Bangladeshi Citizen: ಕೇರಳದ ಒಂದೇ ಜಿಲ್ಲೆಯಲ್ಲಿ 16 ಬಾಂಗ್ಲಾದೇಶಿಯರ ಬಂಧನ; ‘ಐ ಲವ್ ಪಾಕಿಸ್ತಾನ್’ ಬರೆದವರು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೇಸ್


Last Updated:

ಬಾಂಗ್ಲಾದೇಶಿಯರು ಅತಿಥಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು.

ಕೇಸ್
ಕೇಸ್

ಎರ್ನಾಕುಳಂ: ನಕಲಿ ದಾಖಲೆಗಳೊಂದಿಗೆ ಕೇರಳದ (Bangladeshi Citizen) ಕೊಚ್ಚಿಯಲ್ಲಿ ತಂಗಿದ್ದ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.

ಕೊಚ್ಚಿಯಲ್ಲಿ ನಕಲಿ ದಾಖಲೆಗಳೊಂದಿಗೆ ಆರು ಬಾಂಗ್ಲಾದೇಶಿ ಪ್ರಜೆಗಳು ಇದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿತ್ತು. ಬಂಧಿತ ಬಾಂಗ್ಲಾದೇಶಿ ಪ್ರಜೆಗಳನ್ನು ರಾಕಿವ್ ಶಾಬಾ, ಮೊಹಮ್ಮದ್ ಸೊಹೈಲ್ ಫರಾಜ್, ತಾರೆಕ್, ಸೊಗಿರ್, ಮೈಧಿ ಹಸಿದಾ ಮತ್ತು ಮೊಹಮ್ಮದ್ ಅಗಿನ್ ಎಂದು ಗುರುತಿಸಲಾಗಿದೆ. ಇವರನ್ನು ಕೊಚ್ಚಿಯ ತ್ರಿಪುನಿತುರದಲ್ಲಿ ಬಂಧಿಸಲಾಗಿದೆ.

ತ್ರಿಪುನಿತುರಾದ ಎರೂರ್‌ನ ಕೊಝಿವೆಟ್ಟುವೇಲಿಯಲ್ಲಿ ಎರಡು ಬಾಡಿಗೆ ಮನೆಗಳಲ್ಲಿ ಹಡಗುಕಟ್ಟೆಯಲ್ಲಿ ಕೆಲಸ ಮಾಡುವ ಜನರು ಮತ್ತು ಕೆಲವು ಬಾಂಗ್ಲಾದೇಶಿಗಳು ವಾಸಿಸುತ್ತಿದ್ದಾರೆ ಎಂದು ರಹಸ್ಯ ತನಿಖೆಯಿಂದ ತಿಳಿದು ಬಂದಿದೆ. ಇದರ ಆಧಾರದ ಮೇಲೆ, ತನಿಖಾ ತಂಡವು ಆ ಮನೆಗೆ ತಲುಪಿ ದಾಳಿ ನಡೆಸಿದೆ.

ಬಾಂಗ್ಲಾದೇಶಿಯರು ಅತಿಥಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು.

ಇದನ್ನೂ ಓದಿ: Theft Case: ಬೆತ್ತಲೆಯಾಗಿ ಹೋಟೆಲ್‌ಗೆ ನುಗ್ಗಿ, 12 ಮೊಟ್ಟೆ ಆಮ್ಲೆಟ್ ತಿಂದ ಕಳ್ಳ ಪೊಲೀಸ್ ಬಲೆಗೆ

ಹಡಗಿನ ಉಕ್ಕಿನ ಹಾಳೆಯ ಮೇಲೆ ಚೂಪಾದ ವಸ್ತುವನ್ನು ಬಳಸಿ ‘ಐ ಲವ್ ಪಾಕಿಸ್ತಾನ’ ಎಂಬ ಪದಗಳನ್ನು ಬರೆಯಲಾಗಿತ್ತು. ಪ್ರತಿದಿನ 250 ರಿಂದ 300 ಕ್ಕೂ ಹೆಚ್ಚು ಕಾರ್ಮಿಕರು ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ ಹೆಚ್ಚಿನವರು ಬಂಗಾಳ ಮತ್ತು ಒಡಿಶಾ ರಾಜ್ಯಗಳವರು. ಅವರಲ್ಲಿ ಬಾಂಗ್ಲಾದೇಶಿಯರು ಇದ್ದಾರೆ ಎಂಬ ಅನುಮಾನದ ನಂತರ ನೌಕಾ ಗುಪ್ತಚರ ತನಿಖೆ ಆರಂಭಿಸಿತು.

ಪಾಕಿಸ್ತಾನ ಪರ ಬರವಣಿಗೆಯ ಹಿಂದೆ ಅವರ ಕೈವಾಡವಿದೆ ಎಂದು ತನಿಖೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಇನ್ನು ಹೆಚ್ಚಿನ ತನಿಖೆಯನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ ನಡೆಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed