Last Updated:
ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪ್ರಚಾರಕ್ಕೆ ಕಿಚ್ಚನ ಅಳಿಯ ಸಂಚಿತ್ ಸಂಜೀವ್ (Sanchith Sanjeev) ಉತ್ತರ ಕರ್ನಾಟಕಕ್ಕೂ ಬಂದಿದ್ದಾರೆ. ಇಲ್ಲಿಯ ಜನರ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢ ಮಠಕ್ಕೂ (Shri Siddharoodha Math) ಹೋಗಿದ್ದಾರೆ. ಸಿದ್ಧಾರೂಢರ (Siddharoodha) ಆಶೀರ್ವಾದ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಕೂಡ ಸಾಥ್ ಕೊಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ
ಈ ಸಿನಿಮಾದಲ್ಲಿ ನಟ ಮ್ಯಾಕ್ಸ್ ಮಂಜು, ಮಯೂರ್ ಪಟೇಲ್, ಕಾಜಲ್ ಕುಂದರ್, ಹರಿಣಿ ಹೀಗೆ ಕನ್ನಡದ ಪ್ರಮುಖ ಕಲಾವಿದರು ನಟಿಸಿದ್ದಾರೆ. ಇವರೆಲ್ಲರ ಪಾತ್ರಗಳ ಪರಿಚಯವನ್ನ ಸುದೀಪ್ ಅವರು ಟೀಸರ್ ಅಲ್ಲಿಯೇ ಮಾಡಿದ್ದಾರೆ.
ಈ ಚಿತ್ರದ ಪ್ರಚಾರ ಜೋರಾಗಿದೆ. ಮೊದಲ ಚಿತ್ರದಲ್ಲಿಯೇ ಜನರ ಹೃದಯ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಮ್ಯಾಂಗೋ ಪಚ್ಚ ಅನ್ನುವ ಪಾತ್ರವನ್ನೆ ಸಂಚಿತ್ ಸಂಜೀವ್ ಇಲ್ಲಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲೂ ಈ ಚಿತ್ರದ ಪ್ರಚಾರ ಮಾಡಿದ್ದಾರೆ. ಅದಕ್ಕೂ ಮೊದಲು ಇಲ್ಲಿ ಶ್ರೀ ಸಿದ್ಧಾರೂಢ ಮಠಕ್ಕೂ ಹೋಗಿದ್ದಾರೆ. ಸಿದ್ಧರೂಢರ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಟ ಮಯೂರ್ ಪಟೇಲ್, ಚಿತ್ರದಲ್ಲಿ ಶ್ರೀಧರ್ ಪಾತ್ರ ಮಾಡಿರೋ ನಟ ಮ್ಯಾಕ್ಸ್ ಮಂಜು ಕೂಡ ಇಲ್ಲಿ ಆಗಮಿಸಿದ್ದಾರೆ. ಇವರೆಲ್ಲ ಸೇರಿಯೇ ಮಠಕ್ಕೆ ಬಂದು ಹೋಗಿದ್ದಾರೆ. ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದುಕೊಂಡಿದ್ದಾರೆ.
ವಿಡಿಯೋಗಳು ವೈರಲ್
ಸಂಚಿತ್ ಸಂಜೀವ್ ಅವರ ಹುಬ್ಬಳ್ಳಿ ವಿಸಿಟ್ ವಿಡಿಯೋಗಳು ವೈರಲ್ ಆಗುತ್ತಿವೆ. ಇನ್ಸ್ಟಾಗ್ರಾಮ್ ಪೇಜ್ ಅಲ್ಲೂ ಈ ವಿಡಿಯೋಗಳು ಶೇರ್ ಆಗಿವೆ.
ಇದರೊಟ್ಟಿಗೆ ಸಂಚಿತ್ ಸಂಜೀವ್ ತಮ್ಮ ಮೊದಲ ಚಿತ್ರಕ್ಕಾಗಿಯೇ ಹುಬ್ಬಳ್ಳಿಗೆ ಬಂದು ಜನರ ಪ್ರೀತಿಯನ್ನು ಸ್ವೀಕರಿಸಿದ್ದಾರೆ. ಈ ಒಂದು ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಮ್ಯಾಂಗೋ ಪಚ್ಚ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಜೂನ್-5 ರಂದು ಈ ಚಿತ್ರ ಎಲ್ಲೆಡೆ ತೆರೆಗೆ ಬರ್ತಿದೆ. ಮೊದಲ ಚಿತ್ರ ಇದು ಅನ್ನುವ ಹಾಗೆ ಇಲ್ವೇ ಇಲ್ಲ. ಅಷ್ಟು ಚೆನ್ನಾಗಿಯೇ ಸಂಚಿತ್ ಸಂಜೀವ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಟೀಸರ್ ಮತ್ತು ಹಾಡುಗಳು ಆ ಭರವಸೆಯನ್ನು ಮೂಡಿಸುತ್ತಿವೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ಅರಗಿಣಿಯೇ ಅನ್ನುವ ಹಾಡನ್ನ ಸುದೀಪ್ ಮಗಳು ಸಾನ್ವಿ ಹಾಡಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರವನ್ನ ವಿವೇಕ್ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವಾಗಿದೆ. ಸುಪ್ರಿಯಾನ್ವಿ ಹಾಗೂ ಕೆಆರ್ಜಿ ಈ ಚಿತ್ರವನ್ನ ನಿರ್ಮಿಸಿದೆ.
ಮೈಸೂರಿನ ಕಥೆಯನ್ನ ಈ ಚಿತ್ರದಲ್ಲಿ ನೋಡಬಹುದು. 2002 ರಲ್ಲಿ ಮೈಸೂರು ಬದಲಾಗುತ್ತಿತ್ತು. ಟೈಮ್ ಕೂಡ ಚೇಂಜ್ ಆಗುತ್ತಿತ್ತು ಅನ್ನೋದನ್ನ ಸುದೀಪ್ ತಮ್ಮ ನಿರೂಪಣೆಯಲ್ಲಿ ತುಂಬಾನೆ ಚೆನ್ನಾಗಿ ಹೇಳಿದ್ದಾರೆ. ಈ ಮೂಲಕ ಇಡೀ ಚಿತ್ರ ಯಾವ ಕಾಲಘಟ್ಟದ ಕಥೆ ಆಗಿದೆ ಅನ್ನೋದನ್ನು ಹೇಳಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
May 22, 2026 10:57 PM IST













