Ayodhya Ram Mandir: ‘ರಾಮಮಂದಿರಕ್ಕೆ ನಾನು ಕೊಟ್ಟ ₹1.11 ಲಕ್ಷ ವಾಪಸ್ ಕೊಡಿ’! ಕೋರ್ಟ್‌ಗೆ ಹೋಗೋ ಎಚ್ಚರಿಕೆ ಕೊಟ್ಟ ಕಾಂಗ್ರೆಸ್ ನಾಯಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದಿಗ್ವಿಜಯ್ ಸಿಂಗ್


Last Updated:

Ayodhya Ram Mandir: “ನಾನು ಅಯೋಧ್ಯೆ ರಾಮಮಂದಿರಕ್ಕೆ ಕೊಟ್ಟ 1.10 ಲಕ್ಷ ರೂಪಾಯಿ ಹಣವನ್ನು ನನಗೆ ವಾಪಸ್ ಕೊಡಿ!” ಹೀಗಂತ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ. “ನನ್ನ ಹಣ ವಾಪಸ್ ನೀಡದಿದ್ದರೆ ನಾನು ಕೋರ್ಟ್‌ಗೆ ಹೋಗುತ್ತೇನೆ” ಅಂತ ಅವರು ಎಚ್ಚರಿಕೆ ನೀಡಿದ್ದಾರೆ.   

ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ಭೋಪಾಲ್, ಮಧ್ಯಪ್ರದೇಶ: ‘ನಾನು ಅಯೋಧ್ಯೆ ರಾಮಮಂದಿರಕ್ಕೆ (Ayodhya Ram Mandir) ಕೊಟ್ಟ 1.10 ಲಕ್ಷ ರೂಪಾಯಿ ಹಣವನ್ನು ನನಗೆ ವಾಪಸ್ ಕೊಡಿ’! ಹೀಗಂತ ಹಿರಿಯ ಕಾಂಗ್ರೆಸ್ ನಾಯಕ (senior Congress leader), ಮಧ್ಯಪ್ರದೇಶ (Madhya Pradesh) ಮಾಜಿ ಮುಖ್ಯಮಂತ್ರಿ (former CM) ದಿಗ್ವಿಜಯ್ ಸಿಂಗ್ (Digvijay Singh) ಆಗ್ರಹಿಸಿದ್ದಾರೆ. ನಾನು ರಾಮಮಂದಿರಕ್ಕೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗಿಂದ ಹೆಚ್ಚಿನ ದೇಣಿಗೆ ನೀಡಿದ್ದೇನೆ. ಈಗಲೇ ನನ್ನ ಹಣ ವಾಪಸ್ ಕೊಡಿ, ಇಲ್ಲವಾದರೆ ನಾನು ಕೋರ್ಟ್‌ಗೆ ಹೋಗುತ್ತೇನೆ ಅಂತ ಅವರು ಎಚ್ಚರಿಕೆ ನೀಡಿದ್ದಾರೆ.   

1.10 ಲಕ್ಷ ರೂಪಾಯಿ ವಾಪಸ್ ಕೊಡಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಮೊಕದ್ದಮೆ ಹೂಡುವುದಾಗಿ ಹೇಳಿರುವ ಅವರು, ತಾವು ರಾಮಮಂದಿರಕ್ಕೆ ಕೊಟ್ಟ 1.10 ಲಕ್ಷ ರೂಪಾಯಿ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.
ಕೋರ್ಟ್‌ಗೆ ಹೋಗೋ ಎಚ್ಚರಿಕೆ ಕೊಟ್ಟ ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ನಾನು ಅಯೋಧ್ಯೆಯಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ನಾನು ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡು ಲೂಟಿ ಮಾಡಲಾಗಿದೆ. ಆದ್ದರಿಂದ, ಹಣವನ್ನು ನನಗೆ ಹಿಂತಿರುಗಿಸಬೇಕು, ಇದರಿಂದ ನಾನು ಅದನ್ನು ರಾಮಾಲಯ ಟ್ರಸ್ಟ್‌ನಲ್ಲಿ ಠೇವಣಿ ಇಡಬಹುದು. ನನಗೆ ಪೊಲೀಸ್ ಠಾಣೆಯ ಮೇಲೆ ನಂಬಿಕೆ ಇಲ್ಲ. ಪೊಲೀಸರು ಬಿಜೆಪಿ ನಿಯಂತ್ರಣದಲ್ಲಿದ್ದಾರೆ, ಆದ್ದರಿಂದ ನಾನು ಪೊಲೀಸ್ ಠಾಣೆಗೆ ಹೋಗುವುದಿಲ್ಲ, ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಾನು 2 ಬಾರಿ ದೇಣಿಗೆ ನೀಡಿದ್ದೇನೆ

ನಮಗೆ ರಾಮ ಮಂದಿರ ಮತ್ತು ಭಗವಾನ್ ರಾಮನ ಮೇಲೆ ನಂಬಿಕೆ ಇದೆ. ರಾಮ ಮಂದಿರಕ್ಕಾಗಿ ಎರಡು ಬಾರಿ ನಿಧಿ ಸಂಗ್ರಹ ಅಭಿಯಾನಗಳನ್ನು ನಡೆಸಲಾಯಿತು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ನಡೆದಾಗ ನಾನು ಮೊದಲ ಬಾರಿಗೆ ದೇಣಿಗೆ ನೀಡಿದ್ದೇನೆ. ಆದರೆ ಮೊದಲ ಬಾರಿಗೆ ಸಂಗ್ರಹಿಸಿದ ದೇಣಿಗೆಗಳನ್ನು ಎಂದಿಗೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಅಂತ ಆರೋಪಿಸಿದ್ರು. ಅಯೋಧ್ಯೆಯಲ್ಲಿ ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಣಿಗೆ ಸಂಗ್ರಹ ಅಭಿಯಾನವನ್ನು ಮತ್ತೆ ಪ್ರಾರಂಭಿಸಲಾಯಿತು. ವಿಶ್ವ ಹಿಂದೂ ಪರಿಷತ್ ಅಭಿಯಾನವನ್ನು ನಡೆಸಿತು, ಆದರೆ ನಾನು ಅವರಿಗೆ ದೇಣಿಗೆ ನೀಡಲಿಲ್ಲ ಏಕೆಂದರೆ ನಾನು ಅವರನ್ನು ನಂಬಲಿಲ್ಲ ಅಂತ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ದೇಣಿಗೆ ಕಳ್ಳರಿಗೆ ಮನೆಗೆ ಪ್ರವೇಶವಿಲ್ಲ

ಇದಲ್ಲದೆ, ಅವರು ತಮ್ಮ ಭೋಪಾಲ್ ನಿವಾಸದ ಹೊರಗೆ ‘ದೇಣಿಗೆ ಕಳ್ಳರು ಮನೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂದು ಬರೆದಿರುವ ಬ್ಯಾನರ್ ಅನ್ನು ಹಾಕಿಸಿದ್ದಾರೆ. ಅಕ್ಟೋಬರ್ 2 ರಂದು ಉಜ್ಜಯಿನಿಯಿಂದ ಅಯೋಧ್ಯೆಯವರೆಗೆ ನಡೆಯುವ ತಮ್ಮ ಪಾದಯಾತ್ರೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಜನರು ತಮ್ಮ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಲೆಕ್ಕಿಸದೆ ಸೇರಬೇಕೆಂದು ದಿಗ್ವಿಜಯ ಸಿಂಗ್ ಮನವಿ ಮಾಡಿದ್ದಾರೆ.

ಉಜ್ಜಯಿನಿಯಿಂದ ಅಯೋಧ್ಯೆಗೆ ಮೆರವಣಿಗೆ

ಅಕ್ಟೋಬರ್ 2 ರಿಂದ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಿಂದ ಅಯೋಧ್ಯೆ ರಾಮ ದೇಗುಲಕ್ಕೆ ಮೆರವಣಿಗೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಈ ಮೆರವಣಿಗೆ ಸಂಪೂರ್ಣವಾಗಿ ರಾಜಕೀಯೇತರವಾಗಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಯಾರಾದರೂ ಭಾಗವಹಿಸಬಹುದು ಎಂದು ದಿಗ್ವಿಜಯ್ ಸಿಂಗ್ ಕರೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed