Last Updated:
Ranveer Singh: ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಣವೀರ್ ಸಿಂಗ್ ಅವರಿಗೆ ಡಾನ್ ಫ್ರಾಂಚೈಸಿಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬರ ಬಗ್ಗೆ ಹಾಗೂ ಉದ್ಯಮದ ಬಗ್ಗೆ ಅವರಿಗೆ ಅತ್ಯಂತ ಗೌರವವಿದೆ ಎಂದು ತಿಳಿಸಿದ್ದಾರೆ.
ಡಾನ್ 3 ಚಿತ್ರದಿಂದ ಹೊರಬಂದಾಗಿನಿಂದ ಉಂಟಾಗುತ್ತಿರುವ ವಿವಾದದ ಬಗ್ಗೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಈಗ ಕಠಿಣ ನಿಲುವು ತೆಗೆದುಕೊಂಡಿದೆ. ಚಿತ್ರದ ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ದೂರಿನ ನಂತರ, ಫೆಡರೇಶನ್ ರಣವೀರ್ ಸಿಂಗ್ ವಿರುದ್ಧ ‘ಅಸಹಕಾರ ರಹಿತ ನಿರ್ದೇಶನ’ ಹೊರಡಿಸಿದೆ. ತಕ್ಷಣವೇ, ರಣವೀರ್ ಸಿಂಗ್ ತಂಡವು ಈ ವಿಷಯದ ಬಗ್ಗೆ ನಟನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಆದರೆ ರಣವೀರ್ ಸಿಂಗ್ ಈ ವಿಷ್ಯದ ಬಗ್ಗೆ ಇನ್ನು ಮೌನವಾಗಿಯೇ ಇದ್ದಾರೆ. ಈ ಸಂದರ್ಭದಲ್ಲಿ ಅವರ ತಂಡ ಪ್ರತಿಕ್ರಿಯೆ ನೀಡಿ ಅವರು ಎಂದಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ವೃತ್ತಿಪರ ವಿಷಯಗಳು ಮತ್ತು ವೈಯಕ್ತಿಕ ಸಂಬಂಧಗಳನ್ನು ಘನತೆ, ತಿಳುವಳಿಕೆ ಮತ್ತು ಪರಸ್ಪರ ಗೌರವದಿಂದ ನಿರ್ವಹಿಸಬೇಕು ಎಂದು ಅವರು ನಂಬುತ್ತಾರೆ.
ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಡಾನ್ 3 ನಿರ್ಮಾಣಕ್ಕೆ ಸಿದ್ಧವಾಗಿತ್ತು. ಚಿತ್ರಕಥೆ, ಸೆಟ್ ವಿನ್ಯಾಸ, ಲೊಕೇಷನ್ ಫೈನಲ್, ತಾಂತ್ರಿಕ ಸಿದ್ಧತೆ ಹೀಗೆ ಅನೇಕ ಹಂತಗಳು ಪೂರ್ಣಗೊಂಡಿದ್ದವು. ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಣವೀರ್ ಸಿಂಗ್ ಚಿತ್ರದಿಂದ ಹಿಂದೆ ಸರಿದಿದ್ದಾರೆ.ಈ ನಿರ್ಧಾರವು ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ತಂದುಕೊಟ್ಟಿದೆ ಎನ್ನಲಾಗುತ್ತಿದ್ದು, ಕೋಟ್ಯಂತರ ರೂಪಾಯಿ ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಖರ್ಚಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಫರ್ಹಾನ್ ಅಖ್ತರ್ ಅವರ ದೂರಿನ ನಂತರ, FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಮಾತನಾಡಿ ಚಲನಚಿತ್ರೋದ್ಯಮವು ನಂಬಿಕೆಯ ಮೇಲೆ ನಿರ್ಮಿಸಲಾದ ವ್ಯವಸ್ಥೆಯಾಗಿದೆ. ಒಬ್ಬ ನಿರ್ಮಾಪಕ ನಟನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ಇಡೀ ತಂಡವು ಅದಕ್ಕೆ ಅನುಗುಣವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಚಲನಚಿತ್ರ ತಯಾರಿ, ಶೂಟಿಂಗ್ ಯೋಜನೆ, ಸ್ಥಳಗಳು, ತಾಂತ್ರಿಕ ತಂಡ, ಸೆಟ್ಗಳು ಮತ್ತು ಇತರ ಎಲ್ಲದಕ್ಕೂ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ.
ಚಲನಚಿತ್ರ ತಯಾರಿ ಪ್ರಾರಂಭವಾದ ತಕ್ಷಣ, ನಿರ್ಮಾಪಕರ ಹಣ ನಿರಂತರವಾಗಿ ಹರಿಯಲು ಪ್ರಾರಂಭಿಸುತ್ತದೆ ಎಂದು ಅವರು ಹೇಳಿದರು. ಆದ್ದರಿಂದ, ಒಬ್ಬ ನಟ ಕೊನೆಯ ಕ್ಷಣದಲ್ಲಿ ಯೋಜನೆಯನ್ನು ತೊರೆದರೆ, ಅದು ನಿರ್ಮಾಪಕರ ಮೇಲೆ ಮಾತ್ರವಲ್ಲದೆ ನೂರಾರು ಕಾರ್ಮಿಕರು ಮತ್ತು ತಂತ್ರಜ್ಞರ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
Bangalore [Bangalore],Bangalore,Karnataka
May 25, 2026 11:02 PM IST













