Last Updated:
ಆದರೀಗ ಅಲಿಗಂಜ್ ಬೆಂಕಿ ದುರಂತದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಹೌದು ಎಲ್ಲಾ ಗಾಯಾಳುಗಳ ಮರಣೋತ್ತರ ಪರೀಕ್ಷೆ ನಡೆಸಿದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ವಕ್ತಾರರು ಮಕ್ಕಳ ಸಾವಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲಕ್ನೋ(ಜೂ.23): ಅಲಿಗಂಜ್ನ ಅನಿಮೇಷನ್ ತರಬೇತಿ ಕೇಂದ್ರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 15 ಮಕ್ಕಳು ಸಾವನ್ನಪ್ಪಿದ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೆಂಕಿ ಅನಾಹುತವಾಗಿರುವುದರಿಂದ ಈ ಮಕ್ಕಳು ಸುಟ್ಟಗಾಯಗಳಿಂದ ಸಾವನ್ನಪ್ಪಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೀಗ ಅಲಿಗಂಜ್ ಬೆಂಕಿ ದುರಂತದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಹೌದು ಎಲ್ಲಾ ಗಾಯಾಳುಗಳ ಮರಣೋತ್ತರ ಪರೀಕ್ಷೆ ನಡೆಸಿದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ವಕ್ತಾರರು ಮಕ್ಕಳ ಸಾವಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸತ್ತವರಲ್ಲಿ ಯಾರೂ ಸುಟ್ಟಗಾಯಗಳಿಂದ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಈಗ, ಹಾಗಾದ್ರೆ ಇಷ್ಟು ದೊಡ್ಡ ಬೆಂಕಿ ಸನಾಹುತದಲ್ಲಿ 15 ಜನರು ಸುಟ್ಟ ಗಾಯಗಳಾಗಿಲ್ಲವೆಂದರೆ ಹೇಗೆ ಸತ್ತರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಇದಕ್ಕೆ ಅವರು ವೈದ್ಯಕೀಯ ಪರಿಭಾಷೆಯಲ್ಲಿ ಉತ್ತರವನ್ನು ನೀಡಿದ್ದಾರೆ. ಇದು ಮಕ್ಕಳ ಸಾವಿನ ಹಿಂದಿನ ಅಸಲಿ ಕಾರಣ ಬಯಲು ಮಾಡಿದೆ.
ವಾಸ್ತವವಾಗಿ, ಕೆಜಿಎಂಯು ವಕ್ತಾರ ಪ್ರೊಫೆಸರ್ ಕೆಕೆ ಸಿಂಗ್ ಈ ವಿಷಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. “ಯಾವುದೇ ಮಕ್ಕಳು ಸುಟ್ಟಗಾಯಗಳಿಂದ ಸಾವನ್ನಪ್ಪಿಲ್ಲ. ಎಲ್ಲಾ ಸಾವುಗಳು ಹೊಗೆಯಿಂದ ಉಸಿರುಗಟ್ಟಿದ್ದರಿಂದ ಸಂಭವಿಸಿವೆ. ಗಾಯಗೊಂಡ ಇಬ್ಬರು ಮಕ್ಕಳನ್ನು ಪ್ರಸ್ತುತ ಕೆಜಿಎಂಯುಗೆ ದಾಖಲಿಸಲಾಗಿದೆ.
ನಮ್ಮಲ್ಲಿ 22 ಮಕ್ಕಳಿದ್ದರು, ಅವರಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ಎತ್ತರದಿಂದ ಹಾರಿದ್ದಾರೆ” ಎಂದು ಅವರು ಹೇಳಿದರು.
ಒಬ್ಬ ಮಗುವಿಗೆ ಗಂಭೀರ ಗಾಯಗಳಾಗಿಲ್ಲ ಎಂದು ಪ್ರೊ. ಸಿಂಗ್ ಹೇಳಿದ್ದಾರೆ. ಆಕೆಯ ತೊಡೆಯ ಮೇಲೆ ಗಾಯವಾಗಿದೆ. ಆದರೆ ಫ್ರ್ಯಾಕ್ಚರ್ ಆಗಿಲ್ಲ. ಮಗು ಮಾನಸಿಕ ಆಘಾತದಲ್ಲಿದೆ ಮತ್ತು ಚೇತರಿಸಿಕೊಳ್ಳುತ್ತಿದೆ. ಆಕೆಯ ಕುಟುಂಬ ಗುರಗಾಂವ್ನಿಂದ ಬಂದಿದೆ. ಅವರು ಒಪ್ಪಿದರೆ, ಆಕೆಯನ್ನು ಡಿಸ್ಚಾರ್ಜ್ ಮಾಡಬಹುದು. ಆಕೆಯ ಕುಟುಂಬವು ಬಯಸಿದ ಸ್ಥಳಕ್ಕೆ ಅವಳನ್ನು ಕಳುಹಿಸಲಾಗುತ್ತದೆ.
ಏತನ್ಮಧ್ಯೆ, ಗಾಯಗೊಂಡ ಎರಡನೇ ಮಗು ಮೂರನೇ ಮಹಡಿಯಿಂದ ಹಾರುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಅದರ ಸೊಂಟ ರಾಡ್ನಲ್ಲಿ ಸಿಲುಕಿಕೊಂಡಿತ್ತು. ಆ ಮಗುವಿನ ಬೆನ್ನುಹುರಿಗೆ ಗಾಯವಾಗಿದೆ. ಆತ ಇನ್ನೂ ಆಘಾತದಲ್ಲಿದ್ದಾನೆ. ನಿನ್ನೆ ರಾತ್ರಿ ಸಿಟಿ ಸ್ಕ್ಯಾನ್ ಮಾಡಲಾಯಿತು. ಇದು ಗಂಭೀರ ಗಾಯವಾಗಿದೆ. ಗಾಯದಿಂದಾಗಿ ಸೊಂಟ ಮತ್ತು ಕೆಳ ಭಾಗ ಮರಗಟ್ಟಿದೆ. ಶೀಘ್ರದಲ್ಲೇ ಎಂಆರ್ಐ ಮಾಡಲಾಗುವುದು, ಇದು ಆತನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂದು ನಿರ್ಧರಿಸುತ್ತದೆ ಎಂದಿದ್ದಾರೆ.
ಯಾರಿಗೂ ಸುಟ್ಟ ಗಾಯಗಳಾಗಿಲ್ಲ ಎಂದು ಬಹಿರಂಗಪಡಿಸಿ ಮಾತನಾಡಿದ ಅವರು ಜ್ವಾಲೆಯಿಂದ ಯಾರೂ ಸುಟ್ಟು ಹೋಗಿಲ್ಲ. ಅವರೆಲ್ಲರನ್ನೂ ಒಂದು ಕೋಣೆಯಲ್ಲಿ ಬಂಧಿಯಾಗಿದ್ದರು. ಕೋಣೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಕೋಣೆ ಹೊಗೆಯಿಂದ ತುಂಬಿದಾಗ, ಅದು ಮಕ್ಕಳ ಶ್ವಾಸಕೋಶಕ್ಕೆ ಪ್ರವೇಶಿಸಿ, ಆಮ್ಲಜನಕ ಕೊರತೆಯಿಂದ ಮಾಡಿ ಕಾರ್ಬನ್ ಮಾನಾಕ್ಸೈಡ್ ವಿಷವನ್ನು ಉಂಟುಮಾಡಿತು.
ಕಟ್ಟಡದಲ್ಲಿನ ಯಾವುದೇ ಕಿಟಕಿಗಳನ್ನು ತೆರೆಯಲು ಸಾಧ್ಯವಾಗಲಿಲ್ಲ; ಗಟ್ಟಿಮುಟ್ಟಾದ ಗಾಜಿನಿಂದ ಮುಚ್ಚಲಾಗಿತ್ತು. ಇವರೆಲ್ಲರೂ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು. ಗಟ್ಟಿಮುಟ್ಟಾದ ಗಾಜನ್ನು ಒಡೆಯಲು ಅವರು ಪ್ರಯತ್ನಿಸಿದರು. ಗಾಜು ಒಡೆದು ಹೊಗೆ ಹೊರಬಂದಿದ್ದರೆ, ಮಕ್ಕಳನ್ನು ಉಳಿಸಬಹುದಿತ್ತು ಎಂದೂ ಹೇಳಿದ್ದಾರೆ.
Lucknow,Lucknow,Uttar Pradesh
Jun 23, 2026 12:21 PM IST
Lucknow: ಕೋಚಿಂಗ್ ಸೆಂಟರ್ಗೆ ಬೆಂಕಿ, ಮೃತಪಟ್ಟ 15 ಮಂದಿ ಮಕ್ಕಳಲ್ಲಿ ಒಬ್ಬರಿಗೂ ಸುಟ್ಟ ಗಾಯಗಳಿಲ್ಲ: ಸಾವನ್ನಪ್ಪಿದ್ದು ಹೇಗೆ? ಬಯಲಾಯ್ತು ಅಸಲಿಯತ್ತು!













