Last Updated:
ಐಫೋನ್ ಗಾಗಿ ಇಡೀ ಕುಟುಂಬ ಸರ್ವನಾಶವಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಇದೀಗ ಈ ಪ್ರಕರಣದ ಹಿನ್ನಲೆ ಭಾರತೀಯ ಕೋಟ್ಯಾಧಿಪತಿಯೊಬ್ಬರು ಒಂದು ವಿಚಿತ್ರ ಕೆಲಸ ಮಾಡಿದ್ದಾರೆ. ಹದಿಹರೆಯದ ಯುವಕರಿಗೆ ಐಫೋನ್ ಗಿಫ್ಟ್ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ (Maharashtra) ಒಂದು ಬೆಚ್ಚಿಬೀಳಿಸುವ ದುರಂತ ಘಟನೆ ನಡೆದಿತ್ತು. ಛತ್ರಪತಿ ಸಂಭಾಜಿನಗರದಲ್ಲಿರುವ ಪ್ರಸಿದ್ಧ ಖವಡ್ಯಾ ಗುಡ್ಡದಿಂದ ಒಂದೇ ಕುಟುಂಬದ ಮೂವರು ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಕಾರಣ ಮೊಬೈಲ್ (Iphone Purchase) ಖರೀದಿಯ ವಿಚಾರಕ್ಕೆ ಶುರುವಾದ ಜಗಳ ಮೂವರ ಜೀವವನ್ನೇ ಬಲಿ ಪಡೆದಿದೆ ಎನ್ನಲಾಗಿದೆ. ಮಗ ಕುನಾಲ್ನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದರು.














