Actor Vishal Meets Vijay: ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ಸಿಎಂ ವಿಜಯ್‌, ಆ ಹಣವನ್ನು 3 ಹುಡುಗಿಯರ ಶಿಕ್ಷಣಕ್ಕಾಗಿ ಬಳಸಿದ ನಟ ವಿಶಾಲ್‌ | | ACTPnews

News18


Last Updated:

ತಮ್ಮನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯಾರು ಹೂಗುಚ್ಛ ಹಾಗೂ ಶಾಲು ತರಬಾರದು ಎಂದು ಸೂಚನೆ ನೀಡಿರುವ ಸಿಎಂ ವಿಜಯ್ ಅವರ ನಡೆಗೆ ಮೆಚ್ಚುಗೆ ಸೂಚಿಸಿರುವ ನಟ ವಿಶಾಲ್, ಈ ಹಣವನ್ನು ಮೂವರು ಬಡ ಬಾಲಕಿಯರ ಶಿಕ್ಷಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

News18
News18

ಮುಖ್ಯಮಂತ್ರಿ ವಿಜಯ್‌ (Tamil Nadu CM Vijay) ಅವರು ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ನಂತರ, ಹೂಗುಚ್ಛ ಮತ್ತು ಶಾಲು ಹೊದಿಸಲು ಉದ್ದೇಶಿಸಿದ್ದ ಹಣವನ್ನು ತಮಿಳುನಾಡಿನ ಮೂವರು ಬಡ ಹುಡುಗಿಯರ ಶಿಕ್ಷಣಕ್ಕಾಗಿ (Girls Education) ಬಳಸಿದ್ದೇನೆ ಎಂದು ನಟ ವಿಶಾಲ್‌ (Actor Vishal) ಹೇಳಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿಯವರೊಂದಿಗೆ ನಡೆದ ಭೇಟಿ ತುಂಬಾ ಆತ್ಮೀಯ ಮತ್ತು ವೈಯಕ್ತಿಕವಾಗಿತ್ತು ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ತಮ್ಮನ್ನು ‘ಡಾರ್ಲಿಂಗ್’ (Darling CM) ಎಂದು ಕರೆದ ಕ್ಷಣ ವಿಶೇಷವಾಗಿ ನೆನಪಿನಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.

ಅದೇ ಆತ್ಮೀಯತೆ, ಡಾರ್ಲಿಂಗ್ ಸಿಎಂ ಎಂಬ ವಿಶಾಲ್!

ಮುಖ್ಯಮಂತ್ರಿ ವಿಜಯ್ ಅವರಿಗೆ ಲೊಯೊಲಾ ಕಾಲೇಜು (Loyala College) ದಿನಗಳಿಂದಲೇ ಪರಿಚಯವಾಗಿದ್ದೇನೆ. ಆಗ ಉದಯೋನ್ಮುಖ ನಟನಾಗಿದ್ದ ಅವರು, ಟೀಕೆಗಳನ್ನು ಮೌನ ಮತ್ತು ಸಾಧನೆಯ ಮೂಲಕ ಎದುರಿಸಿ ‘ಸೂಪರ್‌ಸ್ಟಾರ್‘ ಆಗಿ ಬೆಳೆದು, ಬಳಿಕ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದನ್ನು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹುದ್ದೆ ಮತ್ತು ಜವಾಬ್ದಾರಿ ಬದಲಾಗಿದ್ದರೂ ಅವರ ವ್ಯಕ್ತಿತ್ವ ಮಾತ್ರ ಬದಲಾಗಿಲ್ಲ ಎಂದು ವಿಶಾಲ್, ಹಲವು ವರ್ಷಗಳ ನಂತರವೂ ಅವರನ್ನು ಭೇಟಿಯಾದಾಗ ಅದೇ ಆತ್ಮೀಯತೆ ಮತ್ತು ಸ್ನೇಹಭಾವವನ್ನು ಅನುಭವಿಸಿದೆ ಎಂದು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇಷ್ಟಲ್ಲದೇ ನಟ ವಿಶಾಲ್‌ ಅವರು ಕಲೈನಾರ್‌ ಅಯ್ಯ ಅವರಿಂದ ಹಿಡಿದು ಜಯಲಲಿತಾ ಅಮ್ಮ ನಿಂದ ಸ್ಟಾಲಿನ್‌ ಅಂಕಲ್‌ನಿಂದ ನನ್ನ ಪ್ರೀತಿಯ ಉದಯ ವರೆಗೆ ಎಲ್ಲರನ್ನು ಪ್ರೀತಿಸುತ್ತಾರೆ. ಇದೀಗ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಡಾರ್ಲಿಂಗ್‌ ಎಂದು ಹೇಳುವುದಕ್ಕೆ ಸಂತೋಷವಾಯಿತು. ಅವರು ನನ್ನಲ್ಲಿರುವ ಅಭಿಮಾನದ ಕ್ಷಣ ಯಾವಾಗಲೂ ಉಳಿದಿರುತ್ತವೆ ಎಂದು ಸಹ ಬರೆದುಕೊಂಡಿದ್ದಾರೆ.

3 ಅರ್ಹ ಬಾಲಕಿಯರ ಶಿಕ್ಷಣಕ್ಕಾಗಿ ಹಣ

ವಿಶಾಲ್ ಅವರು ಮುಖ್ಯಮಂತ್ರಿ ಅವರ ಸರಳತೆ ಮತ್ತು ಸಾಮಾಜಿಕ ಕಾಳಜಿಯನ್ನು ಮೆಚ್ಚಿ, ಕಡ್ಡಾಯವಾಗಿ ನೀಡಬೇಕಿದ್ದ ಹೂಗುಚ್ಛ ಹಾಗೂ ಶಾಲನ್ನು ಸ್ವೀಕರಿಸದೇ ಇದ್ದುದಕ್ಕಾಗಿ ಧನ್ಯವಾದ ತಿಳಿಸಿದರು. ಆ ಹಣವನ್ನು ಮುಖ್ಯಮಂತ್ರಿ ಅವರ ಹೆಸರಿನಲ್ಲಿ ತಮಿಳುನಾಡಿನ ಆರ್ಥಿಕವಾಗಿ ಹಿಂದುಳಿದ ಮೂವರು ಅರ್ಹ ಬಾಲಕಿಯರ ಶಿಕ್ಷಣಕ್ಕಾಗಿ ಬಳಸಿರುವುದಾಗಿ ತಿಳಿಸಿದ ಅವರು, ಈ ನೆರವಿನಿಂದ ಆ ಬಾಲಕಿಯರು ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿದ್ದು, ಮುಖ್ಯಮಂತ್ರಿ ಅವರ ಈ ಸಹಾಯವನ್ನು ಜೀವನಪೂರ್ತಿ ಕೃತಜ್ಞತೆಯಿಂದ ನೆನಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಮೂವರು ವಿದ್ಯಾರ್ಥಿನಿಯರ ವಿವರಗಳನ್ನು ಹಂಚಿಕೊಂಡ ವಿಶಾಲ್‌

ನಟ ವಿಶಾಲ್ ಅವರು ತಮ್ಮ ಪೋಸ್ಟ್‌ನಲ್ಲಿ ತಮ್ಮ ಕುಟುಂಬದಲ್ಲಿ ಮೊದಲ ಪದವೀಧರರಾಗಲು ಮುಂದಾಗಿರುವ ಮೂವರು ವಿದ್ಯಾರ್ಥಿನಿಯರ ಹೆಸರುಗಳು ಹಾಗೂ ಅವರು ವ್ಯಾಸಂಗ ಮಾಡುತ್ತಿರುವ ಕೋರ್ಸ್‌ಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯವರ ಪರವಾಗಿ ಮತ್ತು ಅವರ ಹೆಸರಿನಲ್ಲಿ ಈ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಿರುವುದಾಗಿ ತಿಳಿಸಿದ ಅವರು, ಮತ್ತೊಮ್ಮೆ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಆಡಳಿತಾವಧಿಯಲ್ಲಿ ತಮಿಳುನಾಡು ಇನ್ನಷ್ಟು ಅಭಿವೃದ್ಧಿ ಹೊಂದಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದ ವಿಶಾಲ್, ರಾಜ್ಯದ ಅತ್ಯುತ್ತಮ ಬೆಳವಣಿಗೆಯನ್ನು ನೋಡಲು ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Vijay: ಸಿಎಂ ವಿಜಯ್ ಧರಿಸೋ ಬೆಲ್ಟ್ ಯಾವುದು ಗೊತ್ತಾ? ಇದನ್ನು ಖರೀದಿಸೋಕೆ ನಿಮ್ಮ ತಿಂಗಳ ಸಂಬಳ ಸಾಕಾಗಲ್ಲ

ಟಿವಿಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ವಿಜಯ್‌ ಅವರನ್ನು ಭೇಟಿಯಾದ ನಟಿ ಸಿಮ್ರಾನ್‌ ಮತ್ತು ನಟ ಸಿಂಬು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಮೇ 10ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ, ತಮ್ಮ ಮೊದಲ ಚುನಾವಣೆಯಲ್ಲೇ ಐತಿಹಾಸಿಕ ಗೆಲುವು ಸಾಧಿಸಿದ ಟಿವಿಕೆ ಪಕ್ಷದ ನಾಯಕ ವಿಜಯ್ ಅವರನ್ನು ಅಭಿನಂದಿಸಲು ಚಿತ್ರರಂಗದ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಹೋದ್ಯೋಗಿಗಳು ಭೇಟಿ ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ನಟಿ ಸಿಮ್ರಾನ್‌ ಮತ್ತು ನಟ ಸಿಂಬು ಅವರು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ವಿಜಯ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು. ವಿಜಯ್ ಅವರ ರಾಜಕೀಯ ಯಶಸ್ಸು ಮತ್ತು ನಾಯಕತ್ವಕ್ಕೆ ಚಿತ್ರರಂಗದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದು ಈ ಭೇಟಿಗಳ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed