AN-32 ವಿಮಾನವು ಚೆನ್ನೈನಿಂದ ಪೋರ್ಟ್ ಬ್ಲೇರ್‌ಗೆ ಹೋಗುವ ಮಾರ್ಗದಲ್ಲಿ ಬಂಗಾಳ ಕೊಲ್ಲಿಯ ಮೇಲೆ ಕಾಣೆಯಾಯಿತು. ಭಾರತದ ಅತಿದೊಡ್ಡ ಶೋಧ ಕಾರ್ಯಾಚರಣೆಗಳಲ್ಲಿ ಇದು ಒಂದಾದರೂ, ವಿಮಾನದ ಅವಶೇಷ ಈವರೆಗೆ ಪತ್ತೆಯಾಗದೆ ಉಳಿದಿದೆ. ವಿಮಾನದಲ್ಲಿದ್ದ ಎಲ್ಲರೂ ಸತ್ತಿದ್ದಾರೆಂದು ಭಾವಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports