Accident: ನಾಯಿ ಉಳಿಸಲು ಹೋಗಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು, 12 ಮಂದಿಗೆ ಗಾಯ / Tragic Accident: Two Dead, 12 Injured While Trying to Save a Dog | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನಾಯಿ ಉಳಿಸಲು ಹೋಗಿ ಅಪಘಾತ


Last Updated:

ಗಂಗಾ ಎಕ್ಸ್​​ಪ್ರೆಸ್​​ ವೇ ಬಳಿ ಭೀಕರ ಅಪಘಾತಗಳು ಸಂಭವಿಸಿದೆ. ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ವ್ಯಾನ್​ ಒಂದು ಪಲ್ಟಿಯಾಗಿದೆ, ಅಲ್ಲದೇ ಅದರ ಹಿಂಬದಿಯಿಂದ ಬರ್ತಿದ್ದ ಕಾರು ಸ್ಥಳೀಯರಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ರೆ, 12ಕ್ಕೂ ಹೆಚ್ಚು ಮಂಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಯಿ ಉಳಿಸಲು ಹೋಗಿ ಅಪಘಾತ
ನಾಯಿ ಉಳಿಸಲು ಹೋಗಿ ಅಪಘಾತ

ಮಿನಿ ವ್ಯಾನ್​​​ ಒಂದು ಪಲ್ಟಿಯಾಗಿ ಭೀಕರ ಅಪಘಾತ (Accident) ಸಂಭವಿಸಿದೆ. ಉತ್ತರ ಪ್ರದೇಶದ (Uttar Pradesh) ಅಮ್ರೋಹಾದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತ ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ. ಮನೋನಾ ಧಾಮ್‌ನಿಂದ ಚಂಡೀಗಢದತ್ತ ಮನೆಗೆ ಹಿಂತಿರುಗುತ್ತಿದ್ದ ಭಕ್ತರ ಗುಂಪು ಪ್ರಯಾಣಿಸುತ್ತಿದ್ದ ವ್ಯಾನ್‌ ಒಂದು ಆಕಸ್ಮಿಕವಾಗಿ ಪಲ್ಟಿಯಾಗಿದ್ದು, ಈ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ವ್ಯಾನ್‌ ಮುಂದೆ ಅಚಾನಕ್​ ಒಂದು ನಾಯಿ ಓಡಿಬಂದು ವಾಹನಕ್ಕೆ ಢಿಕ್ಕಿ ಹೊಡೆದಂತೆ ಆಗಿದೆ. ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಮ್ಯಾಜಿಕ್ ವ್ಯಾನ್‌ ರಸ್ತೆ ಬದಿಗೆ ಮಗುಚಿಬಿದ್ದಿದೆ ಎಂದು ತಿಳಿದುಬಂದಿದೆ.

ನಾಯಿ ಉಳಿಸಲು ಹೋಗಿ ವ್ಯಾನ್​ ಪಲ್ಟಿಯಾಗಿ ಅಪಘಾತ

ಈ ವ್ಯಾನ್​ ಮಗುಚಿ ಬಿದ್ದ ತಕ್ಷಣವೇ ಅದರಲ್ಲಿದ್ದ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಜನರು ಗಾಯಾಳುಗಳನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಆದರೆ ಆ ಕ್ಷಣದಲ್ಲಿ ಹಿಂಬದಿಯಿಂದ ಬಂದ ಮತ್ತೊಂದು ಕಾರು, ರಸ್ತೆಯ ಬದಿಯಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದ ಅಲ್ಲಿ ನಿಂತಿದ್ದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಇಬ್ಬರು ತೀವ್ರ ಗಾಯಗಳಿಂದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ಅಪಘಾತ

ಈ ಕಾರು ಡಿಕ್ಕಿ ಘಟನೆ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಹಿಂಭಾಗದಿಂದ ಡಿಕ್ಕಿ ಹೊಡೆದ ಸರಣಿ ಅಪಘಾತಗಳಿಗೆ ಕಾರಣವಾಗಿದೆ. ಒಂದು ವಾಹನ ನಿಯಂತ್ರಣ ತಪ್ಪಿದಾಗ ಅದರ ಹಿಂದೆ ಬರುತ್ತಿದ್ದ ವಾಹನಗಳಿಗೆ ಬ್ರೇಕ್ ಹಾಕಲು ಸಮಯ ಸಿಗದೆ ಹಲವು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಂತಾಗಿದೆ. ಇದರಿಂದ ಕೆಲ ಸಮಯ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ತಕ್ಷಣವೇ ಹಸನ್‌ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಪೊಲೀಸರು ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು 12 ಜನರಿಗೆ ಗಂಭೀರ ಗಾಯಗಳಿರುವುದಾಗಿ ತಿಳಿಸಿದ್ದಾರೆ. ಕೆಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಕಾನೂನು ಪ್ರಕ್ರಿಯೆಗಳ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಗುರುತು ಮತ್ತು ಅವರ ಕುಟುಂಬದವರನ್ನು ಮಾಹಿತಿ ನೀಡುವ ಕಾರ್ಯವೂ ನಡೆಯುತ್ತಿದೆ.

ತೀವ್ರ ಆಘಾತಕ್ಕೆ ಒಳಗಾದ ಭಕ್ತರು

ಈ ಘಟನೆಯಿಂದ ಮನೋನಾ ಧಾಮ್‌ನಿಂದ ಮನೆಗೆ ಹಿಂತಿರುಗುತ್ತಿದ್ದ ಭಕ್ತರ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿವೆ. ಧಾರ್ಮಿಕ ಯಾತ್ರೆಯಿಂದ ಮರಳುತ್ತಿದ್ದ ಸಂದರ್ಭದಲ್ಲಿ ಇಂತಹ ಅಪಘಾತ ಸಂಭವಿಸಿರುವುದು ದೊಡ್ಡ ದುರ್ಘಟನೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ವಾಹನ ಚಾಲಕರು ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣ ಮತ್ತು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂಬ ಅಗತ್ಯತೆಯೂ ಈ ಘಟನೆ ಮತ್ತೆ ಒತ್ತಿ ಹೇಳಿದೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾದ ಬಸ್​!

ಇದೇ ಸಮಯದಲ್ಲಿ, ನೋಯ್ಡಾದಲ್ಲಿಯೂ ಮತ್ತೊಂದು ರಸ್ತೆ ಅಪಘಾತ ನಡೆದಿದೆ. ನೋಯ್ಡಾದ ಮಹಾಮಾಯ ಫ್ಲೈಓವರ್ ಬಳಿಯಲ್ಲಿ ಬಸ್ಸೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಈ ಅಪಘಾತದಲ್ಲಿಯೂ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಉರುಳಿದ ಪರಿಣಾಮ ಒಳಗೆ ಕುಳಿತಿದ್ದವರು ಒಂದರ ಮೇಲೊಂದು ಬಿದ್ದಿದ್ದು, ಕೆಲವರಿಗೆ ತಲೆಗೆ, ಕೈಗೆ, ಕಾಲಿಗೆ ಗಾಯಗಳಾಗಿವೆ. ಮಾಹಿತಿ ದೊರಕುತ್ತಿದ್ದಂತೆಯೇ ನೋಯ್ಡಾ ಪೊಲೀಸ್ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಎರಡು ಅಪಘಾತಗಳೂ ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಎಬ್ಬಿಸುತ್ತಿವೆ. ಚಾಲಕರು ವೇಗ ನಿಯಂತ್ರಣ, ಟ್ರಾಫಿಕ್ ನಿಯಮ ಪಾಲನೆ, ರಸ್ತೆ ಪರಿಸ್ಥಿತಿ ಗಮನಿಸುವುದು, ಪ್ರಾಣಿಗಳಿಗೆ ಡಿಕ್ಕಿ ತಪ್ಪಿಸಲು ಸುರಕ್ಷಿತ ರೀತಿಯಲ್ಲಿ ವಾಹನ ನಿಯಂತ್ರಿಸುವುದು ಮುಂತಾದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಬೇಕು. ಪ್ರಯಾಣಿಕರ ಜೀವ ಸುರಕ್ಷಿತವಾಗಿರಲು ಚಾಲಕರು ಮತ್ತು ವಾಹನ ಮಾಲೀಕರು ಹೆಚ್ಚಿನ ಜವಾಬ್ದಾರಿ ವಹಿಸುವುದು ಮಾತ್ರವಲ್ಲ, ಸರ್ಕಾರವೂ ಎಕ್ಸ್‌ಪ್ರೆಸ್‌ವೇ ಮತ್ತು ಪ್ರಮುಖ ರಸ್ತೆಗಳ ಮೇಲೆ ಸುರಕ್ಷಾ ಕ್ರಮಗಳನ್ನು ಬಲಪಡಿಸುವ ಅಗತ್ಯತೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed