Last Updated:
ಮೈಸೂರಿನ ‘ನೆಮ್ಮದಿ ಊಟ’ ರೆಸ್ಟೋರೆಂಟ್ಗೆ ವಿಜಯಲಕ್ಷ್ಮಿ ದರ್ಶನ್ ಹೋಗಿದ್ದಾರೆ. ಇಲ್ಲಿ ಹೋಗಲು ಕಾರಣವು ಇದೆ. ಅದೇನು ಅನ್ನೊದು ಇಲ್ಲಿದೆ ಓದಿ.
ದರ್ಶನ್ (Darshan) ಅಕ್ಕನ ಮಗ ಚಂದು ಒಂದು ರೆಸ್ಟೋರೆಂಟ್ (Restaurant) ಓಪನ್ ಮಾಡಿದ್ದಾರೆ. ಇದಕ್ಕೆ ಇಟ್ಟಿರೋ ಹೆಸರು ತುಂಬಾನೆ ಚೆನ್ನಾಗಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಅನ್ನುವ ಡೆವಿಲ್ ಚಿತ್ರದ ಹಾಡನ್ನು ಇದು ನೆನಪಿಸುತ್ತದೆ. ಮೈಸೂರಿನ ಫುಡ್ ಫೆಸ್ಟಿವಲ್ (Food Festival) ಅಲ್ಲೂ ಚಂದು ಒಂದು ಸ್ಟಾಲ್ ಹಾಕಿದ್ದರು. ಅಲ್ಲೂ “ನೆಮ್ಮದಿಯಾಗಿ ಊಟ ಮಾಡಿ” ಅಂತ ಹೆಸರು ಇಟ್ಟಿದ್ದರು. ಅದಾದ್ಮೇಲೆ ಇದೀಗ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಈ ರೆಸ್ಟೋರೆಂಟ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿದರ್ಶನ್ (Vijaylakshmi Darshan) ಬಂದಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ದರ್ಶನ್ ಫ್ಯಾನ್ಸ್ ಅದನ್ನ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.














