ಮದುವೆಯು ಹೊಸ ಕುಟುಂಬವನ್ನು ಸೃಷ್ಟಿಸುತ್ತದೆ, ಆದರೆ ವಯಸ್ಸಾದ ಮತ್ತು ಅನಾರೋಗ್ಯ ಪೀಡಿತ ಪೋಷಕರ ಕಡೆಗೆ ವ್ಯಕ್ತಿಯ ನೈತಿಕ ಮತ್ತು ಕಾನೂನು ಜವಾಬ್ದಾರಿಯನ್ನು ಕೊನೆಗೊಳಿಸುವುದಿಲ್ಲ ಎಂದು ಹೇಳಿದ ನ್ಯಾಯಾಲಯ, ಅನಾರೋಗ್ಯ ಪೀಡಿತ ಪೋಷಕರನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸಲು ಗಂಡ ನಿರಾಕರಿಸುವುದು ಸಹಜ ಮತ್ತು ಸಮರ್ಥನೀಯ ನಿರ್ಧಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಒಟ್ಟಾರೆ, ವಿಚ್ಛೇದನದ ನಂತರ ಹೆಂಡತಿ ಮಾತ್ರವಲ್ಲ, ವಿಶೇಷ ಸಂದರ್ಭಗಳಲ್ಲಿ ಗಂಡನೂ ಹೆಂಡತಿಯಿಂದ ಜೀವನಾಂಶ ಪಡೆಯಬಹುದು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ಮತ್ತು 25 ಈ ಹಕ್ಕನ್ನು ನೀಡುತ್ತವೆ. ಆದಾಯ ಕಡಿಮೆ ಇದ್ದರೆ, ಅಂಗವೈಕಲ್ಯ ಅಥವಾ ನೈಜ ಕಾರಣಗಳಿಂದ ಗಳಿಸಲು ಸಾಧ್ಯವಾಗದಿದ್ದರೆ ಮತ್ತು ಹೆಂಡತಿಯ ಮೇಲೆ ಅವಲಂಬಿತರಾಗಿದ್ದರೆ ನ್ಯಾಯಾಲಯ ಪರಿಗಣಿಸಬಹುದು. ಇಬ್ಬರ ಆರ್ಥಿಕ ಸ್ಥಿತಿ ಸಮಾನವಾಗಿದ್ದರೆ ಸಾಮಾನ್ಯವಾಗಿ ಆದೇಶವಾಗುವುದಿಲ್ಲ. ನ್ಯಾಯಾಲಯ ನ್ಯಾಯಯುತ ಮತ್ತು ಗೌರವಾನ್ವಿತ ಜೀವನಕ್ಕಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರತಿ ಪ್ರಕರಣದ ಸಂಗತಿಗಳನ್ನು ಅವಲಂಬಿಸಿ ನಿರ್ಧಾರವಾಗುತ್ತದೆ.
ಬಿಲಾಸ್ಪುರ: ಛತ್ತೀಸ್ಗಢ ಹೈಕೋರ್ಟ್ ಒಬ್ಬ ವ್ಯಕ್ತಿಗೆ ಕುಟುಂಬ ನ್ಯಾಯಾಲಯ ನೀಡಿದ್ದ ವಿಚ್ಛೇದನವನ್ನು (High Court Order) ಎತ್ತಿಹಿಡಿದಿದೆ.