Last Updated:
ಬೆಂಗಳೂರು ಮತ್ತು ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ. ಜುಲೈ 9ರಂದು ಬೆಂಗಳೂರಿನ ಹೆಣ್ಣೂರು ರಸ್ತೆ ವ್ಯಾಪ್ತಿಯಲ್ಲಿ, ಜುಲೈ 8ರಂದು ಕುಮಟಾದ ಹಲವು ಭಾಗಗಳಲ್ಲಿ ಪವರ್ ಕಟ್. ಸಾರ್ವಜನಿಕರು ಸಹಕರಿಸಲು ಮನವಿ.
ಬೆಂಗಳೂರು: ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮತ್ತು ಕುಮಟಾ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳು ಮಾಹಿತಿ ನೀಡಿವೆ. ಸಾರ್ವಜನಿಕರು (Public) ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ಕ್ಲೇವ್, ಕ್ರಿಸ್ತು ಜಯಂತಿ ಕಾಲೇಜು ಸುತ್ತಮುತ್ತ, ನಾಗರಗಿರಿ ಟೌನ್ಶಿಪ್, ಅಂಜನಪ್ಪ ಲೇಔಟ್, ಕನಕಶ್ರೀ ಲೇಔಟ್, ವಡ್ಡರಪಾಳ್ಯ, ಆತ್ಮ ವಿದ್ಯಾ ನಗರ, ಮಂಜುನಾಥ ನಗರ ಮತ್ತು ಅಗರ ಗ್ರಾಮದಂತಹ ಪ್ರದೇಶಗಳು ಈ ಪಟ್ಟಿಯಲ್ಲಿ ಸೇರಿವೆ.
ಹೆಸ್ಕಾಂ ಕುಮಟಾ ಉಪವಿಭಾಗದ 110 ಕೆ.ವಿ. ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ನಡೆಯುತ್ತಿರುವುದರಿಂದ, ಜುಲೈ 8ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಗೋಕರ್ಣ, ಮಾದನಗೇರಿ, ಮಿರ್ಜಾನ್, ಕೋಡ್ಕಣಿ ಹಾಗೂ ಸಂತೆಗುಳಿ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಲ್ಲದೆ, ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿಯಿಂದಾಗಿ ಎಪಿಎಂಸಿ, ಹೊನ್ಮಾವ, ಕಂಬಾರಮಕ್ಕಿ ಹಾಗೂ ಬಗ್ಗೋಣ ಭಾಗಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರುವುದಿಲ್ಲ.
ಈ ಅವಧಿಯಲ್ಲಿ ವಿದ್ಯುತ್ ಇರುವುದಿಲ್ಲವಾದ್ದರಿಂದ, ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಬೆಸ್ಕಾಂ ಅಥವಾ ಹೆಸ್ಕಾಂ ಕಚೇರಿಗಳನ್ನು ಸಂಪರ್ಕಿಸಿ. ಅನಿವಾರ್ಯ ತಾಂತ್ರಿಕ ಕಾರಣಗಳಿಂದಾಗಿ ಈ ವ್ಯತ್ಯಯ ಉಂಟಾಗುತ್ತಿದ್ದು, ನಾಗರಿಕರು ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.
Bangalore [Bangalore],Bangalore,Karnataka













