Sad News: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪ್ರವಾಹಕ್ಕೆ ಸಿಲುಕಿ ನಾಲ್ವರು ಅಪ್ರಾಪ್ತ ಬಾಲಕರು ನಾಪತ್ತೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ), ದೆಹಲಿ ಅಗ್ನಿಶಾಮಕ ಸೇವೆ ಮತ್ತು ಸ್ಥಳೀಯ ಪೊಲೀಸರ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ.

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯ ಅಲಿಪುರ ಪ್ರದೇಶದ ಹಿರಾಂಕಿ ಗ್ರಾಮದ ಬಳಿ ಯಮುನಾ ನದಿಯಲ್ಲಿ (Yamuna River) ಸ್ನಾನ ಮಾಡುತ್ತಿದ್ದಾಗ ಬಲವಾದ ಪ್ರವಾಹಕ್ಕೆ ಸಿಲುಕಿ  ನಾಲ್ವರು ಅಪ್ರಾಪ್ತ ವಯಸ್ಕರು ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ (Sad News) ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಭಾನುವಾರ ಸಂಜೆ ಐದು ಮಕ್ಕಳ ಗುಂಪು ಆಟವಾಡಲು ಯಮುನಾ ನದಿಯ ದಡಕ್ಕೆ ಹೋಗಿದ್ದರು. ಅವರಲ್ಲಿ ನಾಲ್ವರು ನೀರಿನ ಆಳ ಮತ್ತು ಹರಿವಿನ ತೀವ್ರತೆಯನ್ನು ಅರಿಯದೆ ನೀರಿಗೆ ಇಳಿದರು. ಮಳೆಗಾಲ ಮತ್ತು ಮೇಲಿನಿಂದ ನೀರು ಬಿಡುಗಡೆಯಾದ ಕಾರಣ ನೀರಿನ ಮಟ್ಟ ಹೆಚ್ಚಾಗಿದ್ದರಿಂದ, ಬಲವಾದ ಪ್ರವಾಹಕ್ಕೆ ಸಿಲುಕಿ ಅವರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರವೂ ಸತತ ಎರಡನೇ ದಿನ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಯಾವುದೇ ಮಕ್ಕಳ ಸುಳಿವು ಪತ್ತೆಯಾಗಿಲ್ಲ. ಅವಶೇಷಗಳು, ಹೂಳು ಮತ್ತು ಬಲವಾದ ನೀರಿನ ಹರಿವಿನಿಂದಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುವಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ.

ಈತನ್ಮಧ್ಯೆ, ಕಾಣೆಯಾದವರ ಕುಟುಂಬ ಸದಸ್ಯರು ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಗಮನಾರ್ಹ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು. ಕಾಣೆಯಾದ ಹುಡುಗರಲ್ಲಿ ಒಬ್ಬರಾದ ಅಂಶು ಅವರ ತಂದೆ ಶ್ಯಾಮ್ ಬಿಹಾರಿ ಶಾ ಅವರು ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಹೋದರು, ಆದರೆ ಅಲ್ಲಿ ಯಾವುದೇ ರಕ್ಷಣಾ ಚಟುವಟಿಕೆ ಕಾಣಲಿಲ್ಲ ಎಂದು ಹೇಳಿದರು.

‘ಇಲ್ಲಿ ಏನೂ ಮಾಡಲಾಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದರೆ, ನನ್ನ ಸಹೋದರನನ್ನು ಬೇಗ ಪತ್ತೆ ಮಾಡಬಹುದಿತ್ತು. ಶೋಧ ಕಾರ್ಯಾಚರಣೆಯಲ್ಲಿ ಭಾರಿ ವಿಳಂಬವಾಗಿದೆ. ಕೆಲಸ ಇದೇ ವೇಗದಲ್ಲಿ ಮುಂದುವರಿದರೆ, ನನ್ನ ಸಹೋದರ ಸಾಯುತ್ತಾನೆ’ ಎಂದು ಕಾಣೆಯಾದ ಇನ್ನೊಬ್ಬ ಮಗುವಿನ ಸಹೋದರಿ ಖುಷಿ ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed