Andy Flower RCB: ನೀವು ನಮ್ಮ ತಂಡದ ಹಾರ್ಟ್​​ಬೀಟ್​, ನಮ್ಮೆಲ್ಲರಿಗೂ ಸ್ಪೂರ್ತಿ! ಆರ್​​ಸಿಬಿ ಹೆಡ್​​ ಕೋಚ್​ ಪ್ರಶಂಸಿಸಿದ್ದು ಯಾರನ್ನ ಗೊತ್ತಾ? | ಕ್ರೀಡಾ ಸುದ್ದಿ | ACTPnews

ಆರ್​ಸಿಬಿ ಚಾಂಪಿಯನ್


Last Updated:

ಈ ವರ್ಷದ ಐಪಿಎಲ್​​ ಫೈನಲ್​​​​ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್​​ಸಿಬಿ 5 ವಿಕೆಟ್​ಗಳ ಜಯ ಸಾಧಿಸಿ ಸತತ 2ನೇ ಟ್ರೋಫಿ ತನ್ನದಾಗಿಸಿಕೊಂಡಿದೆ. ಚೆನ್ನೈ ಹಾಗೂ ಮುಂಬೈ ನಂತರ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಂಡಿದೆ.

ಆರ್​ಸಿಬಿ ಚಾಂಪಿಯನ್
ಆರ್​ಸಿಬಿ ಚಾಂಪಿಯನ್

ಐಪಿಎಲ್ 2026ರ (IPL 2026) ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್​​ಸಿಬಿ (Royal Challengers Bengaluru vs Gujarat Titans) 5 ವಿಕೆಟ್​ಗಳ ಜಯ ಸಾಧಿಸಿ ಸತತ 2ನೇ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ 3ನೇ ತಂಡ ಎನಿಸಿಕೊಂಡಿದೆ. ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖ್ಯ ಕೋಚ್ ಆಂಡಿ ಫ್ಲವರ್ (Andy Flower) ತಂಡದ ಅನುಭವಿ ವಿರಾಟ್ ಕೊಹ್ಲಿ ಅವರನ್ನು ಪ್ರಶಂಸಿಸಿದ್ದಾರೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಅಜೇಯ 75 ರನ್ ಗಳಿಸಿ ಸತತ ಎರಡನೇ ಬಾರಿಗೆ ತಮ್ಮ ತಂಡಕ್ಕೆ ಟ್ರೋಫಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಜಯದ ನಂತರ ಆಟಗಾರರು ಡ್ರೆಸ್ಸಿಂಗ್ ರೂಮ್​​ನಲ್ಲಿ ಕುಳಿತು ಸಭೆ ನಡೆಸುವ ವಿಡಿಯೋವನ್ನು ಆರ್ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ ಮತ್ತು ಕೋಚ್ ಫ್ಲವರ್ ಎಲ್ಲರನ್ನೂ ಉದ್ದೇಶಿಸಿ ಮಾತನಾಡುವ ವೇಳೆ ಫ್ಲವರ್ ಕೊಹ್ಲಿಯನ್ನು ಆರ್ಸಿಬಿಯ ಡ್ರೆಸ್ಸಿಂಗ್ ರೂಮ್​​ ಹೃದಯ ಬಡಿತ ಎಂದು ಬಣ್ಣಿಸಿದ್ದಾರೆ.

ಗುಜರಾತ್ ಸುಲಭ ಗೆಲುವು

156 ರನ್​ಗಳ ಗುರಿ ಬೆನ್ನತ್ತಿದ ಆರ್​​ಸಿಬಿಗೆ ವೆಂಕಟೇಶ್ ಅಯ್ಯರ್ ಮತ್ತು ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ವೆಂಕಟೇಶ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಇಳಿದಿದ್ದರು. ಈ ಇಬ್ಬರು ಬ್ಯಾಟ್ಸ್ ಮನ್​ಗಳು ವೇಗವಾಗಿ ಆಡಲು ಪ್ರಾರಂಭಿಸಿ ಗುಜರಾತ್ ಬೌಲರ್​ಗಳ ಮೇಲೆ ಒತ್ತಡ ಹೇರಿದರು. ವೆಂಕಟೇಶ್ ಮತ್ತು ಕೊಹ್ಲಿ ನಡುವೆ ಅರ್ಧಶತಕದ ಜೊತೆಯಾಟ ಬಂದಿತು. ಆದರೆ ಐದನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ವೆಂಕಟೇಶ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟವನ್ನು ಮುರಿದರು. ವೆಂಕಟೇಶ್ 16 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ನಂತರ ದೇವದತ್ ಪಡಿಕ್ಕಲ್ (1), ನಾಯಕ ರಜತ್ ಪಾಟಿದಾರ್ (15) ಮತ್ತು ಕೃನಾಲ್ ಪಾಂಡ್ಯ (1) ಸತತವಾಗಿ ವಿಕೆಟ್ ಕಳೆದುಕೊಂಡರು. ಆರ್ಸಿಬಿ 91 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.

ಗೆಲುವಿನ ನಂತರ, ಫ್ಲವರ್ ಆರ್ಸಿಬಿ ಆಟಗಾರರನ್ನು ಪ್ರಶಂಸಿಸಿದರು, “ವಿರಾಟ್, ನೀವು ಸಾಕಷ್ಟು ಗಮನ ಸೆಳೆಯುತ್ತೀರಿ ಎಂದು ನನಗೆ ತಿಳಿದಿದೆ ಮತ್ತು ಅದು ಸರಿಯಾಗಿದೆ. ನಾನು ಅದನ್ನು ಕಡಿಮೆ ಅಂದಾಜು ಮಾಡಲು ಬಯಸುವುದಿಲ್ಲ ಏಕೆಂದರೆ ನೀವು ಈ ಡ್ರೆಸ್ಸಿಂಗ್ ರೂಮ್​​ನ ಹೃದಯ ಬಡಿತ. ನೀವು ಮೈದಾನಕ್ಕೆ ಇಳಿದು ಉತ್ತಮ ಪೈಪೋಟಿ ಎದುರಿಸಿದ್ದೀರಿ. ಮೈದಾನದಲ್ಲಿ ನೀವು ತೋರಿಸುವ ಧೈರ್ಯ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ” ಎಂದು ಹೇಳಿದರು.

ನಾನು ಈ ಋತುವಿನ ಬಗ್ಗೆ ಯೋಚಿಸಿದಾಗಲೆಲ್ಲಾ, ವಿಶೇಷವಾಗಿ ಪ್ಲೇಆಫ್ ಪಂದ್ಯಗಳಲ್ಲಿ, ನನ್ನ ಗಮನವನ್ನು ಹೆಚ್ಚು ಸೆಳೆಯುವುದು ನೀವು ಮೈದಾನದಲ್ಲಿ ತೋರುವ ನಿರ್ಭೀತ ವರ್ತನೆ. ಅದು ಟೆಸ್ಟ್ ಕ್ರಿಕೆಟ್ ಆಗಿರಲಿ ಅಥವಾ ವಿಶ್ವಕಪ್ ಆಗಿರಲಿ, ನಿಮ್ಮ ಆಟ ಅತ್ಯುನ್ನತವಾಗಿರುತ್ತದೆ ಎಂದು ಪ್ರಶಂಸಿಸಿದರು.

ಭುವನೇಶ್ವರ್-ಕೃನಾಲ್ ಬಗ್ಗೆಯೂ ಮೆಚ್ಚುಗೆ

ಭುವನೇಶ್ವರ್ ಕುಮಾರ್ ಅವರನ್ನು ಶ್ಲಾಘಿಸಿದ ಕೋಚ್, “ಭುವಿ, ಈ ಋತುವಿನಲ್ಲಿ ನೀವು ಬೌಲಿಂಗ್ ಅನ್ನು ಮುನ್ನಡೆಸಿದ ರೀತಿ ಉತ್ತಮವಾಗಿತ್ತು. ನೀವು ಬಹಳ ಬುದ್ಧಿವಂತಿಕೆಯಿಂದ ಬೌಲಿಂಗ್ ಮಾಡಿದ್ದೀರಿ. ಹಿಂದಿನಿಂದಲೂ ನೀವು ಅದನ್ನು ಮಾಡುತ್ತಿದ್ದೀರಿ. ಅತ್ಯುತ್ತಮ ಆಟಗಾರರು ಡೆತ್ ಓವರ್​ಗಳಲ್ಲಿ ನಿಮ್ಮನ್ನು ಎದುರಿಸುತ್ತಾರೆ. ನಿಮ್ಮಂತಹ ಆಟಗಾರರು ನನ್ನೊಂದಿಗೆ ಇರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಕೃನಾಲ್ ಪಾಂಡ್ಯ, ನೀವು ದೀರ್ಘಕಾಲದಿಂದ ಐಪಿಎಲ್​ನ ಭಾಗವಾಗಿದ್ದೀರಿ ಮತ್ತು ವಿಜೇತ ತಂಡದ ಭಾಗವಾಗಿದ್ದೀರಿ. ನಿಮ್ಮಲ್ಲಿ ಇತರ ಜನರ ಮೇಲೂ ಪರಿಣಾಮ ಬೀರುವ ಏನೋ ಶಕ್ತಿ ಇದೆ. ನಿಮ್ಮದೇ ಆದ ರೀತಿಯಲ್ಲಿ, ನೀವು ತಂಡಕ್ಕೆ ಕೊಡುಗೆ ನೀಡಿದ್ದೀರಿ. ಒತ್ತಡದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ ಎಂದು ಜನರು ನಿಮ್ಮನ್ನು ನಂಬುತ್ತಾರೆ. ನಿಮ್ಮೆಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುತ್ತೇನೆ” ಎಂದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Andy Flower RCB: ನೀವು ನಮ್ಮ ತಂಡದ ಹಾರ್ಟ್​​ಬೀಟ್​, ನಮ್ಮೆಲ್ಲರಿಗೂ ಸ್ಪೂರ್ತಿ! ಆರ್​​ಸಿಬಿ ಹೆಡ್​​ ಕೋಚ್​ ಪ್ರಶಂಸಿಸಿದ್ದು ಯಾರನ್ನ ಗೊತ್ತಾ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed