Last Updated:
ಸ್ವಿಟ್ಜರ್ಲೆಂಡ್ ನಲ್ಲಿ ಡಾ. ಸತ್ಯನಾರಾಯಣ ರಾಜು ಅವರ ಭರತನಾಟ್ಯ ರಾಮಕಥೆ ಜಿನೀವಾ, ಜ್ಯೂರಿಚ್ ನಲ್ಲಿ ಪ್ರದರ್ಶನ, ಸ್ವಿಸ್ ಪ್ರೇಕ್ಷಕರ ಮೆಚ್ಚುಗೆ, ಭಾರತೀಯ ಕಲೆಗೆ ಜಾಗತಿಕ ಗೌರವ.
ಭಾರತೀಯ ಸಂಸ್ಕೃತಿಯ ಕಂಪು ಇದೀಗ ಆಲ್ಪ್ಸ್ ಪರ್ವತಗಳ ನಾಡಾದ ಸ್ವಿಟ್ಜರ್ಲೆಂಡ್ ನಲ್ಲಿ (Switzerland) ಮೇಳೈಸಿದೆ. ಪ್ರಖ್ಯಾತ ಭರತನಾಟ್ಯ (Bharatanatyam) ಕಲಾವಿದ ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು ಅವರು ಪ್ರಸ್ತುತಪಡಿಸಿದ ‘ರಾಮಕಥೆ’ (Ramakathe) ಕಾರ್ಯಕ್ರಮವು (Program) ಸ್ವಿಸ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಭಾರತೀಯ ಕಲೆಗಳ ತಾಕತ್ತು ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ್ದು, ವಿದೇಶಿ ಮಣ್ಣಿನಲ್ಲಿ ರಾಮಾಯಣದ ಕಥಾನಕ ಹೊಸ ಸಂಚಲನ ಸೃಷ್ಟಿಸಿದೆ.
ಡಾ. ಶ್ರೀಮತಿ ಉಷಾ ಆರ್.ಕೆ. ಅವರ ಪರಿಕಲ್ಪನೆಯಲ್ಲಿ ಅರಳಿದ ಈ ‘ರಾಮಕಥೆ’ಗೆ ಡಿ.ಎಸ್. ಶ್ರೀವತ್ಸ, ಎಸ್.ವಿ. ಬಾಲಕೃಷ್ಣ, ರಘುನಂದನ್ ರಾಮಕೃಷ್ಣ ಮತ್ತು ಗೋಪಾಲ್ ಅವರ ಸಂಗೀತ ಸಂಯೋಜನೆಯು ಜೀವ ತುಂಬಿತು. ಓಂಕಾರ ನೃತ್ಯ ಜಿನೀವಾ ಮತ್ತು ಸ್ವಿಸ್ ಇಂಡಿಯನ್ ಫೈನ್ ಆರ್ಟ್ಸ್ ಅಸೋಸಿಯೇಷನ್ (SIFAA) ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಶ್ರೀಮತಿ ಸುಜಾತಾ ವೆಂಕಟೇಶ್ ಮತ್ತು ಶ್ರೀ ವೆಂಕಟೇಶ್ ಅವರ ಶ್ರಮ ಅಪಾರವಾದದ್ದು.
ಈ ಪ್ರದರ್ಶನ ಕೇವಲ ಮನರಂಜನೆಯಾಗಿರಲಿಲ್ಲ, ಇದು ಅಂತರಸಾಂಸ್ಕೃತಿಕ ಸೇತುವೆ. ಸದಾಚಾರ, ಭಕ್ತಿ, ಧೈರ್ಯ ಮತ್ತು ಕರುಣೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು ರಾಮಾಯಣದ ಮೂಲಕ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವುದು ಭಾರತೀಯ ಕಲೆಗೆ ಸಿಕ್ಕ ಜಯ. ಭಾರತೀಯ ಶಾಸ್ತ್ರೀಯ ನೃತ್ಯವು ಇಂದಿಗೂ ಎಷ್ಟು ಪ್ರಸ್ತುತ ಮತ್ತು ಶಕ್ತಿಯುತ ಎಂಬುದನ್ನು ಸತ್ಯನಾರಾಯಣ ರಾಜು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Bangalore Rural,Karnataka
Jun 18, 2026 10:37 AM IST













