Dhanush: ಧ್ವಜ ಅನಾವರಣ! ರಾಜಕೀಯಕ್ಕೆ ಬರ್ತಿದ್ದಾರಾ ನಟ ಧನುಷ್? ತಮಿಳುನಾಡು ಪಾಲಿಟಿಕ್ಸ್​ನಲ್ಲಿ ದಿಢೀರ್ ಬೆಳವಣಿಗೆ | dhanush fans club released official flag | | ACTPnews

ಧನುಷ್


Last Updated:

Dhanush: ಖ್ಯಾತ ನಟ ಧನುಷ್ ಅವರು ರಾಜಕೀಯ ಎಂಟ್ರಿಗೆ ರೆಡಿಯಾಗಿದ್ದಾರಾ? ದಿಢೀರ್ ಧ್ವಜ ಅನಾವರಣ ಮಾಡಿದ್ದೇಕೆ? ಇದು ಧನುಷ್ ಕಡೆಯಿಂದ ಬಿಗ್ ಹಿಂಟ?

ಧನುಷ್
ಧನುಷ್

ತಮಿಳುನಾಡಿನಲ್ಲಿ (Tamil Nadu) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗುತ್ತಿವೆ. ವಿಜಯ್ ಸಿಎಂ ಆದರ ನಂತರವೂ ಬಹಳಷ್ಟು ಬೆಳವಣಿಗೆಗಳಾಗಿವೆ. ಹೀಗಿರುವಾಗಲೇ ಧನುಷ್ (Dhanush) ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಟಾಕ್​ಗೆ ಪುಶ್ ಸಿಕ್ಕಿದೆ. ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಜೋರಾಗಿದ್ದು ಅಷ್ಟಕ್ಕೂ ಜನ ಈ ರೀತಿ ಹೇಳೋಕೆ ಏನು ಕಾರಣ?

ಧನುಷ್ ಅವರ ಅಭಿಮಾನಿ ಸಂಘ ತನ್ನ ಅಧಿಕೃತ ಧ್ವಜವನ್ನು ಅನಾವರಣಗೊಳಿಸಿದ್ದು, ಈ ಕ್ರಮ ಹೊಸ ಚರ್ಚೆಗೆ ದಾರಿ ಮಾಡಿದೆ. ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶೀಘ್ರವಾಗಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಧ್ವಜ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಅಭಿಮಾನಿಗಳು ಮತ್ತು ರಾಜಕೀಯ ವಿಶ್ಲೇಷಕರು ಈ ಬೆಳವಣಿಗೆ ನಟ ರಾಜಕೀಯಕ್ಕೆ ಎಂಟ್ರಿಯ ಸೂಚನೆಯಾ? ಅವರು ಸಿದ್ಧತೆ ಶುರು ಮಾಡಿರುವುದರ ಸೂಚನೆಯಾ ಎಂದು ಮಾತನಾಡುತ್ತಿದ್ದಾರೆ.

ಧ್ವಜ ಅನಾವರಣ

ಧ್ವಜ ಅನಾವರಣ ಮಾಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ತಮಿಳು ಚಿತ್ರರಂಗವು ರಾಜಕೀಯದೊಂದಿಗೆ ದೀರ್ಘ ಇತಿಹಾಸವನ್ನು ಹೊಂದಿದೆ. ದಶಕಗಳಲ್ಲಿ, ತಮಿಳು ಚಲನಚಿತ್ರೋದ್ಯಮದ ಹಲವಾರು ನಟರು ಸಿನಿಮಾದಿಂದ ರಾಜಕೀಯ ಜೀವನಕ್ಕೆ ಶಿಫ್ಟ್ ಆಗಿದ್ದಾರೆ.

ಎಷ್ಟೋ ಸ್ಟಾರ್​ಗಳು ಜನಪ್ರಿಯತೆಯನ್ನು ಪ್ರಬಲ ರಾಜಕೀಯ ವೃತ್ತಿಜೀವನವನ್ನಾಗಿ ಪರಿವರ್ತಿಸಿದ್ದಾರೆ. ಧನುಷ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಈ ಧ್ವಜ ಅನಾವರಣ ಅಭಿಮಾನಿಗಳನ್ನು ಎಕ್ಸೈಟ್ ಮಾಡಿದೆ.

ಅಭಿಮಾನಿಗಳ ಸಂಘ ಹಂಚಿಕೊಂಡಿರುವ ಈ ಫೋಟೋದಲ್ಲಿ ಧನುಷ್ ಕೈಗಳನ್ನು ಮಡಚಿ ನಿಂತಿರುವ ಭಂಗಿಯಲ್ಲಿ, ಕೆಂಪು-ಬಿಳಿ ಬಣ್ಣದ ಧ್ವಜದ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ರಾಜಕಾರಣಿಯಂತೆ ಧರಷ್ ಪೋಸ್ ಕೊಟ್ಟಿರುವ ರೀತಿಯಲ್ಲಿ ತೋರಿಸಲಾಗಿದ್ದು ಈ ಕುರಿತ ಚರ್ಚೆ ಮತ್ತಷ್ಟು ಜೋರಾಗಿದೆ.

ಇಲ್ಲಿಯವರೆಗೆ ಈ ಬೆಳವಣಿಗೆ ಅಭಿಮಾನಿಗಳ ಸಂಘಕ್ಕೆ ಮಾತ್ರ ಸೀಮಿತವಾಗಿದೆ. ಧನುಷ್ ಅಥವಾ ಅವರ ಅಧಿಕೃತ ತಂಡದ ಯಾರೂ ಯಾವುದೇ ರಾಜಕೀಯ ಯೋಜನೆಗಳನ್ನು ಘೋಷಿಸಿಲ್ಲ. ಈ ಊಹಾಪೋಹಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ನಟ ಯಾವುದೇ ಹೇಳಿಕೆ ನೀಡಿಲ್ಲ. ಆದರೂ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ.

ತಮಿಳುನಾಡಿನಲ್ಲಿ ಅಭಿಮಾನಿ ಸಂಘಗಳು ಸಿನಿಮಾ ತಾರೆಯರಿಗೆ ಸಾರ್ವಜನಿಕ ಬೆಂಬಲವನ್ನು ತೋರಿಸುವುದು ತುಂಬಾ ಸಾಮಾನ್ಯ. ಅಲ್ಲಿ ಫ್ಯಾನ್ಸ್ ಕ್ರೇಜ್ ತುಂಬಾನೆ ಹೆಚ್ಚಿರುತ್ತದೆ. ಇದು ರಾಜಕೀಯಕ್ಕೆ ಬಂದ ನಟರ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಹಿಂದೆ, ಅಭಿಮಾನಿ ಸಂಘಗಳು ನಟರಿಗೆ ಥಿಯೇಟರ್ ಮೀರಿ ಜನರನ್ನು ತಲುಪಲು ಸಹಾಯ ಮಾಡಿವೆ. ವಿಶೇಷವಾಗಿ ಅವರು ರಾಜಕೀಯಕ್ಕೆ ಬಂದಾಗ ಅದು ಅವರಿಗೆ ನೆರವಾಗಿದೆ. ಈ ಹಿನ್ನೆಲೆಯಿಂದಾಗಿ, ಧ್ವಜ ಅನಾವರಣ ಸಾಂಕೇತಿಕವಾಗಿ ನಡೆಯುತ್ತದೆ.

ಇದನ್ನೂ ಓದಿ: Sandalwood: 6 ತಿಂಗಳು, 120 ಸಿನಿಮಾ! ಸ್ಯಾಂಡಲ್​ವುಡ್ ಪಾಲಿಗೆ ಮೊದಲ 6 ತಿಂಗಳು ಹೇಗಿತ್ತು?

ಧನುಷ್ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ತಮಿಳು, ಹಿಂದಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ತಮ್ಮ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಅಭಿನಯ, ಬರವಣಿಗೆ, ಹಾಡುಗಾರಿಕೆ ಮತ್ತು ನಿರ್ದೇಶನದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed