IPL 2026: ರಾಜಸ್ಥಾನ ರಾಯಲ್ಸ್ ಹಿನ್ನಡೆಗೆ ಈ ಆಟಗಾರನೇ ಕಾರಣ? ಲೀಗ್ ಆರಂಭದಲ್ಲೇ ಕೈಕೊಟ್ಟ ಪ್ಲೇಯರ್​ ಮೇಲೆ ಆಕ್ರೋಶ | ಕ್ರೀಡಾ ಸುದ್ದಿ | ACTPnews

rajasthan royals


Last Updated:

ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೋಲನ್ನು ಅನುಭವಿಸಿತು. ಇದಾದ ನಂತರ ರಾಜಸ್ಥಾನ ತಂಡದ ಕೋಚ್ ಕುಮಾರ್ ಸಂಗಕ್ಕಾರ ಆಟಗಾರರೊಬ್ಬರ ಮೇಲೆ ಭಾರೀ ಆಕ್ರೋಶಗೊಂಡಿದ್ದಾರೆ.

rajasthan royals
rajasthan royals

ಶುಕ್ರವಾರ (Friday) ಮುಲ್ಲನ್‌ಪುರ (Mullanpur) ದಲ್ಲಿ ನಡೆದ ಐಪಿಎಲ್ (IPL) 2026 ರ ಸೀಸನ್‌ನ ಕ್ವಾಲಿಫೈಯರ್ (Qualifier) -2 ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಗುಜರಾತ್ ಟೈಟಾನ್ಸ್ (GT) 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಫೈನಲ್‌ (Final) ಗೆ ತಲುಪಿತು. ಈಗ ಭಾನುವಾರ (Sunday) ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ (Champion) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಗುಜರಾತ್ ಎದುರಿಸಲಿದೆ. ಮತ್ತೊಂದೆಡೆ ಸೋಲಿನ ಬಳಿಕ ರಾಜಸ್ಥಾನ ತಂಡದ ಕೋಚ್ ಕುಮಾರ್ ಸಂಗಕ್ಕಾರ (Kumar Sangakkara) ಆಟಗಾರರೊಬ್ಬರ ಮೇಲೆ ಭಾರೀ ಆಕ್ರೋಶಗೊಂಡಿದ್ದಾರೆ.

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಐಪಿಎಲ್‌ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಕ್ಕೆ ಕುಮಾರ್ ಸಂಗಕ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ಆಟಗಾರರು ತಮ್ಮ ಒಪ್ಪಂದಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕಟ್ಟುನಿಟ್ಟಿನ ನೀತಿಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

ಸಂಗಕ್ಕಾರ ಆಕ್ರೋಶ

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಗಕ್ಕಾರ, ಈ ಆವೃತ್ತಿಯಲ್ಲಿ ಸ್ಯಾಮ್ ಕರನ್ ಗಾಯಗೊಂಡಿದ್ದು, ಅವರು ಆಟದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ನಮಗೆ ತಿಳಿಸಲಾಗಿತ್ತು.

ಕರನ್ ಮಾಡಿದ್ದು ಸರಿನಾ?

ತೊಡೆಸಂದು ಗಾಯದ ಕಾರಣ ಸ್ಯಾಮ್ ಕರನ್ ಐಪಿಎಲ್‌ 2026 ರ ಆವೃತ್ತಿಯಿಂದ ಹಿಂದೆ ಸರಿದರು. ಆದಾಗ್ಯೂ, ಇಂಗ್ಲೆಂಡ್‌ಗೆ ಹಿಂದಿರುಗಿದ ನಂತರ ಅವರು ತಮ್ಮ ಕೌಂಟಿ ತಂಡವಾದ ಸರ್ರೆ ಪರ ಟಿ 20 ಬ್ಲಾಸ್ಟ್‌ನಲ್ಲಿ ಮೂರು ಪಂದ್ಯಗಳನ್ನು ಆಡಿದರು. ರಾಜಸ್ಥಾನ ಸ್ಟಾರ್ ವಿದೇಶಿ ಆಟಗಾರರನ್ನು ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಈಗ ಕರನ್ ನಡೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಾಜಸ್ಥಾನಕ್ಕೆ ಗಾಯದ ಬರೆ

ತಮ್ಮ ತಂಡವು ಗಾಯಗಳಿಂದ ಕೂಡ ಬಳಲುತ್ತಿದೆ ಎಂದು ಸಂಗಕ್ಕಾರ ಹೇಳಿದರು. ಆಡಮ್ ಮಿಲ್ನೆ ಮತ್ತು ಶಿಮ್ರಾನ್ ಹೆಟ್ಮೈಯರ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಇಲ್ಲಿಗೆ ಬಂದಿರುವ ಅನೇಕ ಆಟಗಾರರಿದ್ದಾರೆ. ಆದರೆ ಹೆಚ್ಚು ಆಟವಾಡಲು ಸಮಯ ಸಿಕ್ಕಿಲ್ಲ. ಲುವಾನ್-ಡ್ರೆ ಪ್ರಿಟೋರಿಯಸ್ ಅವರಲ್ಲಿ ಒಬ್ಬರು. ಕ್ವೆನಾ ಎಂಫಕಾ ಅಂತಹ ಮತ್ತೊಬ್ಬ ಆಟಗಾರ. ಅವರು ಇಲ್ಲಿದ್ದಾರೆ, ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರು ಅಭ್ಯಾಸ ಮಾಡಿದ್ದಾರೆ ಮತ್ತು ಈ ಪ್ರಯಾಣದಲ್ಲಿ ತಂಡವನ್ನು ಬೆಂಬಲಿಸಲು ಅವರು ನಿಜವಾಗಿಯೂ ಬೇರೆಯವರಂತೆ ಶ್ರಮಿಸಿದ್ದಾರೆ. ಈಗ ಅವರು ಬರಬೇಕೆ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ಆಟಗಾರನಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.

ಬಿಸಿಸಿಐನ ಕಠಿಣ ನಿಲುವಿಗೆ ಬೆಂಬಲ

ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಲಭ್ಯತೆಯು ಬಹಳ ಹಿಂದಿನಿಂದಲೂ ಚರ್ಚೆಯ ವಿಷಯವಾಗಿದೆ. ಇದಕ್ಕಾಗಿ ಹರಾಜಿನಲ್ಲಿ ಖರೀದಿಸಿದ ನಂತರ ಐಪಿಎಲ್‌ನಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರುವ ನಿಯಮವನ್ನು ಬಿಸಿಸಿಐ ಈಗಾಗಲೇ ಹೊಂದಿದೆ. ಈ ಆವೃತ್ತಿಯಲ್ಲಿಯೂ ಸಹ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಸಣ್ಣ ಫಿಟ್‌ನೆಸ್ ಸಮಸ್ಯೆಗಳಿಂದಾಗಿ ಎರಡನೇ ಹಂತದ ಸ್ಪರ್ಧೆಯಲ್ಲಿ ತಮ್ಮ ತಂಡಗಳನ್ನು ಸೇರಿಕೊಂಡರು. ಈ ಕುರಿತು ಸಂಗಕ್ಕಾರ ಮಾತನಾಡಿದ್ದಾರೆ.

ಆಟಗಾರರ ಲಭ್ಯತೆಗೆ ಬಿಸಿಸಿಐನ ಕಟ್ಟುನಿಟ್ಟಿನ ವಿಧಾನವನ್ನು ಸಂಗಕ್ಕಾರ ಬೆಂಬಲಿಸಿದರು. ಸರಿಯಾದ ಮತ್ತು ಕಟ್ಟುನಿಟ್ಟಾದ ನೀತಿಯನ್ನು ಹೊಂದಿರುವುದು ಯಾವಾಗಲೂ ಮುಖ್ಯ. ಈ ವಿಷಯದಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ನೀತಿಯನ್ನು ಹೊಂದಿದೆ. ಪ್ರತಿಯೊಬ್ಬ ಆಟಗಾರನು ಯಾವುದೋ ಹಂತದಲ್ಲಿ ಗಾಯಗೊಳ್ಳುತ್ತಾನೆ. ಮತ್ತು ಗಾಯವು ಗಂಭೀರವಾಗಿದ್ದರೆ ಅಥವಾ ಆಟಗಾರನು ಆವೃತ್ತಿಯಲ್ಲಿ ಮುಂದೆ ಆಡಲು ಸಾಧ್ಯವಾಗದಿದ್ದರೆ, ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಸ್ಪಷ್ಟ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed