Last Updated:
Bollywood: ಬಾಲಿವುಡ್ನಲ್ಲಿ ಖಳನಾಯಕರ ಬಗ್ಗೆ ಮಾತನಾಡುವಾಗ, ಬಿ-ಟೌನ್ನಲ್ಲಿ ಗುಲ್ಶನ್ ಗ್ರೋವರ್, ಡ್ಯಾನಿ ಡೆನ್ಜಾಂಗ್ಪಾ ಮತ್ತು ಪ್ರೇಮ್ ಚೋಪ್ರಾ ಅವರಂತಹ ಕೆಲವು ಹೆಸರುಗಳು ಮಾತ್ರ ಸಾರ್ವಕಾಲಿಕ ಅತ್ಯುತ್ತಮ ಖಳನಾಯಕರಾಗಿ ಕಂಡು ಬರುತ್ತವೆ.
ಒಂದು ಚಲನಚಿತ್ರಕ್ಕೆ ನಾಯಕ ನಟ (Hero) ಎಷ್ಟು ಮುಖ್ಯವಾಗುತ್ತಿರುತ್ತಾರೋ, ಖಳನಾಯಕ (Villion) ಸಹ ಅಷ್ಟೇ ಮುಖ್ಯವಾಗಿರುತ್ತಾರೆ. ಎಷ್ಟೋ ಚಿತ್ರಗಳಲ್ಲಿ ನಟರಿಗಿಂತಲೂ ಖಳನಾಯಕನ ಪಾತ್ರದಲ್ಲಿ ನಟಿಸಿದ ನಟರುಗಳು ಹೆಚ್ಚು ಪ್ರಭಾವ ಬೀರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ, ವಿಲನ್ ಪಾತ್ರದಲ್ಲಿ ಸಹ ಅನೇಕ ಜನರು ಅತಿ ಹೆಚ್ಚು ಸಂಭಾವನೆ ಪಡೆದಿರುವ ಅನೇಕ ಉದಾಹರಣೆಗಳಿವೆ. ಇಲ್ಲಿಯೂ ಸಹ ಒಬ್ಬ ಫೇಮಸ್ ವಿಲನ್ ಬಾಲಿವುಡ್ ಚಿತ್ರೋದ್ಯಮದಲ್ಲಿ (Bollywood Cinema) ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಆಗಿದ್ರಂತೆ. 80-90ರ ದಶಕದಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ವಿಲನ್ ಅಂತ ಹೇಳಿದರೆ, ಥಟ್ಟನೆ ಅಮರೀಶ್ ಪುರಿ ಅವರ ಮುಖ ಮತ್ತು ಅವರ ಕೋಪ ಮೊದಲಿಗೆ ಕಣ್ಮುಂದೆ ಬರುತ್ತಿತ್ತು. ಚಲನಚಿತ್ರದಲ್ಲಿ ನಾಯಕ ನಟನಿಗೆ ಉತ್ತಮ ಪ್ರತಿಸ್ಪರ್ಧಿ ಅಂತ ವಿಲನ್ ಇಲ್ಲದೆ ಹೋದರೆ ನಾಯಕ ನಟರ ಪಾತ್ರ ಅಷ್ಟಾಗಿ ಪ್ರಭಾವ ಬೀರುವುದಿಲ್ಲ.
ಬಾಲಿವುಡ್ನಲ್ಲಿ ಖಳನಾಯಕರ ಬಗ್ಗೆ ಮಾತನಾಡುವಾಗ, ಬಿ-ಟೌನ್ನಲ್ಲಿ ಗುಲ್ಶನ್ ಗ್ರೋವರ್, ಡ್ಯಾನಿ ಡೆನ್ಜಾಂಗ್ಪಾ ಮತ್ತು ಪ್ರೇಮ್ ಚೋಪ್ರಾ ಅವರಂತಹ ಕೆಲವು ಹೆಸರುಗಳು ಮಾತ್ರ ಸಾರ್ವಕಾಲಿಕ ಅತ್ಯುತ್ತಮ ಖಳನಾಯಕರಾಗಿ ಕಂಡು ಬರುತ್ತವೆ. ಆದಾಗ್ಯೂ, ಶ್ರೇಷ್ಠ ಖಳನಾಯಕನೆಂದು ಪ್ರಶಂಸಿಸಲ್ಪಟ್ಟ ಒಬ್ಬ ನಟನಿದ್ದನೆಂದು ನಿಮಗೆ ತಿಳಿದಿದೆಯೇ ಮತ್ತು ಅವರು ಚಿತ್ರಿಸಿದ ಪ್ರತಿಯೊಂದು ವಿಲನ್ ಪಾತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದರು.
