Last Updated:
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ನಂತರ ಆ ಇಬ್ಬರಿಗೆ ವಾಷಿಂಗ್ಟನ್ ಸುಂದರ್ ಯಶಸ್ಸಿನ ಕ್ರೆಡಿಟ್ ಕೊಟ್ಟರು.
ಇಂಗ್ಲೆಂಡ್ (England) ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ (Team India) ಹೀನಾಯ ಸೋಲು ಅನುಭವಿಸಿತು. ಅಭಿಮಾನಿಗಳು ಏಕದಿನ (ODI) ಸರಣಿಯ ಬಗ್ಗೆಯೂ ಚಿಂತಿತರಾಗಿದ್ದರು. ಟಿ20 ಸರಣಿಯಲ್ಲಿ ಆಡಿದ ಎಂಟು ಆಟಗಾರರು ಏಕದಿನ ತಂಡದ ಭಾಗವಾಗಿದ್ದರು. ಆದರೆ, ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗಳನ್ನು ಎದುರಿಸಿದ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಏಕದಿನದಲ್ಲಿ ಟೀಮ್ ಇಂಡಿಯಾದ ಹೀರೋ ಆದರು.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ನಂತರ ಆ ಇಬ್ಬರಿಗೆ ವಾಷಿಂಗ್ಟನ್ ಸುಂದರ್ ಯಶಸ್ಸಿನ ಕ್ರೆಡಿಟ್ ಕೊಟ್ಟರು.
ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ೮೦ ರನ್ ಗಳಿಸಿ ಗಾಯಗೊಂಡು ಹೊರಗೆ ಬಂದರು. ನಂತರ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಜೊತೆಗೆ 102 ರನ್ಗಳ ಅಜೇಯ ಜೋಡಿಯಾಟ ಆಡಿದರು. ಭಾರತ ತಂಡ 259 ರನ್ಗಳ ಗುರಿಯನ್ನು 6 ವಿಕೆಟ್ ಕಳೆದುಕೊಂಡು ಗೆದ್ದಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಸುಂದರ್ 52 ರನ್ ಗಳಿಸಿ ಅಜೇಯರಾಗಿ ಉಳಿದರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ವಾಷಿಂಗ್ಟನ್ ಸುಂದರ್ ಮಾತನಾಡಿದರು. ಈ ವೇಳೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರನ್ನು ಹಾಡಿ ಹೊಗಳಿದರು. ಗೌತಮ್ ಗಂಭೀರ್ ಮತ್ತು ಆಶಿಶ್ ನೆಹ್ರಾ ಅವರೇ ತಮ್ಮ ಬ್ಯಾಟಿಂಗ್ ಬದಲಾವಣೆಗೆ ಕಾರಣ. ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಗುರುತಿಸಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಡಲು ತರಬೇತಿ ನೀಡಿದ್ದಾರೆ ಎಂದು ಎಂದು ಸುಂದರ್ ಹೇಳಿದರು.
ನನಗೆ ವಿವಿಧ ರೀತಿಯ ಪಂದ್ಯಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಆಡುವ ಅವಕಾಶ ಸಿಗುತ್ತದೆ. ಟಿ20ನಲ್ಲಿ ಫಿನಿಷರ್ ಆಗಿ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ಕೆಲಸ. ಆದರೆ ಅದು ನನಗೆ ಬಹಳ ಇಷ್ಟ. ತಂಡ ಗೆಲ್ಲುವುದಕ್ಕೆ ನನ್ನದೇ ಆದ ಕೊಡುಗೆ ನೀಡುವುದೇ ನನ್ನ ಗುರಿ.
ಗೌತಿ ಭಾಯ್ ಅವರು ನನ್ನ ಬ್ಯಾಟಿಂಗ್ನಲ್ಲಿ ನಾನು ಏನು ಮಾಡಬಹುದು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದರು. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಆಟಗಾರನಾಗಿ ಮತ್ತು ವ್ಯಕ್ತಿಯಾಗಿ ನನ್ನನ್ನು ಚೆನ್ನಾಗಿ ತಿಳಿದುಕೊಂಡರು. ನನ್ನ ಬ್ಯಾಟಿಂಗ್ನಲ್ಲಿ ಆ ಬದಲಾವಣೆಗೆ ಅವರೇ ಕಾರಣ.
ಹೆಚ್ಚು ಪಂದ್ಯಗಳನ್ನು ಆಡುವುದರಿಂದ ಕಠಿಣ ಸಮಯಗಳನ್ನು ಎದುರಿಸುವ ಅನುಭವ ಸಿಗುತ್ತದೆ. ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಪ್ರೋತ್ಸಾಹಿಸಿದ ಎಲ್ಲಾ ಕೋಚ್ಗಳಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ವಾಷಿಂಗ್ಟನ್ ಸುಂದರ್ ತಿಳಿಸಿದರು.














