Last Updated:
ಪುಷ್ಪ ಸಿನಿಮಾದ ಮೂಲಕವೂ ಗಮನ ಸೆಳೆದಿರುವ ಅನಸೂಯಾ, ತಮ್ಮ ನೇರ ಹಾಗೂ ಮುಕ್ತ ಮಾತುಗಳಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ ಮಹಿಳೆಯರ ಆಚರಣೆಗಳು ಮತ್ತು ಸಂಪ್ರದಾಯಗಳ ಕುರಿತು ನಟಿ ಕೇಳಿರುವ ಪ್ರಶ್ನೆಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಗಂಡ ಸತ್ತ ಬಳಿಕ ಮಹಿಳೆಯರು ಕುಂಕುಮ, ಬಳೆಗಳನ್ನು ಏಕೆ ತೆಗೆದುಹಾಕಬೇಕು? ಈ ಸಂಪ್ರದಾಯದ ಹಿಂದಿನ ಕಾರಣವೇನು? ಎಂಬ ಪ್ರಶ್ನೆಯನ್ನು ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಎತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪುಷ್ಪ ಸಿನಿಮಾದ ಮೂಲಕವೂ ಗಮನ ಸೆಳೆದಿರುವ ಅನಸೂಯಾ, ತಮ್ಮ ನೇರ ಹಾಗೂ ಮುಕ್ತ ಮಾತುಗಳಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ ಮಹಿಳೆಯರ ಆಚರಣೆಗಳು ಮತ್ತು ಸಂಪ್ರದಾಯಗಳ ಕುರಿತು ನಟಿ ಕೇಳಿರುವ ಪ್ರಶ್ನೆಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.














