Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್​ ಅಪ್ಡೇಟ್​! ಸರ್ಜರಿ ಡೇಟ್​​ ತಿಳಿಸಿದ ಸಿವಿ ನಾಗೇಶ್​! | Lawyers inform court of actor Darshan surgery date | | ACTPnews

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್​ ಅಪ್ಡೇಟ್​! ಸರ್ಜರಿ ಡೇಟ್​​ ತಿಳಿಸಿದ ಸಿವಿ ನಾಗೇಶ್​! | Lawyers inform court of actor Darshan surgery date |


Last Updated:

ಜನರಲ್ ಅನಸ್ತೇಷಿಯಾ ನೀಡಲು ತಯಾರಿ‌ಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ‌ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್​ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್​ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಕೋರ್ಟ್​ಗೆ ದರ್ಶನ್​ ಹೆಲ್ತ್ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ದರ್ಶನ್ ಸರ್ಜರಿ ಡೇಟ್ ಕೂಡ ತಿಳಿಸಿದ್ದಾರೆ. 

ದರ್ಶನ್ ಹೆಲ್ತ್ ಅಪ್ಡೇಟ್ ಕೊಟ್ಟ ಸಿವಿ ನಾಗೇಶ್​

ಮಧ್ಯಂತರ ಜಾಮೀನು ನೀಡುವಾಗ ನ್ಯಾಯಾಲಯ ವಿಧಿಸಿರುವ ಷರತ್ತು ಉಲ್ಲಂಘಿಸಿಲ್ಲ ಎಂದು ಸಿವಿ ನಾಗೇಶ್ ಹೇಳಿದ್ರು. ಜನರಲ್ ಅನಸ್ತೇಷಿಯಾ ನೀಡಲು ತಯಾರಿ‌ಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ‌ ನೀಡಿದ್ದಾರೆ. ಸ್ಟಿರಾಯ್ಡ್ ಇಂಜೆಕ್ಷನ್‌ ನೀಡಲಾಗ್ತಿದೆ ಎಂದು ಕೋರ್ಟ್​ಗೆ ತಿಳಿಸಿದ್ರು.

ಡಿಸೆಂಬರ್​ 11ರಂದು ಆಪರೇಷನ್

ದರ್ಶನ್​ ಆಪರೇಷನ್​ಗೆ ದಿನಾಂಕ ನಿಗದಿಯಾಗಿದೆ ಎಂದು ಹೇಳಿದ್ರಿ ಅಲ್ವಾ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಸಿವಿ ನಾಗೇಶ್ ಅವರು ಡಿಸೆಂಬರ್​ 11ರಂದು ಆಪರೇಷನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಹೇಳಿದ್ರು.

ದಿನ ಕಳೆದಿದೆ ಅಂತ ಅಪರೇಷನ್ ಮಾಡೋಕೆ ಆಗಲ್ಲ!

ಫಿಸಿಯೋಥೆರಪಿ ಹಾಗೂ ವ್ಯಾಯಾಮ‌ ಮಾಡಿಸಲಾಗ್ತಿದೆ. ಮೂರು ವಾರ ಆಯ್ತು ನಾಲ್ಕು ವಾರ ಆಯ್ತು ಆಪರೇಷನ್ ಮಾಡಿಸಿ ಅಂತ ಹೇಳೋಕೆ‌ ಆಗಲ್ಲ ಡಾಕ್ಟರ್ ಹೇಳಿದಂತೆ ನಾವು ಆಪರೇಷನ್ ‌ಮಾಡಿಸಬೇಕು ಎಂದು ಸಿವಿ ನಾಗೇಶ್ ಹೇಳಿದ್ರು.

ಮಧ್ಯಂತರ ಜಾಮೀನಿನ ಷರತ್ತು ಉಲ್ಲಂಘನೆ ಆಗಿಲ್ಲ

ಡಿಸೆಂಬರ್‌ 11ಕ್ಕೆ ವೈದ್ಯರು ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಲು ದಿನಾಂಕ ನಿಗದಿಗೊಳಿಸಿದ್ದಾರೆ. ಮಧ್ಯಂತರ ಜಾಮೀನಿನ ಷರತ್ತು ಉಲ್ಲಂಘನೆ ಆಗಿಲ್ಲ. ವೈದ್ಯರಿಗೆ ನಿರ್ದಿಷ್ಟ ದಿನದಂದು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಿವಿ ನಾಗೇಶ್ ಹೇಳಿದ್ರು.

ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಕೈಗೆತ್ತಿಕೊಂಡಿತ್ತು. ದರ್ಶನ್ ಪರ-ವಿರುದ್ಧ ವಕೀಲರು ವಾದ ಮಂಡಿಸಿದ್ರು. ಸುದೀರ್ಘ ವಾದ ಆಲಿಸಿದ ನ್ಯಾಯಧೀಶರು ತೀರ್ಪು ಕಾಯ್ದಿರಿಸಿದ್ದಾರೆ. ದಿನಾಂಕ ನಿಗದಿ ಮಾಡದೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ದರ್ಶನ್​ ಮಧ್ಯಂತರ ಜಾಮೀನು ಮುಂದುವರಿಕೆ

ನಟ ದರ್ಶನ್​ಗೂ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ. ತೀರ್ಪು ಆದೇಶ ಹೊರಬೀಳುವವರೆಗೂ ನಟ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದುವರಿಕೆ ಆಗಲಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್​, ಸದ್ಯ ಬೆಂಗಳೂರಿನ ಬಿಜಿಎಸ್​ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೇಣುಕಾಸ್ವಾಮಿ ಎದೆಗೆ ಒದ್ರಾ ದರ್ಶನ್​!

ಹೈಕೋರ್ಟ್​ನಲ್ಲಿ ನಟ ದರ್ಶನ್​ ಬೇಲ್​ ಅರ್ಜಿ ವಿಚಾರಣೆ ನಡೆದಿದ್ದು, ಎಪಿಪಿ ಪ್ರಸನ್ನ ಕುಮಾರ್​ ಅವರು ಪ್ರಬಲ ಪ್ರತಿವಾದ ಮಂಡಿಸಿದ್ರು. ರೇಣುಕಾಸ್ವಾಮಿ ಎದೆಯನ್ನ ದರ್ಶನ್ ತಿಳಿದಿದ್ದಾರೆ ಎನ್ನುವುದಕ್ಕೆ ​ ಸಾಕ್ಷಿ ಕೂಡ ಇದೆ ಎಂದು ಕೋರ್ಟ್​ಗೆ ತಿಳಿಸಿದ್ರು.

ಫೋಟೋಗಳೇ ಪ್ರಬಲ ಸಾಕ್ಷಿ

ದರ್ಶನ್ ಪಟ್ಟಣಗೆರೆ ಶೆಡ್​ನಲ್ಲಿ​ ರೇಣುಕಾಸ್ವಾಮಿ ಮೇಲೆ ಹೇಗೆಲ್ಲಾ ಹಲ್ಲೆ ಮಾಡಿದ್ದಾರೆ ಎನ್ನುವುದ ಪುನೀತ್ ಬಾಯ್ಬಿಟ್ಟಿದ್ದಾನೆ ಎಂದು ಸಾಕ್ಷಿ ಹೇಳಿಕೆಯನ್ನು ಎಪಿಪಿ ಓದಿ ಹೇಳಿದ್ರು. ಫೋಟೋಗಳನ್ನು ತೋರಿಸಿದ್ದೀರಾ ಎಂದು ಜಡ್ಜ್​ ಕೇಳಿದ್ರು. ಇದಕ್ಕೆ ಉತ್ತರಿಸಿದ ಎಸ್​ಪಿಪಿ ಹೌದು ಎಂದಿದ್ದಾರೆ.

 (ವರದಿ: ಗಂಗಾಧರ್​, ನ್ಯೂಸ್​ 18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed