Delhi Congress Protest: ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್ ಹೈಡ್ರಾಮಾ! ರಾಹುಲ್ ಗಾಂಧಿಯ ಡಿಮ್ಯಾಂಡ್​ಗಳೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಹುಲ್​ ಗಾಂಧಿ


Last Updated:

ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧರಣಿ ಕುಳಿತಿದ್ದ ಎಲ್ಲರನ್ನು ಪ್ರಧಾನಿ ಮನೆಯಿಂದ ತೆರವುಗೊಳಿಸಲಾಯಿತು. ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದವರಿಗೆ ಶಾಕ್‌ ಕೊಟ್ಟಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ದೆಹಲಿ: ಇವತ್ತು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಹಂಗಾಮ ನಡೆದು ಹೋಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಕಾಂಗ್ರೆಸ್​ ಪ್ರತಿಭಟನೆ (Congress Protest) ಕಿಚ್ಚೆಬ್ಬಿಸಿದೆ. ಸಿಜೆಪಿ (CJP) ಪ್ರತಿಭಟನೆಯ ವೇಳೆ ಪೊಲೀಸರ ಲಾಠಿಚಾರ್ಜ್​ ಖಂಡಿಸಿ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಇಂದು ಬೀದಿಗಳಿದಿದ್ದರು. ಪ್ರಧಾನಿ ನಿವಾಸದ (PM House) ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದರು. ಆದ್ರೆ, ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದ ರಾಹುಲ್​ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧರಣಿ ಕುಳಿತಿದ್ದ ಎಲ್ಲರನ್ನು ಪ್ರಧಾನಿ ಮನೆಯಿಂದ ತೆರವುಗೊಳಿಸಲಾಯಿತು. ಬಲವಂತವಾಗಿ ವಶಕ್ಕೆ ಪಡೆದ ದೆಹಲಿ ಪೊಲೀಸರು, ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದವರಿಗೆ ಶಾಕ್‌ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ, ಕೇಂದ್ರ ಸರ್ಕಾರದಿಂದ ಸಚಿವ ಜಿತೇಂದ್ರ ಸಿಂಗ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ರು. ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ರು. ಆದ್ರೆ, ಪ್ರತಿಭಟನೆ ಅಂತ್ಯಗೊಳಿಸಲು ಚಕಾರ ಎತ್ತಿದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ಮುಂದೆ ಸಾಲು ಸಾಲು ಬೇಡಿಕೆಗಳನ್ನಿಟ್ಟರು.

ಕಾಂಗ್ರೆಸ್​​ ಬೇಡಿಕೆಗಳೇನು?

  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
  • ಸದನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಉತ್ತರ
  • ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರದ ತನಿಖೆ
  • ವಿದ್ಯಾರ್ಥಿಗಳ ಚಿಕಿತ್ಸೆ, ಶಿಕ್ಷಣಕ್ಕೆ ಪರಿಹಾರ
  • ನೀಟ್ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚೆ

ಇನ್ನು ರಾಹುಲ್ ಗಾಂಧಿ ಸಂದೇಶ ಹೊತ್ತು ಹೋಗಿದ್ದ ಸಚಿವ ಜಿತೇಂದ್ರ ಸಿಂಗ್, ರಾಹುಲ್ ಗಾಂಧಿ ವಿರುದ್ಧವೇ ಹರಿಹಾಯ್ದರು. ಸದನದಲ್ಲಿ ಚರ್ಚೆಗಷ್ಟೇ ಕೇಳಿದ್ದ ರಾಹುಲ್ ಗಾಂಧಿ, ಇದೀಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎಂಬ ಹೊಸ ವರಸೆ ತೆಗೆದಿದ್ದಾರೆ ಎಂದು ಆರೋಪಿಸಿದ್ರು. ಈ ಬಗ್ಗೆ ಮಾತನಾಡಿರುವ ಅವರು, ಬಹಳ ವಿನಮ್ರತೆಯಿಂದ ರಾಹುಲ್ ಮಾತು ಕೇಳಿಸಿಕೊಂಡೆ ನೀಟ್ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಬೇಕೆಂದು ಕೇಳಿದರು ಚರ್ಚೆಗೆ ಸರ್ಕಾರ ಸಿದ್ಧ ಎಂದರೆ ಧರಣಿ ವಾಪಸ್ ಪಡೀತೇವೆ ಅಂದ್ರು 2-3 ಬಾರಿ ಕೇಳಿದಾಗಲೂ ರಾಹುಲ್ ಚರ್ಚೆ ಬಗ್ಗೆಯೇ ಹೇಳಿದ್ರು ಸರ್ಕಾರದ ಪ್ರಮುಖ ನಾಯಕರೊಂದಿಗೆ ಚರ್ಚೆ ಮಾಡಿದೆ ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳಿತು. ರಾಹುಲ್‌‌ಗೆ ಈ ಬಗ್ಗೆ ಹೇಳಿದಾಗ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಬೇಡಿಕೆ ಇಟ್ಟರು ಎಂದು ಹೇಳಿದರು.

ಮೈಕ್‌‌ಗಳನ್ನೂ ಆಫ್‌ ಮಾಡಿದ್ದಾರೆ

ಇನ್ನು ಬೆಳಗ್ಗೆ ಎರಡೂ ಸದನಗಳಲ್ಲಿ ಕಾಂಗ್ರೆಸ್‌ ಮತ್ತು ಪ್ರತಿಪಕ್ಷದ ನಾಯಕರು ಕಾಕ್ರೋಚ್‌ ಪಕ್ಷದ ಹೋರಾಟ ಮತ್ತು ಲಾಠಿಚಾರ್ಜ್‌ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರು. ಆದ್ರೆ 2 ಸದನದಲ್ಲೂ ಅವಕಾಶ ಕೊಡ್ಲಿಲ್ಲ. ಸದನದ ಒಳಗೇ ಕೂಗಾಟ ಜೋರಾಗ್ತಿದ್ದಂತೆ ಅಧಿವೇಶನವನ್ನ ನಾಳೆಗೆ ಮುಂದೂಡಲಾಗಿದೆ. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಎದ್ದು ನಿಂತು ನೀಟ್ ಅನ್ನುತ್ತಲೇ ಕಲಾಪ ಮುಂದೂಡಲಾಯಿತು. ಮೈಕ್‌‌ಗಳನ್ನೂ ಆಫ್‌ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಇನ್ನು ನಿನ್ನೆ ನಡೆದ ಸಂಸತ್‌ ಚಲೋ ರ್ಯಾಲಿಯಲ್ಲಿ 150ಕ್ಕೂ ಹೆಚ್ಚು ಜನರನ್ನ ದೆಹಲಿ ಪೊಲೀಸರು ಬಂಧಿಸಿದ್ರು. ಇದ್ರಲ್ಲಿ 17 ಸಿಜೆಪಿ ಸದಸ್ಯರಿಗೆ ಇವತ್ತು ದೆಹಲಿ ಮಾಜಿ ಸಿಎಂ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಕೋರ್ಟ್‌ಗೆ ಬಂದು ಜಾಮೀನಿಗೆ ಶ್ಯೂರಿಟಿ ಕೊಟ್ಟು ರಿಲೀಸ್‌ ಮಾಡಿಸಿದ್ದಾರೆ ಕೇಜ್ರಿವಾಲ್‌. ಹೀಗೆ ದೆಹಲಿಯಲ್ಲಿ ಒಂದೆಡೆ ಸಿಜೆಪಿ ಮತ್ತೊಂದೆಡೆ ಕಾಂಗ್ರೆಸ್‌ನವರಿಂದ ಹೋರಾಟಗಳು ನಡೀತಿದ್ದು, ಇದನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ನೋಡಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed