India China: ‘ನಿಮ್ಮ ಉಪಕಾರ ನಾವು ಮರೆಯುವುದಿಲ್ಲ’; ಭಾರತಕ್ಕೆ ಮುಕ್ತ ವೇದಿಕೆಯಲ್ಲಿ ಧನ್ಯವಾದ ಹೇಳಿದ್ಯಾಕೆ ಚೀನಾ? /China Thanks India Publicly: What Led to This Rare | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರತಕ್ಕೆ ಧನ್ಯವಾದ ಹೇಳಿದ್ಯಾಕೆ ಚೀನಾ?


Last Updated:

ಸಾಮಾನ್ಯವಾಗಿ ಪ್ರತಿಸ್ಪರ್ಧಿಗಳೆಂದು ಪರಿಗಣಿಸಲಾಗುವ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಕರಗುತ್ತಿರುವ ಹಾಗೇ ಕಾಣುತ್ತಿದೆ. ಚೀನಾ ಸೇನೆಯ ಸಂಸ್ಥಾಪನಾ ವಾರ್ಷಿಕೋತ್ಸವದಂದು ಭಾರತವನ್ನು ಉಲ್ಲೇಖಿಸಿ ಬಹಿರಂಗವಾಗಿ ಧನ್ಯವಾದ ಅರ್ಪಿಸಿದ್ದಾರೆ.

ಭಾರತಕ್ಕೆ ಧನ್ಯವಾದ ಹೇಳಿದ್ಯಾಕೆ ಚೀನಾ?
ಭಾರತಕ್ಕೆ ಧನ್ಯವಾದ ಹೇಳಿದ್ಯಾಕೆ ಚೀನಾ?

ಸಾಮಾನ್ಯವಾಗಿ ಪ್ರತಿಸ್ಪರ್ಧಿಗಳೆಂದು ಪರಿಗಣಿಸಲಾಗುವ ಭಾರತ ಮತ್ತು ಚೀನಾ (India China Relation) ನಡುವಿನ ಸಂಬಂಧಗಳು ಕರಗುತ್ತಿರುವ ಹಾಗೇ ಕಾಣುತ್ತಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಮೇಲಿನ ಮಂಜುಗಡ್ಡೆ ನಿಧಾನವಾಗಿ ಕರಗುತ್ತಿದೆ ಎಂದು ತೋರುತ್ತಿದೆ. ಚೀನಾದ (China) ರಿಯರ್ ಅಡ್ಮಿರಲ್ ಯು ಜಿಯಾನ್ ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸುವ ಮೂಲಕ ಅತ್ಯಂತ ಸಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಎರಡು ದೇಶಗಳ ನಡುವಿನ ಸಂಬಂಧಗಳಲ್ಲಿ ಸುಧಾರಣೆಯ ಸಂಕೇತವಾಗಿದೆ.

ಹೌದು, ಚೀನಾ ಸೇನೆಯ ಸಂಸ್ಥಾಪನಾ ವಾರ್ಷಿಕೋತ್ಸವದಂದು ಭಾರತದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅಲ್ಲದೇ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಭಾರತೀಯ ಸೇನೆಗೆ ಬಹಿರಂಗವಾಗಿ ಧನ್ಯವಾದ ಅರ್ಪಿಸಿದ್ದಾರೆ.

ಭಾರತಕ್ಕೆ ಧನ್ಯವಾದ ಸಲ್ಲಿಸಿದ ಚೀನಾ!

ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸ್ಥಾಪನೆಯ 99ನೇ ವಾರ್ಷಿಕೋತ್ಸವದ ಸ್ವಾಗತ ಸಮಾರಂಭದಲ್ಲಿ ಭಾರತದ ಚೀನಾ ರಕ್ಷಣಾ ಅಟ್ಯಾಚ್ ಆಗಿರುವ ರಿಯರ್ ಅಡ್ಮಿರಲ್ ಯು ಜಿಯಾನ್ ಮಾತನಾಡಿದ್ದಾರೆ. ‘ಚೀನಾ ಮತ್ತು ಭಾರತ ಪ್ರಮುಖ ನೆರೆಹೊರೆಯ ದೇಶಗಳು. ಎರಡೂ ದೇಶಗಳು ಅಭಿವೃದ್ಧಿ ಮತ್ತು ಪ್ರಗತಿಯ ಮುಖ್ಯ ಹಂತದಲ್ಲಿವೆ’ ಎಂದು ಹೇಳಿದ್ದಾರೆ.

ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಚೀನಾ-ಭಾರತ ಸಂಬಂಧಗಳು ಸುಧಾರಣೆಯ ಸರಿಯಾದ ಹಾದಿಗೆ ಮರಳುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಎರಡು ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳಲ್ಲಿ ಸಂಪರ್ಕ ಹೆಚ್ಚಿಸುವುದು, ಪರಸ್ಪರ ನಂಬಿಕೆ ಬೆಳೆಸುವುದು ಮತ್ತು ಸಂವಾದದ ಮೂಲಕ ಸಹಕಾರವನ್ನು ಉತ್ತೇಜಿಸುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

ಚೀನಾ ಧನ್ಯವಾದ ಹೇಳಿದ್ದು ಯಾಕೆ?

ಕಳೆದ ವರ್ಷ ಜೂನ್‌ನಲ್ಲಿ ಕೇರಳ ಕರಾವಳಿಯಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡು ಚೀನಾ ಅಧಿಕಾರಿ ಕೃತಜ್ಞತೆ ಸಲ್ಲಿಸಿದ್ದಾರೆ. ಚೀನಾದ ಸರಕು ಹಡಗಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಭಾರಿ ಸ್ಫೋಟವಾಗಿತ್ತು. ಹಡಗಿನಲ್ಲಿದ್ದ 12 ಚೀನೀ ನಾವಿಕರ ಜೀವಕ್ಕೆ ಅಪಾಯ ಉಂಟಾಗಿತ್ತು. ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳು ತಕ್ಷಣ ಕಾರ್ಯಪ್ರವೃತ್ತವಾಗಿ ಎಲ್ಲಾ 12 ಜನರನ್ನೂ ಸುರಕ್ಷಿತವಾಗಿ ರಕ್ಷಿಸಿವೆ. ಈ ರಕ್ಷಣಾ ಕಾರ್ಯಾಚರಣೆಯನ್ನು ಚೀನಾ ಎಂದಿಗೂ ಮರೆಯುವುದಿಲ್ಲ ಎಂದು ರಿಯರ್ ಅಡ್ಮಿರಲ್ ಯು ಜಿಯಾನ್ ಹೇಳಿದ್ದಾರೆ. ಈ ಸಹಾಯವನ್ನು ಅವರು ಶ್ಲಾಘಿಸಿದ್ದಾರೆ.

 ಭಾರತ- ಚೀನಾ ಸಂಬಂಧ!

ಈ ಹೇಳಿಕೆ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ (SCO) ಶೃಂಗಸಭೆಯ ಹಿನ್ನೆಲೆಯಲ್ಲಿ ಬಂದಿದೆ. ಈ ಶೃಂಗಸಭೆಯಲ್ಲಿ ಭಾರತ, ಚೀನಾ ಮತ್ತು ರಷ್ಯಾ ಒಟ್ಟಿಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಎರಡೂ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಭೇಟಿಯಾಗುತ್ತಿದ್ದಾರೆ. ಸಂಬಂಧಗಳನ್ನು ಸಾಮಾನ್ಯಗೊಳಿಸುವತ್ತ ಕ್ರಮಗಳು ನಡೆಯುತ್ತಿವೆ.

ಕಳೆದ ಕೆಲವು ವರ್ಷಗಳಿಂದ ಭಾರತ-ಚೀನಾ ಸಂಬಂಧಗಳು ಗಡಿ ವಿವಾದಗಳಿಂದಾಗಿ ತಣ್ಣಗಾಗಿದ್ದವು. ಆದರೆ ಈಗ ಎರಡೂ ಕಡೆಯಿಂದ ಸಕಾರಾತ್ಮಕ ಸಂದೇಶಗಳು ಬರುತ್ತಿವೆ. ಚೀನಾ ಅಧಿಕಾರಿಯ ಈ ಹೇಳಿಕೆ ಎರಡು ದೇಶಗಳ ನಡುವಿನ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಭಾರತ ಮತ್ತು ಚೀನಾ ಎರಡೂ ದೊಡ್ಡ ಅರ್ಥವ್ಯವಸ್ಥೆಗಳು. ಎರಡು ದೇಶಗಳ ನಡುವೆ ಉತ್ತಮ ಸಂಬಂಧಗಳು ಇಡೀ ಪ್ರದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಸಹಾಯಕವಾಗುತ್ತವೆ. ಆದರೆ ಗಡಿ ವಿವಾದಗಳು, ವ್ಯಾಪಾರ ಸಮತೋಲನ ಮುಂತಾದ ಸಮಸ್ಯೆಗಳನ್ನು ಇನ್ನೂ ಪರಿಹರಿಸಬೇಕಾಗಿದೆ. ಈ ಸಕಾರಾತ್ಮಕ ಹೇಳಿಕೆ ಭವಿಷ್ಯದಲ್ಲಿ ಹೆಚ್ಚು ಸಹಕಾರಿ ಸಂಬಂಧಗಳಿಗೆ ಬುನಾದಿ ಹಾಕುತ್ತದೆ ಎಂದು ಭರವಸೆ ವ್ಯಕ್ತವಾಗಿದೆ. ಸೆಪ್ಟೆಂಬರ್ SCO ಶೃಂಗಸಭೆಯಲ್ಲಿ ಈ ಸಂಬಂಧಗಳು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed