Last Updated:
ದೇಶೀಯ ಕ್ರಿಕೆಟ್ನಲ್ಲಿ ಹರ್ಪ್ರೀತ್ ಅವರ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿ ಹಲವಾರು ತಂಡಗಳು ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದವು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಅವರ ಮೇಲೆ ಕಣ್ಣಿಟ್ಟಿದ್ದ ತಂಡಗಳು ಒಂದೇ ಒಂದು ನಕಲಿ ಸುದ್ದಿಯಿಂದಾಗಿ ಅವರನ್ನ ಖರೀದಿಸಲು ನಿರ್ಧರಿಸಿದವು. ಈ ಒಂದು ಸುದ್ದಿ ಪ್ರತಿಭಾವಂತ ಆಟಗಾರನ ಅದ್ಭುತ ವೃತ್ತಿಜೀವನವನ್ನು ಕ್ಷಣಮಾತ್ರದಲ್ಲಿ ಹಳಿತಪ್ಪಿಸಿತು.
2017ರ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026) ಫ್ರಾಂಚೈಸಿಗಳು ಹರಾಜಿನ ಮೇಜಿನ ಬಳಿ ಕುಳಿತಿದ್ದವು. ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಿಕೊಂಡಿದ್ದವು. ಹರಾಜು ಪ್ರಾರಂಭವಾಯಿತು, ಮತ್ತು ಬಿಡ್ಗಳು ಒಂದರ ನಂತರ ಒಂದರಂತೆ ಬರಲು ಪ್ರಾರಂಭಿಸಿದವು. ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಉತ್ಸಾಹದಿಂದ ಸಂಭ್ರಮಿಸುತ್ತಿದ್ದರು. ಅವರಲ್ಲಿ ಒಬ್ಬರು ಮಧ್ಯಪ್ರದೇಶದ (Harpreet Singh Bhatia) ಹರ್ಪ್ರೀತ್ ಸಿಂಗ್ ಭಾಟಿಯಾ. ದೇಶೀಯ ಕ್ರಿಕೆಟ್ನಲ್ಲಿ ಹರ್ಪ್ರೀತ್ ಅವರ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿ ಹಲವಾರು ತಂಡಗಳು ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದವು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಅವರ ಮೇಲೆ ಕಣ್ಣಿಟ್ಟಿದ್ದ ತಂಡಗಳು ಒಂದೇ ಒಂದು ನಕಲಿ ಸುದ್ದಿಯಿಂದಾಗಿ ಅವರನ್ನ ಖರೀದಿಸಲು ನಿರ್ಧರಿಸಿದವು. ಈ ಒಂದು ಸುದ್ದಿ ಪ್ರತಿಭಾವಂತ ಆಟಗಾರನ ಅದ್ಭುತ ವೃತ್ತಿಜೀವನವನ್ನು ಕ್ಷಣಮಾತ್ರದಲ್ಲಿ ಹಳಿತಪ್ಪಿಸಿತು.
2017ರ ಐಪಿಎಲ್ ಹರಾಜಿಗೆ ಸ್ವಲ್ಪ ಮೊದಲು, ಮುಂಬೈನಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಕಾರು ಚಲಾಯಿಸಿದ ಆರೋಪದ ಮೇಲೆ ಮಾಜಿ ಅಂಡರ್-19 ಕ್ರಿಕೆಟಿಗ ಹರ್ಮೀತ್ ಸಿಂಗ್ ಅವರನ್ನು ಬಂಧಿಸಲಾಯಿತು. ಇದು ಗಂಭೀರ ಶಿಸ್ತಿನ ಉಲ್ಲಂಘನೆಯ ವಿಷಯವಾಗಿತ್ತು, ಆದರೆ ಪ್ರಮುಖ ಸುದ್ದಿ ಸಂಸ್ಥೆಯೊಂದು ಪ್ರಮಾದ ಎಸಗಿತು. ಅವರು ಹರ್ಮೀತ್ ಸಿಂಗ್ ಬದಲಿಗೆ ಹರ್ಪ್ರೀತ್ ಸಿಂಗ್ ಭಾಟಿಯಾ ಅವರ ಹೆಸರು ಮತ್ತು ಫೋಟೋವನ್ನು ತಪ್ಪಾಗಿ ತಮ್ಮ ಸುದ್ದಿಯಲ್ಲಿ ಪ್ರಕಟಿಸಿತು.
ಈ ವಿವಾದ ಭುಗಿಲೆದ್ದಾಗ ಹರ್ಪ್ರೀತ್ ಸಿಂಗ್ ಭಾಟಿಯಾ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು ಮತ್ತು ಅನೇಕ ಐಪಿಎಲ್ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡಲು ಉತ್ಸುಕರಾಗಿದ್ದರು. ಆದರೆ, ಹರಾಜಿಗೆ ಸ್ವಲ್ಪ ಸಮಯದ ಮೊದಲು ಈ ಕ್ರಿಮಿನಲ್ ಸುದ್ದಿ ಫ್ರಾಂಚೈಸಿಗಳಲ್ಲಿ ಭಯವನ್ನು ಸೃಷ್ಟಿಸಿತು. ವಿವಾದಾತ್ಮಕ ಆಟಗಾರನನ್ನು ಬಿಡ್ ಮಾಡುವುದು ಬುದ್ಧಿವಂತ ಲಕ್ಷಣವಲ್ಲ ಎಂದು ಯಾರೂ ಅವರನ್ನ ಖರೀದಿಸಲು ಬಯಸಲಿಲ್ಲ. ಪರಿಣಾಮವಾಗಿ, ಹರ್ಪ್ರೀತ್ ಸಿಂಗ್ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಏಜೆನ್ಸಿ ತನ್ನ ತಪ್ಪನ್ನು ಸರಿಪಡಿಸಿ ಸ್ಪಷ್ಟೀಕರಣ ನೀಡುವ ಹೊತ್ತಿಗೆ, ಹರಾಜು ಮುಗಿದಿತ್ತು ಮತ್ತು ಹರ್ಪ್ರೀತ್ ಅವರ ಇಡೀ ವರ್ಷದ ಶ್ರಮ ನೀರಲ್ಲಿ ಹೋಮ ಮಾಡಿದಂತಾಯಿತು.
ಈ ಹಿನ್ನಡೆಯಿಂದ ಚೇತರಿಸಿಕೊಳ್ಳುವುದು ಹರ್ಮೀತ್ಗೆ ಸುಲಭವಾಗಿರಲಿಲ್ಲ, ಆದರೆ ಹರ್ಪ್ರೀತ್ ಬಿಟ್ಟುಕೊಡಲಿಲ್ಲ. ಅವರು ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ರನ್ ಗಳಿಸುವುದನ್ನು ಮುಂದುವರೆಸಿದರು. ಆರು ವರ್ಷಗಳ ನಂತರ ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು. ಐಪಿಎಲ್ 2023ರ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ ಅವರ ಮೇಲೆ ನಂಬಿಕೆ ಇಟ್ಟು ಅವರ ಮೂಲ ಬೆಲೆಗೆ ಅವರನ್ನು ಖರೀದಿಸಿತು. ಇದು ಹರ್ಪ್ರೀತ್ಗೆ ಕೇವಲ ಒಪ್ಪಂದವಲ್ಲ, ಬದಲಿಗೆ ಅವರ ಮುಗ್ಧತೆಗೆ ಪುರಾವೆಯಾಗಿದೆ. ಪಂಜಾಬ್ ಕಿಂಗ್ಸ್ ಪರ ಹರ್ಪ್ರೀತ್ ಸಿಂಗ್ ಭಾಟಿಯಾ 2023ರ ಋತುವಿನಲ್ಲಿ ಕೆಲವು ಪಂದ್ಯಗಳನ್ನು ಆಡಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು 28 ಎಸೆತಗಳಲ್ಲಿ 41 ರನ್ ಗಳಿಸುವ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು, ತಾವೂ ಇನ್ನೂ ಐಪಿಎಲ್ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಸಾಬೀತುಪಡಿಸಿದ್ದರು.
ರೈಲ್ವೆ ಪ್ಲಾಟ್ಫಾರ್ಮ್ಗೆ ಕಾರು ಚಲಾಯಿಸಿದ ಘಟನೆಯ ನಂತರ, ಮುಂಬೈ ಕ್ರಿಕೆಟ್ನಲ್ಲಿ ಹರ್ಮೀತ್ ಸಿಂಗ್ ಅವರ ಅದೃಷ್ಟ ಕುಸಿಯಿತು. ಶಿಸ್ತಿನ ಸಮಸ್ಯೆಗಳು ಮತ್ತು ಅವಕಾಶಗಳ ಕೊರತೆಯು ಅವರ ಭಾರತೀಯ ಕ್ರಿಕೆಟ್ ವೃತ್ತಿಜೀವನವನ್ನು ಬಹುತೇಕ ಕಮರಿಸಿತು. ಭಾರತದಲ್ಲಿ ತಮ್ಮ ಹಾದಿ ಕಷ್ಟಕರವೆಂದು ಕಂಡುಕೊಂಡ ಹರ್ಮೀತ್ ಸಿಂಗ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಅವರು ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿ ಅಮೆರಿಕಾಗೆ ತೆರಳಿದರು.
ಅಮೆರಿಕಕ್ಕೆ ತೆರಳಿದ ನಂತರ, ಅವರು ಸ್ಥಳೀಯ ಕ್ರಿಕೆಟ್ ಲೀಗ್ಗಳಲ್ಲಿ ಆಡಲು ಪ್ರಾರಂಭಿಸಿದರು ಮತ್ತು ತಮ್ಮ ಪ್ರತಿಭೆಯಿಂದ ಶೀಘ್ರದಲ್ಲೇ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದರು. ಹರ್ಮೀತ್ ಸಿಂಗ್ 2024ರ ಟಿ 20 ವಿಶ್ವಕಪ್ನಲ್ಲಿ ಅಮೆರಿಕದ ಪ್ರಾಥಮಿಕ ಸ್ಪಿನ್ ಆಲ್ರೌಂಡರ್ ಆಗಿ ಅವಕಾಶ ಪಡೆದರು. ಈ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಯುಎಸ್ ಇತಿಹಾಸ ನಿರ್ಮಿಸಿತ್ತು.
May 24, 2026 10:37 PM IST













