Abhijeet Dipke: ‘ಕಾಕ್ರೋಚ್’ ಸಂಸ್ಥಾಪಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ಹೆಣ್ಣು ಕೊಡಲು ನಾ ಮುಂದೆ ತಾ ಮುಂದೆ ಅಂತ ಬಂದ ‘ಮಾವಂದಿರು’! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಜೆಪಿ ಸಂಸ್ಥಾಪಕ ಅಭಿಜಿತ್​ ದೀಪ್ಕೆ


Last Updated:

ದೇಶವ್ಯಾಪಿ ಪ್ರತಿಭಟನೆಯ ಕಿಚ್ಚೆಬ್ಬಿಸಿದ್ದ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪಕೆ ಅವರ ವೈಯಕ್ತಿಕ ಜೀವನದ ಕುರಿತು ಆಸಕ್ತಿದಾಯಕ ಸಂಗತಿಯೊಂದು ಹೊರಬಿದ್ದಿದೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್​ ದೀಪ್ಕೆ
ಸಿಜೆಪಿ ಸಂಸ್ಥಾಪಕ ಅಭಿಜಿತ್​ ದೀಪ್ಕೆ

ಕಾಕ್ರೋಚ್​ ಜನತಾ ಪಾರ್ಟಿ (Cockroach Janata Party) ಸದ್ಯ ಈ ಪಕ್ಷ ಕಳೆದ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ವಿಡಂಬನಾತ್ಮಕವಾಗಿ ಹುಟ್ಟಿದ ಸಿಜೆಪಿ, ಧಮೇಂದ್ರ ಪ್ರಧಾನ್ (ಧಮೇಂದ್ರ ಪ್ರಧಾನ್​)​ ಅವರ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಮಾರು 35 ದಿನಗಳ ಹೋರಾಟ ಮಾಡಿ ಕೇವಲ ರಾಷ್ಟ್ರ ರಾಜಧಾನಿ ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆಯ ಕಿಚ್ಚೆಬ್ಬಿಸಿದ್ದ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪಕೆ ಅವರ ವೈಯಕ್ತಿಕ ಜೀವನದ ಕುರಿತು ಆಸಕ್ತಿದಾಯಕ ಸಂಗತಿಯೊಂದು ಹೊರಬಿದ್ದಿದೆ. ಯುವ ನಾಯಕರಾಗಿ ಹೊರಹೊಮ್ಮಿರುವ ಅಭಿಜಿತ್​ ದೀಪ್ಕೆಗೆ ಈಗ ಮದುವೆ ಪ್ರಸ್ತಾಪಗಳ ಮಹಾಪೂರವೇ ಹರಿದುಬರುತ್ತಿದೆಯಂತೆ.

ಅಭಿಜೀತ್ ದಿಪ್ಕೆ, ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಹೆಸರು ಅಂದ್ರೆ ತಪ್ಪಾಗಲಾರದು. ಸೋಶಿಯಲ್​ ಮೀಡಿಯಾದಲ್ಲಿ ಒಂದು ಮಿಮ್​ ಪೇಜ್​ ಆಗಿ ಹುಟ್ಟಿಕೊಂಡ ಸಿಜೆಪಿ ಪಾರ್ಟಿ, ನೀಟ್​ ಅಕ್ರಮ ಕುರಿತು ಧ್ವನಿ ಎತ್ತಿ, ಪ್ರತಿಭಟನೆ ನಡೆಸಿತ್ತು. ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿಯುವಂತೆ ಮಾಡಿತ್ತು. ಕೊನೆಗೆ ಸಿಜೆಪಿ ಪಕ್ಷದ ಬೇಡಿಕೆಯಂತೆ ಧಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಲೇ ಬೇಕಾಯ್ತು.
ಇದನ್ನೂ ಓದಿ: Cauvery Water: ಕರ್ನಾಟಕ ಬಂದ್, ಬಂದ್, ಬಂದ್? ಕಾವೇರಿ ನೀರು ಬಿಟ್ರೆ ಕರುನಾಡೇ ಸ್ತಬ್ಧವಾಗೋದು ಪಕ್ಕಾ

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಅಭಿಜಿತ್ ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಮಾತನಾಡಿದ್ದು, ‘ಸಿಜೆಪಿ ಪ್ರತಿಭಟನೆ ಆರಂಭವಾಗುವುದಕ್ಕೂ ಮುಂಚೆಯೇ ನಮಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು, ಆದರೆ ಈಗ ಮತ್ತಷ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ. ಅಭಿಜಿತ್ ಬಾಸ್ಟನ್‌ನಲ್ಲಿದ್ದಾಗ ಕುಟುಂಬದವರು ಮದುವೆ ವಿಷಯ ಪ್ರಸ್ತಾಪಿಸಿದ್ದರಾದರೂ, ಆದ್ರೆ, ಆತ ಒಪ್ಪಿರಲಿಲ್ಲ, ಇದೀಗ ಅಭಿಜಿತ್​ ತಿಂಗಳುಗಳ ನಂತರ ಮನೆಗೆ ವಾಪಸ್​ ಆಗಿದ್ದು, ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸಿ ಆತನೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಡುವುದಾಗಿ ತಾಯಿ ಮಾಹಿತಿ ನೀಡಿದ್ದಾರೆ.

ಅಭಿಜಿತ್​ ದೀಪ್ಕೆ ಯಾರು?

CJP ಅನ್ನು ಮೇ 2026ರಲ್ಲಿ ಅಭಿಜೀತ್ ದೀಪ್ಕೆ (30) ಸ್ಥಾಪಿಸಿದರು. ಅವರು ಅಮೆರಿಕದ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಪದವಿ ಪಡೆದ ಭಾರತೀಯ ವಿದ್ಯಾರ್ಥಿ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಉದ್ಯೋಗವಿಲ್ಲದ ಯುವಕರನ್ನು ‘ಪರಾಸೈಟ್’ (ಪರಾವಲಂಬಿ ಕೀಟಗಳು) ಮತ್ತು ‘ಕಾಕ್ರೋಚ್’ (ಜಿರಳೆಗಳು) ಎಂದು ಹೋಲಿಸಿದ್ದರು. ಅವರ ಮಾತು ವಿವಾದ ಆಗ್ತಿದ್ದಂತೆ ನಂತರ ಸ್ಪಷ್ಟನೆ ನೀಡಿ, ಇದು ನಕಲಿ ಡಿಗ್ರಿ ಹೊಂದಿದವರ ಬಗ್ಗೆ ಎಂದು ಹೇಳಿದರು.

ಆದರೆ ಈ ಮಾತು ತುಂಬಾ ವೈರಲ್ ಆಯಿತು. ಜೊತೆಗೆ ಯುವಜನರಲ್ಲಿ ತುಂಬಾ ಆಕ್ರೋಶವನ್ನು ಉಂಟುಮಾಡಿತು. ಅಭಿಜೀತ್ ದೀಪ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯದ ರೂಪದಲ್ಲಿ ‘ಎಲ್ಲಾ ಕಾಕ್ರೋಚ್‌ಗಳು ಒಟ್ಟಿಗೆ ಸೇರಿದರೆ ಏನಾಗುತ್ತದೆ?’ ಎಂದು ಪೋಸ್ಟ್ ಮಾಡಿದರು. ಇದು ತುಂಬಾ ವೈರಲ್ ಆಯಿತು. ಮುಂದೆ ಆಗಿದ್ದು ಈಗ ಇತಿಹಾಸ.

ಮೇ 16, 2026ರಂದು ಅಭಿಜೀತ್ ದೀಪ್ಕೆ ಎಂಬ ಯುವಕ ಈ ಹಾಸ್ಯಾತ್ಮಕ ಚಳುವಳಿಯನ್ನು ಸ್ಥಾಪಿಸಿದರು. ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ಪಾಲಿಸಿ ಅಧ್ಯಯನ ಮಾಡುತ್ತಿರುವ 30 ವರ್ಷದ ವಿದ್ಯಾರ್ಥಿ. ಡಿಜಿಟಲ್ ಕಮ್ಯುನಿಕೇಷನ್ ಸ್ಟ್ರಾಟಜಿಸ್ಟ್ ಆಗಿದ್ದಾರೆ. ಅವರು ‘ಕಾಕ್ರೋಚ್’ ಪದವನ್ನು ಸಕಾರಾತ್ಮಕವಾಗಿ ಬಳಸಿ, ಯುವಕರ ಬದುಕುಳಿಯುವ ಶಕ್ತಿಯ ಸಂಕೇತವಾಗಿ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಚಳುವಳಿ ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯವಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed