Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು? | Man returns home 13 days after being declared dead at Mahakumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಹಾಕುಂಭ


Last Updated:

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್‌ರಾಜ್‌ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್​ ಆಗಿದ್ದಾರೆ.

ಮಹಾಕುಂಭ
ಮಹಾಕುಂಭ

ಪ್ರಯಾಗ್​ರಾಜ್​: 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಲ್ಲೊಂದು ಇಲ್ಲೊಂದು ನಡೆಯುವ ಘಟನೆಯು ಜನರನ್ನು ಬೆಚ್ಚಿಬೀಳಿಸುತ್ತದೆ. ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಪ್ರಯಾಗ್​ರಾಜ್​ನಲ್ಲಿ (Prayagraj) ನಡೆದ ಕಾಲ್ತುಳಿತದಲ್ಲಿ ಮೃತನೊಬ್ಬನಿದ್ದಾನೆ ಎನ್ನಲಾದ ವ್ಯಕ್ತಿಯು ತನ್ನ 13 ದಿನದ ಕಾರ್ಯದ ವೇಳೆಯಲ್ಲಿ ಮನೆಗೆ ವಾಪಸ್ ಬಂದಿದ್ದಾನೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ ವ್ಯಕ್ತಿಯೊಬ್ಬರು ಮಂಗಳವಾರ ಮನೆಗೆ ಮರಳಿದ್ದು, ವ್ಯಕ್ತಿಯೊಬ್ಬನ ಮರಣದ ಹದಿಮೂರನೇ ದಿನದಂದು ನಡೆದ ಧಾರ್ಮಿಕ ವಿಧಿವಿಧಾನಗಳಿಗಾಗಿ ತನ್ನ ನೆರೆಹೊರೆಯವರು ಒಟ್ಟುಗೂಡುತ್ತಿರುವುದನ್ನು ನೋಡಿದ್ದಾರೆ.

ಸಾಧುಗಳೊಂದಿಗೆ ಇದ್ದೇ…

ಹೌದು, ವ್ಯಕ್ತಿಯನ್ನು ಯಾಗ್ರಾಜ್ ಝೀರೋ ರಸ್ತೆ ಪ್ರದೇಶದ ಚಾಚಂದ್ ಗಾಲಿಯ ನಿವಾಸಿ ಖುಂಟಿ ಗುರು ಎಂದು ಗುರುತಿಸಲಾಗಿದ್ದು, ಆತನನ್ನು ಇಷ್ಟು ದಿನ ಎಲ್ಲಿದ್ದೀರಿ ಎಂದು ಕೇಳಿದಾಗಸಾಧುಗಳೊಂದಿಗೆ ಇದ್ದೇನೆಎನ್ನುವ ಮೂಲಕ ಉತ್ತರಿಸಿದ್ದಾರೆ. ಇನ್ನು ಸಾಧುಗಳೊಂದಿಗಿದ್ದ ಸಮಯದಲ್ಲಿ ಚಿಲ್ಲಂ ಸೇದುತ್ತಿದ್ದ ಎನ್ನಲಾಗಿದೆ. ಇನ್ನು ಆ ನಶೆಯ ಕಾರಣದಿಂದ ಏನು ಗೊತ್ತಾಗಲಿಲ್ಲ ಎಂದಿದ್ದಾರೆ.

ಇದನ್ನು ಓದಿ: ಕೆಲಸದ ಸಮಯದಲ್ಲೂ ತಾಯ್ತನದ ಜವಾಬ್ದಾರಿ; ಲೇಡಿ ‘ಕಾನ್ಸ್‌ಟೇಬಲ್‌‘ಗೆ ಸೆಲ್ಯೂಟ್‌!

ಖುಂಟಿ ಗುರು ಮರಣವೊಂದಿದ ಎಂದು ಘೋಷಣೆಯಾದ ಎರಡು ವಾರಗಳ ತರುವಾಯು ಆತನ ಮನೆಯಲ್ಲಿ ಕಾರ್ಯ ನಡೆಯುವಾಗ ಆಟೋದಿಂದ ಬಂದಿದ್ದಾನೆ. ಇದನ್ನು ನೋಡಿದ ಆತನ ಮನೆಯವರು, ಬಲು ಖುಷಿಯಾಗಿದ್ದಾರೆ. ಈ ಸಮಯದಲ್ಲಿ ನೀವೆಲ್ಲರೂ ಏನು ಮಾಡುತ್ತಿದ್ದೀರಿ? ಎಂದು ಅವನು ನಗುತ್ತಾ ಕೇಳಿದನು, ಆಗ ನೆರದಿದ್ದ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಲವು ದಿನಗಳ ವಿಫಲ ಹುಡುಕಾಟ

ಇನ್ನು ಸಮಾಜ ಸೇವಕ ಅಭಯ್ ಅವಸ್ಥಿ ಅವರು ಪ್ರತಿಕ್ರಿಯಿಸಿ, ಜನವರಿ 28 ರ ಸಂಜೆ ಖುಂಟಿ ಗುರು ಅವರು ಮೌನಿ ಅಮವಾಸ್ಯೆಯಂದು ಸಂಗಮದಲ್ಲಿ ಸ್ನಾನಕ್ಕೆ ಹೋಗುತ್ತಿರುವುದಾಗಿ ಇತರರಿಗೆ ತಿಳಿಸಿ ಹೊರಟುಹೋದದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೆ ಮರುದಿನ ಬೆಳಿಗ್ಗೆ ಕಾಲ್ತುಳಿತ ಸಂಭವಿಸಿ ಅವನ ಯಾವುದೇ ಕುರುಹು ಸಿಗದಿದ್ದಾಗ, ಅವನ ನೆರೆಹೊರೆಯವರು ಕೆಟ್ಟದ್ದಕ್ಕೆ ಭಯಪಟ್ಟರು. ಇದರೊಂದಿಗೆ ಹಲವು ದಿನಗಳ ಕಾಲ ವಿಫಲವಾದ ಹುಡುಕಾಟದ ನಂತರ, ಅವರು, ಊಹಿಸಿದ ಅದೃಷ್ಟವನ್ನು ಒಪ್ಪಿಕೊಂಡಿದ್ದಾರೆ. ಆದರ ಪರಿಣಾಮವಾಗಿ ಅವನ ನೆನಪಿನಲ್ಲಿ ಆಚರಣೆಗಳನ್ನು ಆಯೋಜಿಸಿದ್ದಾರೆ.

ಕಾಲ್ತುಳಿತದಿಂದ 30 ಜನರು ಸಾವು

ಇನ್ನು ಜನವರಿ 29 ರ ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದರು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಕುರಿತು ಯೋಗಿ ಆದಿತ್ಯನಾಥ್​​ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ನ್ಯಾಯಾಂಗ ತನಿಖೆಯನ್ನು ನಡೆಸುತ್ತಿದೆ.

ಐಎಎನ್‌ಎಸ್ ವರದಿಯ ಪ್ರಕಾರ, ಬುಧವಾರ (ಜನವರಿ 29, 2025) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಕಾಲ್ತುಳಿತದಿಂದ 30 ಜನರು ಸಾವನ್ನಪ್ಪಿದ ನಂತರ, ವಕೀಲ ವಿಶಾಲ್ ತಿವಾರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮಹಾಕುಂಭದಲ್ಲಿ ಸೂಕ್ತ ರಕ್ಷಣೆ, ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದ್ದರು. ಎಲ್ಲಾ ರಾಜ್ಯಗಳ ಹೊರತಾಗಿ ಅಲ್ಲಿ ವ್ಯವಸ್ಥೆಗಳು ಸೌಲಭ್ಯ ಕೇಂದ್ರ, ವೈದ್ಯಕೀಯ ಸಿಬ್ಬಂದಿ, ವಿದ್ಯುನ್ಮಾನ ಸಂದೇಶ ರವಾನೆ ಮುಂತಾದ ವ್ಯವಸ್ಥೆಗಳನ್ನು ಒದಗಿಸುವಂತೆ ವಿನಂತಿಸಿದ್ದರು. ಮುಂದುವರೆದು ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಇದು ಯಾವುದೇ ಒಂದು ರಾಜ್ಯದ ಕಾರ್ಯಕ್ರಮವಲ್ಲ, ಎಲ್ಲಾ ರಾಜ್ಯಗಳ ಜನರು ಪ್ರಯಾಗರಾಜ್‌ಗೆ ಹೋಗುತ್ತಿದ್ದಾರೆ, ಆದ್ದರಿಂದ ಈ ಕಾರ್ಯಕ್ರಮದ ಬಗ್ಗೆ ಎಲ್ಲಾ ರಾಜ್ಯಗಳ ಸಾಮೂಹಿಕ ಜವಾಬ್ದಾರಿ ಇರಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದರು.

ಕನ್ನಡ ಸುದ್ದಿ/ ನ್ಯೂಸ್/ದೇಶ-ವಿದೇಶ/

Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports