KSDL: ಮನೆ ಮುಂದೆ ಬಿದ್ದ 40 ವರ್ಷದ ಮರ ತಂದು ಕೊಡ್ತು 28 ಲಕ್ಷ ರೂಪಾಯಿ; 85 ವರ್ಷದ ಅಜ್ಜನಿಗೆ ಮಳೆ-ಗಾಳಿ ತಂದ ಲಾಟರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಶ್ರೀಗಂಧ ಮಾರಾಟ


Last Updated:

ಮನೆಯಂಗಳದಲ್ಲಿ 40 ವರ್ಷ ಬೆಳೆಸಿದ ಒಂದೇ ಒಂದು ಶ್ರೀಗಂಧ ಮರ ಉರುಳಿ ಬಿದ್ದರೂ, ಅದೇ ಮರ 85 ವರ್ಷದ ಹಿರಿಯರಿಗೆ ಬರೋಬ್ಬರಿ ₹28 ಲಕ್ಷ ಆದಾಯ ತಂದುಕೊಟ್ಟಿದೆ. ಈ ಕಾನೂನುಬದ್ಧ ಮಾರಾಟದ ಯಶೋಗಾಥೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಶ್ರೀಗಂಧ ಮಾರಾಟ
ಶ್ರೀಗಂಧ ಮಾರಾಟ

ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ (Rain) ಮನೆಯಂಗಳದ ಮರವೊಂದು ಉರುಳಿ ಬಿತ್ತು ಎಂದು ಯಾರಾದರೂ ಬೇಸರಪಡುತ್ತಾರೆ. ಆದರೆ, ಆ ಉರುಳಿ ಬಿದ್ದ ಮರವೇ (Tree) ಬರೋಬ್ಬರಿ 28 ಲಕ್ಷ ರೂಪಾಯಿಗಳ ನೋಟಿನ ಕಂತೆಗಳನ್ನು ತಂದು ಸುರಿಯುತ್ತದೆ ಎಂದರೆ ನೀವು ನಂಬಲೇಬೇಕು! ಹೌದು, ಇದು ಯಾವುದೇ ಸಿನಿಮಾದ ಕಾಲ್ಪನಿಕ ಕಥೆಯಲ್ಲ, ಬದಲಾಗಿ ಬೆಂಗಳೂರಿನ (Bengaluru) ಮಲ್ಲೇಶ್ವರಂನ 17ನೇ ಕ್ರಾಸ್‌ನಲ್ಲಿ ವಾಸವಿರುವ 85 ವರ್ಷದ ಹಿರಿಯ ವ್ಯಾಪಾರೋದ್ಯಮಿ ಎನ್. ಜಿ. ಕೇಸರಿ ಅವರ ಮನೆಯಂಗಳದಲ್ಲಿ ನಡೆದ ಅಚ್ಚರಿಯ ನೈಜ ಘಟನೆ. ಕೇವಲ ಒಂದು ಮರ, ತೆರಿಗೆ ಮತ್ತು ಸಾಗಣೆ ವೆಚ್ಚಗಳನ್ನೆಲ್ಲಾ ಕಳೆದ ನಂತರವೂ ಬರೋಬ್ಬರಿ ₹28 ಲಕ್ಷ ನಿವ್ವಳ ಆದಾಯ ತಂದುಕೊಟ್ಟಿದೆ. ಇದರ ಜೊತೆಗೆ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯಿಂದ ಪ್ರತಿಷ್ಠಿತ ‘ಶ್ರೀಗಂಧ ಶಿರೋಮಣಿ’ ಎಂಬ ಅತ್ಯುನ್ನತ ಗೌರವವೂ (Honor) ಕೇಸರಿ ಅವರ ಮುಡಿಗೇರಿದೆ.

ಅದೃಷ್ಟ ಒಲಿದು ಬಂದ ಆ ಜೂನ್ ತಿಂಗಳ ದಿನ ಮತ್ತು 40 ವರ್ಷದ ಇತಿಹಾಸ

ಸುಮಾರು 40 ವರ್ಷಗಳ ಹಿಂದಿನ ಮಾತು. ಕೇಸರಿ ಅವರ ಮನೆಯಂಗಳದಲ್ಲಿ ಎಲ್ಲೋ ಬಿದ್ದ ಬೀಜವೊಂದು ಪುಟ್ಟ ಗಿಡವಾಗಿ ಮೊಳಕೆಯೊಡೆದಿತ್ತು. ಮನೆಯ ಇತರ ಗಿಡಗಳ ಜೊತೆಗೆ ಇದಕ್ಕೂ ನೀರು ಹಾಕಿ ಬೆಳೆಸಿದರು. ಆದರೆ, ಅದು ಬೆಳೆಯುತ್ತಾ ಹೋದಂತೆ, ಇದು ಸಾಮಾನ್ಯ ಮರವಲ್ಲ, ಕರುನಾಡಿನ ಹೆಮ್ಮೆಯ ‘ಶ್ರೀಗಂಧ’ ಎಂಬುದು ಅರಿವಿಗೆ ಬಂತು. ಶ್ರೀಗಂಧದ ಪರಿಮಳ ಹರಡುತ್ತಿದ್ದಂತೆ ಕಳ್ಳರ ಕಣ್ಣು ಕೂಡ ಇದರ ಮೇಲೆ ಬಿತ್ತು. ಮರವನ್ನು ಕತ್ತರಿಸುವ ಹಲವು ವಿಫಲ ಪ್ರಯತ್ನಗಳು ನಡೆದಾಗ, ಎಚ್ಚೆತ್ತ ಕೇಸರಿ ಅವರು ಮರದ ಸುತ್ತಲೂ ಭದ್ರವಾದ ಕಬ್ಬಿಣದ ಬೇಲಿಯನ್ನು ಅಳವಡಿಸಿ ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಂಡು ಬಂದರು. ಆದರೆ, 2026ರ ಜೂನ್ ಎರಡನೇ ವಾರದಲ್ಲಿ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ಪಕ್ಕದಲ್ಲಿದ್ದ ಬೃಹತ್ ಮರವೊಂದು ಈ ಶ್ರೀಗಂಧದ ಮರದ ಬೇಲಿಯ ಮೇಲೆ ಉರುಳಿ, ಪರಿಣಾಮವಾಗಿ ಶ್ರೀಗಂಧದ ಮರವೂ ನೆಲಕ್ಕುರುಳಿತು. ಇದೇ ಘಟನೆ ಕೇಸರಿ ಅವರ ಪಾಲಿಗೆ ವರದಾನವಾಗಿ ಪರಿಣಮಿಸಿತು.

ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕ ಮಾರಾಟ: 1 ಟನ್ ಮರಕ್ಕೆ ಸಿಕ್ತು 28 ಲಕ್ಷ!

ಮರ ಬಿದ್ದ ತಕ್ಷಣ ಕೇಸರಿ ಅವರು ಅಕ್ರಮ ಮಾರ್ಗಗಳನ್ನು ಹಿಡಿಯದೆ, ನೇರವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ಮಹಜರು ಪ್ರಕ್ರಿಯೆ ಮುಗಿಸಿದರು. ಬಳಿಕ ಮೈಸೂರಿನ ಶ್ರೀಗಂಧ ಕೋಠಿಗೆ ಮರವನ್ನು ರವಾನಿಸಿ ಅತ್ಯುತ್ತಮ ಗುಣಮಟ್ಟದ ಪ್ರಮಾಣಪತ್ರ ಪಡೆದುಕೊಂಡರು. ಅಂತಿಮವಾಗಿ ಸರ್ಕಾರದ ಏಕಸ್ವಾಮ್ಯ ಹೊಂದಿರುವ ಕೆಎಸ್‌ಡಿಎಲ್ ಸಂಸ್ಥೆಗೆ ಹಂಚಿಕೆಯ ಮೂಲಕ ಇದನ್ನು ಮಾರಾಟ ಮಾಡಿದರು. ತೂಕ ಮಾಡಿದಾಗ ಮರ ಬಹುತೇಕ 1 ಟನ್ ತೂಗಿತ್ತು! 2025-26ನೇ ಹಣಕಾಸು ವರ್ಷದಲ್ಲಿ ಕೆಎಸ್‌ಡಿಎಲ್ ಸಂಸ್ಥೆಗೆ ಎರಡನೇ ಅತಿ ಹೆಚ್ಚು ಮೌಲ್ಯದ ಶ್ರೀಗಂಧವನ್ನು ಪೂರೈಕೆ ಮಾಡಿದ ಹಿರಿಮೆ ಕೇಸರಿ ಅವರದ್ದಾಗಿದ್ದು, ಈ ‘ಅರ್ಬನ್ ಸ್ಯಾಂಡಲ್‌ವುಡ್’ ಯಶಸ್ಸಿನ ಕಥೆಯನ್ನು ಪ್ರಜಾವಾಣಿ ವರದಿ ಮಾಡಿದೆ.
ಬೆಲೆ ಕೇಳಿದ್ರೆ ತಲೆ ತಿರುಗುತ್ತೆ: ಪ್ರತಿ ವರ್ಷ ಶೇಕಡಾ 20ರಷ್ಟು ಮೌಲ್ಯ ಹೆಚ್ಚಳ!

ಶ್ರೀಗಂಧದ ಮರದ ಮೌಲ್ಯವು ಅದರ ಹೃದಯಭಾಗ (Heartwood) ಮತ್ತು ಅದರಲ್ಲಿರುವ ಎಣ್ಣೆಯನ್ನು ಅವಲಂಬಿಸಿರುತ್ತದೆ. ಗುಣಮಟ್ಟದ ಆಧಾರದ ಮೇಲೆ ಮರವನ್ನು 18 ಗ್ರೇಡ್‌ಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಕೆ.ಜಿಗೆ ₹3,000 ದಿಂದ ₹15,000+ ವರೆಗೆ ಬೆಲೆ ಇದೆ. ಅತ್ಯುತ್ತಮ ಗುಣಮಟ್ಟದ ಹೃದಯಭಾಗಕ್ಕೆ ಕೆ.ಜಿಗೆ ಬರೋಬ್ಬರಿ ₹7,000 ದಿಂದ ₹22,000+ ವರೆಗೆ ಬೆಲೆ ಸಿಗುತ್ತದೆ! ಒಂದು ಟನ್ ಮರವು ತೆರಿಗೆಯೆಲ್ಲಾ ಹೋಗಿ ಸುಲಭವಾಗಿ ₹20 ರಿಂದ ₹50 ಲಕ್ಷದವರೆಗೆ ಆದಾಯ ತರುತ್ತದೆ. ಕೆಎಸ್‌ಡಿಎಲ್ ಮತ್ತು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IWST) ಮಾದರಿಯನ್ನು ಅನುಸರಿಸಿ, ಇಂಟಿಗ್ರೇಟೆಡ್ ಫಾರ್ಮಿಂಗ್ ಜೊತೆಗೆ 15-25 ವರ್ಷಗಳ ಕಾಲ ಕಾಯುವ ತಾಳ್ಮೆ ಇದ್ದರೆ ಕೋಟ್ಯಾಧಿಪತಿಯಾಗುವುದು ಗ್ಯಾರಂಟಿ.

ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಕೋಟ್ಯಾಧಿಪತಿ ರೈತರ ಯಶಸ್ಸಿನ ಕಥೆಗಳು

ಇದನ್ನೂ ಓದಿ: Bengaluru: ಫುಟ್​​ಪಾತ್​ ತೆರವು ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಪರೇಷನ್, ವಾಹನ ಸವಾರರೇ ಹುಷಾರ್!

ಕೇವಲ ಬೆಂಗಳೂರಿನ ಕೇಸರಿ ಮಾತ್ರವಲ್ಲ, ರಾಯಚೂರಿನ ಕವಿತಾ ಮಿಶ್ರಾ ಅವರು ತಮ್ಮ 8 ಎಕರೆ ಬಂಜರು ಭೂಮಿಯಲ್ಲಿ 2500 ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಸಿ 2027ರ ವೇಳೆಗೆ ಕೋಟಿಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಕೊಪ್ಪಳದ ರಮೇಶ್ ಬಳೂಟಗಿ ಸಾಂಪ್ರದಾಯಿಕ ಕೃಷಿಯ ನಷ್ಟದಿಂದ ಬೇಸತ್ತು 100 ಎಕರೆಯಲ್ಲಿ ಶ್ರೀಗಂಧ ಅರಣ್ಯ ಸೃಷ್ಟಿಸಿದ್ದಾರೆ. ಹಾಸನದ ದೊಡ್ಡಮಗ್ಗೆ ರಂಗಸ್ವಾಮಿ 200ಕ್ಕೂ ಹೆಚ್ಚು ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇತ್ತ ತೆಲಂಗಾಣದ ಎಸ್ತರಾಪು ರೆಡ್ಡಿ ₹36 ಲಕ್ಷ ಮತ್ತು ಕೆ. ರವೀಂದ್ರ ರೆಡ್ಡಿ ₹30 ಲಕ್ಷ ಆದಾಯ ಗಳಿಸಿದ್ದರೆ, ಉತ್ತರ ಪ್ರದೇಶದ ಚಂದ್ರಪಾಲ್ ಸಿಂಗ್ ಸಾವಿರಾರು ಮರಗಳನ್ನು ನೆಟ್ಟು ಇಡೀ ಉತ್ತರ ಭಾರತದ ರೈತರಿಗೆ ಪ್ರೇರಣೆಯಾಗಿದ್ದಾರೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed