Dam Water Level: ಮುಂಗಾರು ಮಳೆಗೆ ರಾಜ್ಯದ ಜಲಾಶಯಗಳಲ್ಲಿ ಭರ್ಜರಿ ಏರಿಕೆ, ಯಾವ ಡ್ಯಾಮ್‍ನಲ್ಲಿ ಎಷ್ಟಿದೆ ನೀರು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಡ್ಯಾಂ ನೀರಿನ ಮಟ್ಟ


Last Updated:

ಕರ್ನಾಟಕದಲ್ಲಿ ಮುಂಗಾರು ಚುರುಕು, ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳ. ಹಾರಂಗಿ 95.54%, ಆಲಮಟ್ಟಿ 95.09%, ನಾರಾಯಣಪುರ 90.44% ಭರ್ತಿ. ರೈತರಿಗೆ ಸಂತಸ.

ಡ್ಯಾಂ ನೀರಿನ ಮಟ್ಟ
ಡ್ಯಾಂ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳಿಗೆ (Reservoirs) ನೀರಿನ (Water) ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಮಳೆಯ ಅಬ್ಬರದಿಂದ ಕಾವೇರಿ (Cauvery) ಮತ್ತು ಉತ್ತರ ಕರ್ನಾಟಕದ ನದಿ ಕೊಳ್ಳದ ಅಣೆಕಟ್ಟುಗಳು ಭರ್ತಿಯಾಗುತ್ತಿದ್ದು, ರೈತರ (Farmer) ಮೊಗದಲ್ಲಿ ಮಂದಹಾಸ ಮೂಡಿದೆ. ಇಂದಿನ ಜಲಾಶಯಗಳ ನೀರಿನ ಮಟ್ಟದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.

ಕಾವೇರಿ ಕೊಳ್ಳದ ಜಲಾಶಯಗಳ ಕಥೆ ಏನು?

ಹಾರಂಗಿ ಅಣೆಕಟ್ಟು: ಶೇಕಡಾ 95.541ರಷ್ಟು ಭರ್ತಿಯಾಗುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದೆ. ಇದರ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಪ್ರಸ್ತುತ 2857.880 ಅಡಿಗೆ ತಲುಪಿದೆ. ಒಳಹರಿವು 4,008 ಕ್ಯೂಸೆಕ್‍ಗಳಷ್ಟಿದೆ.

ಹೇಮಾವತಿ ಅಣೆಕಟ್ಟು: ಶೇಕಡಾ 67.431ರಷ್ಟು ಭರ್ತಿಯಾಗಿದ್ದು, ಪ್ರಸ್ತುತ 2907.750 ಅಡಿ ನೀರು ಸಂಗ್ರಹವಾಗಿದೆ.

ಕೆ.ಆರ್.ಸಾಗರ ಅಣೆಕಟ್ಟು: ಮಂಡ್ಯದ ಜೀವನಾಡಿ ಕೆಆರ್‍ಎಸ್ ಡ್ಯಾಮ್‍ನಲ್ಲಿ ಪ್ರಸ್ತುತ ಶೇಕಡಾ 35.808ರಷ್ಟು (17.708 ಟಿಎಂಸಿ) ನೀರು ಸಂಗ್ರಹವಿದ್ದು, 7,058 ಕ್ಯೂಸೆಕ್ ಭಾರಿ ಒಳಹರಿವು ಹರಿದುಬರುತ್ತಿದೆ.

ಕಬಿನಿ ಅಣೆಕಟ್ಟು: ಶೇಕಡಾ 82.650ರಷ್ಟು ಭರ್ತಿಯಾಗುವ ಮೂಲಕ ಉತ್ತಮ ನೀರಿನ ಸಂಗ್ರಹವನ್ನು ಹೊಂದಿದೆ.

ಉತ್ತರ ಕರ್ನಾಟಕದ ಜಲಾಶಯಗಳ ಭರ್ತಿ ವಿವರ

ಆಲಮಟ್ಟಿ ಅಣೆಕಟ್ಟು: ಶೇಕಡಾ 95.090ರಷ್ಟು (117.038 ಟಿಎಂಸಿ) ನೀರು ಸಂಗ್ರಹವಾಗಿದ್ದು, ಇಲ್ಲಿಗೆ ಬರೋಬ್ಬರಿ 83,386 ಕ್ಯೂಸೆಕ್ ಭಾರಿ ಒಳಹರಿವು ಹರಿದುಬರುತ್ತಿದೆ.

ನಾರಾಯಣಪುರ ಅಣೆಕಟ್ಟು: ಶೇಕಡಾ 90.445ರಷ್ಟು ಭರ್ತಿಯಾಗಿದ್ದು, 95,043 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ತುಂಗಭದ್ರಾ ಅಣೆಕಟ್ಟು: ಶೇಕಡಾ 34.071ರಷ್ಟು ಭರ್ತಿಯಾಗಿದ್ದು, 36.043 ಟಿಎಂಸಿ ನೀರು ಸಂಗ್ರಹವಿದೆ.

ಭದ್ರಾ ಅಣೆಕಟ್ಟು: ಶೇಕಡಾ 53.830ರಷ್ಟು ಭರ್ತಿಯಾಗಿದ್ದು, 38.507 ಟಿಎಂಸಿ ನೀರು ಲಭ್ಯವಿದೆ.

ಹಿಡಕಲ್ ಅಣೆಕಟ್ಟು: ಶೇಕಡಾ 64.269ರಷ್ಟು ಭರ್ತಿಯಾಗಿದ್ದು, 32.777 ಟಿಎಂಸಿ ನೀರು ಸಂಗ್ರಹವಾಗಿದೆ.

ಮಲಪ್ರಭಾ ಅಣೆಕಟ್ಟು: ಶೇಕಡಾ 40.686ರಷ್ಟು ಭರ್ತಿಯಾಗಿದೆ.

ವಾಣಿವಿಲಾಸ ಸಾಗರ ಅಣೆಕಟ್ಟು: ಶೇಕಡಾ 78.233ರಷ್ಟು (23.470 ಟಿಎಂಸಿ) ಭರ್ತಿಯಾಗಿ ಗಮನ ಸೆಳೆದಿದೆ.

ರೈತರಿಗೆ ಬಿಗ್ ರಿಲೀಫ್

ಜಲಾಶಯಗಳಿಗೆ ನೀರಿನ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ಕುಡಿಯುವ ನೀರು ಹಾಗೂ ಕೃಷಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಮಳೆಯ ಆರ್ಭಟ ಹೀಗೆಯೇ ಮುಂದುವರೆದರೆ ಬಹುತೇಕ ಅಣೆಕಟ್ಟುಗಳು ಕೆಲವೇ ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed