IND vs SL: ಶ್ರೀಲಂಕಾ ಟೆಸ್ಟ್‌ಗೆ ಮುನ್ನ ಸಂಕಷ್ಟದಲ್ಲಿ ಭಾರತ ತಂಡ! ಐದು ಆಟಗಾರರಿಗೆ ಗಾಯ, ಕ್ಯಾಪ್ಟನ್ ಗಿಲ್​​ಗೆ ಟೆನ್ಶನ್ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಶ್ರೀಲಂಕಾ ಪ್ರವಾಸಕ್ಕೆ ಜುಲೈ 28ರಂದು ಭಾರತ ತಂಡವನ್ನು ಘೋಷಿಸುವ ನಿರೀಕ್ಷೆ ಇದೆ. ಆದರೆ ಸರಣಿ ಮೊದಲು ತಂಡಕ್ಕೆ ಹಲವಾರು ಪ್ರಮುಖ ಹಿನ್ನಡೆಗಳು ಆಗಿವೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಭಾರತ (India) ತಂಡ ಆಗಸ್ಟ್ 15ರಂದು ಶ್ರೀಲಂಕಾ(Sri Lanka)ದಲ್ಲಿ ಆರಂಭವಾಗುವ ಮೊದಲ ಟೆಸ್ಟ್ (Test) ಪಂದ್ಯಕ್ಕೆ ಮೊದಲು, ಆಗಸ್ಟ್ 7ರಂದು ಅಭ್ಯಾಸ ಪಂದ್ಯವನ್ನು ಆಡುತ್ತದೆ. ಈ ಸರಣಿಗೆ ಜುಲೈ 28ರಂದು ಭಾರತೀಯ ತಂಡವನ್ನು ಘೋಷಿಸುವ ನಿರೀಕ್ಷೆ ಇದೆ. ಆದರೆ ಸರಣಿ (Series) ಮೊದಲು ತಂಡಕ್ಕೆ ಹಲವಾರು ಪ್ರಮುಖ ಹಿನ್ನಡೆಗಳು ಆಗಿವೆ. ಐದು ಟೀಮ್ ಇಂಡಿಯಾ ಆಟಗಾರರು ಈ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.

ಈ ಐವರು ಆಟಗಾರರಲ್ಲಿ ಇಬ್ಬರು ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಉಳಿದ ಮೂವರು ಅವರ ಫಿಟ್‌ನೆಸ್‌ನ ಮೇಲೆ ಅವಲಂಬಿತರಾಗಿದ್ದಾರೆ. ಒಂದೇ ಸಮಯದಲ್ಲಿ ಹಲವು ಆಟಗಾರರಿಗೆ ಗಾಯಗಳಾಗುತ್ತಿರುವುದರಿಂದ ಭಾರತ ತಂಡದ ಸಂಯೋಜನೆಗೆ ತೊಂದರೆಯಾಗುತ್ತಿದೆ.

ಹರ್ಷಿತ್ ರಾಣಾ-ನಿತೀಶ್ ರೆಡ್ಡಿ ಔಟ್

ವೇಗದ ಬೌಲರ್ ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಶ್ರೀಲಂಕಾ ಪ್ರವಾಸಕ್ಕೆ ಬರಲು ಸಾಧ್ಯವಿಲ್ಲ. ಈ ಇಬ್ಬರು ಯುವ ಆಟಗಾರರು ಇಲ್ಲದಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ. ಇವರು ಬ್ಯಾಟಿಂಗ್ ಮತ್ತು ಬೌಲಿಂಗ್​​ ಎರಡರಲ್ಲೂ ತಂಡಕ್ಕೆ ನೆರವಾಗುತ್ತಾರೆ. ಆದ್ದರಿಂದ ನಾಯಕ ಶುಭಮನ್ ಗಿಲ್‌ಗೆ ಸಮಸ್ಯೆಗಳು ಉಂಟಾಗಬಹುದು ಎಂದು ವರದಿಯಾಗಿದೆ.

ಬುಮ್ರಾ ಮೇಲೆ ಸಸ್ಪೆನ್ಸ್!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಡುವುದು ಖಚಿತವಿಲ್ಲ. ಜುಲೈ 30ರ ವರೆಗೆ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಲಾಗಿದೆ. ನಂತರ ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತಮ್ಮ ಫಿಟ್‌ನೆಸ್ ವರದಿ ಕೊಡುತ್ತಾರೆ. ವರದಿ ಚೆನ್ನಾಗಿದ್ದರೆ ಅವರು ತಂಡಕ್ಕೆ ಸೇರಬಹುದು.

ಆದರೆ ಪೂರ್ತಿ ಫಿಟ್ ಆಗಿಲ್ಲದಿದ್ದರೆ ಅವರನ್ನು ಸರಣಿಯಿಂದ ಹೊರಗಿಡಬಹುದು.

ಕಮ್​ಬ್ಯಾಕ್ ಹಾದಿಯಲ್ಲಿ ಸಾಯಿ ಸುದರ್ಶನ್?

ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರ ನಂತರ ಮೂರನೇ ಸ್ಥಾನದಲ್ಲಿ ಬ್ಯಾಟ್ ಮಾಡುವ ಸಾಯಿ ಸುದರ್ಶನ್ ಆಡುವುದರ ಬಗ್ಗೆ ಅನಿಶ್ಚಿತತೆ ಇದೆ. ಬುಮ್ರಾ ಹಾಗೆ ಸುದರ್ಶನ್ ಕೂಡ ಗುಣಮುಖರಾಗುತ್ತಿದ್ದಾರೆ. ಈ ಸರಣಿಯಲ್ಲಿ ಅವರು ಆಡುವುದು ಖಚಿತವಾಗಿಲ್ಲ. ಆದರೂ ಆಯ್ಕೆದಾರರು ಇಬ್ಬರನ್ನೂ ತಂಡಕ್ಕೆ ಸೇರಿಸಬಹುದು. ಆದರೆ ಫಿಟ್‌ನೆಸ್‌ ವರದಿಯಲ್ಲಿ ಪಾಸಿಟಿವ್ ಬರಬೇಕಾಗಿದೆ.

ವಾಷಿಂಗ್ಟನ್ ಸುಂದರ್ ಕಥೆಯೇನು?

ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದಿಂದಾಗಿ ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಆಗಸ್ಟ್ 23ರಂದು ಕೊಲಂಬೊದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ಗೆ ಅವರು ಹಿಂತಿರುಗಬಹುದು. ಅದು ಅವರ ಫಿಟ್‌ನೆಸ್ ಮೇಲೆ ಅವಲಂಬಿಸಿರುತ್ತದೆ.

ಜಡೇಜಾಗೆ ಚಾನ್ಸ್?

ಗಾಯಗಳಿಂದಾಗಿ ಭಾರತ ತಂಡದಲ್ಲಿ ಒತ್ತಡ ಹೆಚ್ಚಿದ್ದರೂ, ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತೆ ಬರುವುದು ಬಹುತೇಕ ಖಚಿತ. ಮಾನವ್ ಸುತಾರ್ ತಮ್ಮ ಮೊದಲ ಪಂದ್ಯದಲ್ಲೇ ಏಳು ವಿಕೆಟ್ ತೆಗೆದುಕೊಂಡಿದ್ದರಿಂದ, ಸ್ಪಿನ್ ಬೌಲಿಂಗ್‌ನಲ್ಲಿ ಹರ್ಷ್ ದುಬೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂದು ಕಾದ ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports