Peaceful Life: ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್‍ಬೈ, ಹಿಮಾಲಯದ ಕಣಿವೆಯಲ್ಲಿ ಚಹಾ ಮಾರಾಟ ಮಾಡುವುದೇ ನೆಮ್ಮದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಶಾಂತಿಯುತ ಜೀವನ(PC: economictimes )


Last Updated:

ಬೆಂಗಳೂರು ಯುವತಿ ಕಾರ್ಪೊರೇಟ್ ಕೆಲಸ ಬಿಟ್ಟು ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ಚಹಾ ಕೆಫೆ ಆರಂಭಿಸಿ ನೆಮ್ಮದಿ ಜೀವನ ಆರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ.

ಶಾಂತಿಯುತ ಜೀವನ(PC: economictimes )
ಶಾಂತಿಯುತ ಜೀವನ(PC: economictimes )

ಬೆಂಗಳೂರು: ನೀವು ಕೂಡ ಪ್ರತಿದಿನ ಬೆಳಿಗ್ಗೆ ಎದ್ದು ಟ್ರಾಫಿಕ್‍ನಲ್ಲಿ (Traffic) ಸಿಲುಕಿ, ಆಫೀಸಿನ (Office) ಡೆಡ್‍ಲೈನ್‍ಗಳ ಒತ್ತಡದಲ್ಲಿ ಬೇಸತ್ತಿದ್ದೀರಾ? ಅಂತಹ ಒತ್ತಡದ ಜೀವನವನ್ನೇ ಬಿಟ್ಟು ಬಂದು, ಇದೀಗ ಹಿಮಾಲಯದ (Himalaya) ಪ್ರಶಾಂತ ಮಡಿಲಲ್ಲಿ ನೆಮ್ಮದಿ (Peaceful Life) ಕಂಡುಕೊಂಡಿದ್ದಾಳೆ ಬೆಂಗಳೂರಿನ (Bengaluru) ಯುವತಿಯೊಬ್ಬಳು.

ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ

ಸಾಮಾನ್ಯವಾಗಿ ನಾವು ಕಾರ್ಪೊರೇಟ್ ಕಂಪನಿಗಳಲ್ಲಿ ಕೈತುಂಬ ಸಂಬಳ ಬರುವ ಕೆಲಸ ಬಿಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಈ ಬೆಂಗಳೂರು ಮಹಿಳೆ, ತನ್ನ ಅತೃಪ್ತಿಕರ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ, ನೇರವಾಗಿ ಹಿಮಾಲಯಕ್ಕೆ ತೆರಳಿದ್ದಾಳೆ ಎಂದು ಇನ್‍ಸ್ಟಾಗ್ರಾಮ್ ವರದಿ ಮಾಡಿದೆ.
ನೆಮ್ಮದಿಯ ಹುಡುಕಾಟದಲ್ಲಿ ಚಹಾ ಅಂಗಡಿ

ಈಕೆ ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ತನ್ನದೇ ಆದ ಒಂದು ಪುಟ್ಟ ಕೆಫೆಯನ್ನು ತೆರೆದಿದ್ದಾಳೆ. ಅಲ್ಲಿ ಅಪರಿಚಿತರಿಗೆ ಚಹಾ ನೀಡುತ್ತಾ, ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾಳೆ. ಐಷಾರಾಮಿ ಸೌಕರ್ಯಗಳಿಗಿಂತ, ಹೃದಯಕ್ಕೆ ಹತ್ತಿರವಾದ ನೆಮ್ಮದಿಯನ್ನು ಈಕೆ ಆರಿಸಿಕೊಂಡಿದ್ದಾಳೆ.
ನನ್ನಂತೆಯೇ ಭಾಸವಾಗುತ್ತದೆ

ಅವಳು ತನ್ನ ಹೊಸ ದಿನಚರಿಯನ್ನು ಹೀಗೆ ವಿವರಿಸಿದಳು, “ಈಗ ನನ್ನ ಬೆಳಗಿನ ಸಮಯ ಹೀಗಿದೆ – ಚಾಯ್ ಬಡಿಸುವುದು, ಅಪರಿಚಿತರೊಂದಿಗೆ ಮಾತನಾಡುವುದು, ಸ್ವಲ್ಪ ಆಳವಾಗಿ ಉಸಿರಾಡುವುದು. ಇದು ಪ್ರತಿದಿನ ಆಕರ್ಷಕವಾಗಿಲ್ಲ. ಆದರೆ ಅಂತಿಮವಾಗಿ ನನ್ನಂತೆಯೇ ಭಾಸವಾಗುತ್ತದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಅಭಿಪ್ರಾಯ

ಈ ವಿಷಯವು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಗರೀಬ್ ಮೆಂಟಾಲಿಟಿ ಎಂದು ಟೀಕಿಸಿದರೆ, ಮತ್ತೆ ಕೆಲವರು ಒಬ್ಬೊಬ್ಬರ ಜೀವನ ದೃಷ್ಟಿಕೋನ ಒಂದೊಂದು, ಬದುಕನ್ನು ಅವರವರ ದಾರಿಯಲ್ಲಿ ಬದುಕಲಿ ಎಂದು ಬೆಂಬಲಿಸಿದ್ದಾರೆ. ಇನ್ನು ಕೆಲವರು, ಇದನ್ನು ಗ್ಲೋರಿಫೈ ಮಾಡಬೇಡಿ, ನೈಜ ಜೀವನದ ಕಠಿಣ ಪರಿಸ್ಥಿತಿ ಎದುರಾದಾಗ ಇದು ತುಂಬಾ ಕಷ್ಟವಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports