Last Updated:
ಮಾಫಿ ಸಾಕ್ಷಿಯಿಂದ ದರ್ಶನ್ ಅವರಿಗೆ ತೊಂದರೆ ಆಗುವುದಿಲ್ಲ ಅನುಕೂಲವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ರ (Darshan) ಕಷ್ಟದ ದಿನಗಳು ಅದ್ಯಾವಾಗ ಮುಗಿಯುತ್ತವೋ ದೇವ್ರೇ ಬಲ್ಲ. ಯಾಕಂದ್ರೆ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್, ತೆರೆ ಮೇಲೆ ಆರಡಿ ಐರಾವತನಂತೆ ಮಿಂಚ್ತಿದ್ದವ್ರು, ಜೈಲು (Jail) ಸೇರಿದ್ಮೇಲೆ ಕುಗ್ಗಿ ಹೋಗಿದ್ದಾರೆ. ದರ್ಶನ್ ಪಾಲಿಗೆ ಬದುಕಿದ್ದಾಗಲೇ ಅಕ್ಷರಶಃ ನರಕ ದರ್ಶನವಾಗ್ತಿದೆ. ಪರಿಸ್ಥಿತಿ ಹೀಗಿರುವಾಗಲೇ ದರ್ಶನ್ಗೆ ಮತ್ತೊಂದು ಶಾಕ್ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ಪ್ರದೋಶ್ (Pradosh) ಮಾಫಿ ಸಾಕ್ಷಿ ಆಗಲು ಒಪ್ಪಿದ್ದಾರೆ. ಇದರಿಂದ ಆರೋಪಿ ದರ್ಶನ್ಗೆ ತೊಂದರೆ ಆಗುತ್ತಿದೆ ಎಂಬ ಚರ್ಚೆ ಜೋರಾಗುತ್ತಿದೆ.
ಅಷ್ಟೇ ಅಲ್ಲದೇ ಸುಳ್ಳು ದೋಷಾರೋಪಣ ಪತ್ರ ಸಲ್ಲಿಸಿದ್ದು ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾರ್, ಈ ಎಲ್ಲಾ ಸತ್ಯಗಳು ಪ್ರದೋಶ್ನ ಮಾಫಿ ಸಾಕ್ಷಿ ಮೂಲಕ ಮಾನ್ಯ ನ್ಯಾಯಾಲಯದಲ್ಲಿ ಹೊರಬಂದರೆ. ಇಡೀ ಪ್ರಕರಣವೇ ಹೊಸ ತಿರುವು ಪಡೆದುಕೊಳ್ಳಲಿದೆ. ಈ ಮೂರು ಜನ ಪೊಲೀಸ್ ಅಧಿಕಾರಿಗಳು ಆರೋಪಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆದಿದ್ದು, ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ನಟ ದರ್ಶನ್ ಬೇಸರಗೊಂಡಿದ್ದಾರೆ.
Mysore,Karnataka














