Last Updated:
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಕಾವೇರಿ, ಕೃಷ್ಣಾ ಬೇಸಿನ್ ಅಣೆಕಟ್ಟುಗಳು ಗರಿಷ್ಠ ಮಟ್ಟದತ್ತ. ಹಾರಂಗಿ, ಹೇಮಾವತಿ, ಕೆಆರ್ ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹಿಡ್ಕಲ್, ನಾರಾಯಣಪುರ ಭರ್ತಿ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಹಾಗೂ ನದಿಗಳಿಗೆ ಹರಿದುಬರುತ್ತಿರುವ ನೀರಿನ ಒಳಹರಿವಿನ ಪರಿಣಾಮವಾಗಿ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಕಾವೇರಿ ಹಾಗೂ ಕೃಷ್ಣಾ (Krishna) ಬೇಸಿನ್ನ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವು ಗರಿಷ್ಠ ಮಟ್ಟದತ್ತ ಮುಖ ಮಾಡಿದ್ದು, ಅನ್ನದಾತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಪ್ರಸ್ತುತ ಆಗಸ್ಟ್ 14, 2026ರ ದಿನಾಂಕದಂತೆ ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ನೀರಿನ ಮಟ್ಟದ ಕಂಪ್ಲೀಟ್ ಮಾಹಿತಿ ಇಲ್ಲಿದೆ.














