Last Updated:
Elephants: ಕರ್ನಾಟಕದಿಂದ ಉತ್ತರಾಖಂಡ್ಗೆ ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು, ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿವೆ.
ಉತ್ತರಾಖಂಡ: ಕರ್ನಾಟಕದಿಂದ (Karnataka) ಉತ್ತರಾಖಂಡ್ಗೆ (Uttarakhand) ಕರೆತರಲಾಗಿದ್ದ ಎರಡು ಸಾಕಿದ ಹೆಣ್ಣಾನೆಗಳು (female elephants), ಕಾಡಾನೆಗಳ ಹಿಂಡಿನೊಂದಿಗೆ ಓಡಿ ಹೋಗಿವೆಯಂತೆ. ಅರಣ್ಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತಿದ್ದ ಎರಡು ಹೆಣ್ಣು ಆನೆಗಳು ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿದ್ದು, ನಂತರ ಕಾಣೆಯಾಗಿವೆ ಎಂದು ವರದಿಯಾಗಿವೆ. ಎರಡು ಹೆಣ್ಣಾನೆಗಳು ಕುಮ್ಕಿ ಆನೆಗಳಾಗಿದ್ದು, ಅವುಗಳ ಹೆಸರನ್ನು ಕಪಿಲಾ (Kapila) ಮತ್ತು ತುಂಗಾ (Tunga) ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ (Jim Corbett National Park) ಅವುಗಳನ್ನು ಕರೆತರಲಾಗಿತ್ತು.
ಕಪಿಲ ಮತ್ತು ತುಂಗಾ ಎಂಬ ಹೆಸರಿನ ಆನೆಗಳು ಉತ್ತರಖಾಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಕರ್ನಾಟಕದಿಂದ ಕರೆತರಲಾಗಿತ್ತು. ಈ ಆನೆಗಳು ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಮುತ್ತ ಗಸ್ತು ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದವು, ನಂತರ ಹಲವು ದಿನಗಳ ಹಿಂದೆ ಕಣ್ಮರೆಯಾದವು ಅಂತ ಹೇಳಲಾಗಿದೆ.
ಎರಡು ಆನೆಗಳು ತಮ್ಮ ಶಿಬಿರದಿಂದ ಕಾಣೆಯಾದ ನಂತರ ಅರಣ್ಯ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಪಿಲ ಮತ್ತು ತುಂಗಾ ರಾತ್ರಿಯ ಸಮಯದಲ್ಲಿ ಈ ಪ್ರದೇಶದಲ್ಲಿ ಓಡಾಡುತ್ತಿದ್ದ ಕಾಡು ಆನೆಗಳ ಹಿಂಡಿನೊಂದಿಗೆ ಓಡಿಹೋಗಿವೆ ಅಂತ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಎರಡೂ ಆನೆಗಳು ತರಬೇತಿ ಪಡೆದ ಕುಮ್ಕಿಗಳಾಗಿದ್ದು, ಅರಣ್ಯ ಇಲಾಖೆಯು ಅರಣ್ಯ ಪ್ರದೇಶಗಳಲ್ಲಿ ಗಸ್ತು, ರಕ್ಷಣಾ ಕಾರ್ಯಾಚರಣೆ ಮತ್ತು ವನ್ಯಜೀವಿ ನಿರ್ವಹಣೆಗಾಗಿ ಬಳಸುತ್ತಿರುವ ಸಾಕು ಆನೆಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಜೋಡಿ ಕಾಣೆಯಾಗುವ ಮೊದಲು ಕಾರ್ಬೆಟ್ ಪ್ರದೇಶದಲ್ಲಿ ನಿಯಮಿತವಾಗಿ ಗಸ್ತು ಕರ್ತವ್ಯದಲ್ಲಿ ತೊಡಗಿಸಿಕೊಂಡಿತ್ತು.
ಅಂದಹಾಗೆ ಸಾಕಿದ ಆನೆಗಳು ಕಾಡಾನೆಗಳ ಜೊತೆ ಓಡಿ ಹೋಗುವುದು ಇದೇ ಮೊದಲೇನಲ್ಲ ಎನ್ನಲಾಗಿದೆ. ಈ ಹಿಂದೆಯೂ ಇದೇ ರೀತಿಯ ಘಟನೆಗಳು ಸಂಭವಿಸಿವೆ ಎಂದು ವರದಿ ಹೇಳಿದೆ. ಅಲ್ಲಿ ತರಬೇತಿ ಪಡೆದ ಹೆಣ್ಣು ಆನೆಗಳು ಕಾಡು ಹಿಂಡುಗಳೊಂದಿಗೆ ಬೆರೆತು ತಾತ್ಕಾಲಿಕವಾಗಿ ಅಲೆದಾಡಿದವು, ಕೆಲವು ದಿನಗಳ ನಂತರ ತಮ್ಮ ಶಿಬಿರಗಳಿಗೆ ಮರಳಿದವನ್ನು ಉಲ್ಲೇಖಿಸಲಾಗಿದೆ.
ಸದ್ಯಕ್ಕೆ, ಉದ್ಯಾನವನದ ಆಡಳಿತ ಮಂಡಳಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಆನೆಗಳಿಗಾಗಿ ಹುಡುಕಾಟ ನಡೆಸುತ್ತಿದೆ, ಆದರೆ ಅಧಿಕಾರಿಗಳು ಕಪಿಲಾ ಮತ್ತು ತುಂಗಾ ಯಾವಾಗ ಹಿಂತಿರುಗುತ್ತಾರೆ ಎಂದು ಕಾಯುತ್ತಿದ್ದಾರಂತೆ.
ಇನ್ನು ಈ ವಿಚಾರ ಆನ್ಲೈನ್ ಬಳಕೆದಾರರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ತರಹೇವಾರಿ ಕಾಮೆಂಟ್ಗಳು ಬಂದಿವೆ. ಸರ್ಕಾರಿ ಗಸ್ತು ಆನೆಗಳು ಕಾಡಿನ ಬದಿಯನ್ನು ಆರಿಸಿಕೊಳ್ಳುತ್ತವೆ ಎಂಬ ಕಲ್ಪನೆಗೆ ಅನೇಕರು ಮನೋರಂಜನೆಯೊಂದಿಗೆ ಪ್ರತಿಕ್ರಿಯಿಸಿದರೆ, ಇತರರು ಈ ಜೋಡಿ ಶೀಘ್ರದಲ್ಲೇ ಸುರಕ್ಷಿತವಾಗಿ ಹಿಂತಿರುಗುತ್ತದೆ ಎಂದು ಆಶಿಸಿದರು.
ಅಸಾಮಾನ್ಯ ಘಟನೆಗೆ ಆನೆಗಳ ಸಂಯೋಗದ ಋತುವೇ ಕಾರಣ ಎಂದು ಹೇಳಲಾಗುತ್ತಿದೆ. ಕಪಿಲ ಮತ್ತು ತುಂಗಾವನ್ನು ಪಳಗಿಸಿ ತರಬೇತಿ ನೀಡಲಾಗಿದ್ದು, ಅರಣ್ಯ ಇಲಾಖೆಯು ರಕ್ಷಣಾ ಕಾರ್ಯಾಚರಣೆ, ಗಸ್ತು ಮತ್ತು ಇತರ ಕೆಲಸಗಳಿಗಾಗಿ ಬಳಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವು 2016 ರಿಂದ ಕಾರ್ಬೆಟ್ನ ಭದ್ರತಾ ವ್ಯವಸ್ಥೆಯ ಭಾಗವಾಗಿವೆ.
2007 ರಲ್ಲಿ, ಒಂಟಿ ಕಾಡು ಆನೆಯೊಂದು ಪಶ್ಚಿಮ ಬಂಗಾಳದಲ್ಲಿ ಸರ್ಕಸ್ ಸ್ಟೇಬಲ್ ಮೇಲೆ ದಾಳಿ ಮಾಡಿ, ಸಾವಿತ್ರಿ ಎಂಬ ಹೆಣ್ಣು ಆನೆಯನ್ನು ಬಿಡುಗಡೆ ಮಾಡಿ, ಸಂಯೋಗದ ಸಮಯದಲ್ಲಿ ತನ್ನೊಂದಿಗೆ ಕರೆದುಕೊಂಡು ಹೋಯಿತು. ಸಾವಿತ್ರಿ ಕಾಡು ಗಂಡು ಆನೆಗಿಂತ ನಾಲ್ಕು ವರ್ಷ ದೊಡ್ಡವಳಾಗಿದ್ದಳು. ಸಾವಿತ್ರಿಯ ಒಟ್ಟು ಮೌಲ್ಯ 4 ಲಕ್ಷ ರೂ.ಗಳಾಗಿದ್ದು, ಆಕೆಯ ಪಲಾಯನವು ಒಲಿಂಪಿಕ್ ಸರ್ಕಸ್ನ ವ್ಯವಸ್ಥಾಪಕರಿಗೆ ಟೆನ್ಶನ್ ಉಂಟು ಮಾಡಿತ್ತು.
Uttarakhand (Uttaranchal)
May 30, 2026 10:49 PM IST