ದಿವಂಗತ ನಟ ಅಮರೀಶ್ ಪುರಿ ಜೂನ್ 22, 1932 ರಂದು ಜನಿಸಿದರು, ಇವರು 1967 ಮತ್ತು 2005 ರ ನಡುವೆ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೆಲಸ ಮಾಡಿದ ಎಲ್ಲಾ ಚಲನಚಿತ್ರಗಳು ಕಮರ್ಷಿಯಲ್ ಹಿಟ್ ಆಗಿವೆ ಮತ್ತು ಅವರು ಬಾಲಿವುಡ್ನ ಅತ್ಯಂತ ಯಶಸ್ವಿ ಖಳನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು.
ಅವರು 1971 ರಲ್ಲಿ ರೇಷ್ಮಾ ಔರ್ ಶೇರಾ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಿಸ್ಟರ್ ಇಂಡಿಯಾದಲ್ಲಿ ಮೊಗಾಂಬೋ ಪಾತ್ರದಿಂದ ಹಿಡಿದು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯಲ್ಲಿ ಬಲದೇವ್ ಸಿಂಗ್ ಚೌಧರಿಯ ಪಾತ್ರದವರೆಗೆ ಅವರು ತಮ್ಮದೇ ಆದ ವಿಶಿಷ್ಟ ನಟನೆಯಿಂದ ವಿಭಿನ್ನವಾದ ಛಾಪನ್ನು ಹೊಂದಿದ್ದರು.
ಅಮರೀಶ್ ಪುರಿ ಅವರು ಚಿತ್ರದಲ್ಲಿ ನಟಿಸುವುದಕ್ಕಾಗಿ ಸರ್ಕಾರಿ ಕೆಲಸ ಬಿಟ್ಟರು, ನಾಯಕ ನಟ ಆಗುವ ಅವಕಾಶ ಸಿಕ್ಕರೂ ಸಹ ವಿಲನ್ ಆಗಿ ನಟಿಸಲು ಆಯ್ಕೆ ಮಾಡಿಕೊಂಡು ಸೂಪರ್ ಹಿಟ್ ವಿಲನ್ ಆದರು.
ಒಮ್ಮೆ ಅಮರೀಶ್ ಪುರಿ ಅವರು ತಾಳ್ಮೆ ಕಳೆದುಕೊಂಡು ನಟ ಗೋವಿಂದ ಅವರಿಗೆ ಕಪಾಳಕ್ಕೆ ಹೊಡೆದಿದ್ರಂತೆ. ಮಾಧ್ಯಮ ವರದಿಗಳ ಪ್ರಕಾರ, ಗೋವಿಂದ ಮತ್ತು ಅಮರೀಶ್ ಪುರಿ ಅವರು ಚಿತ್ರವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ದಿಗ್ಗಜ ನಟ ಮೊದಲು ಸೆಟ್ಗೆ ಬೇಗನೆ ಆಗಮಿಸಿದರೆ, ನಟ ಗೋವಿಂದ ತಡವಾಗಿ ಸೆಟ್ಗೆ ಬಂದರಂತೆ. ಅಮರೀಶ್ ಪುರಿ ಅವರು ಯಾವಾಗಲೂ ತುಂಬಾನೇ ಶಿಸ್ತಿನ ವ್ಯಕ್ತಿಯಾಗಿದ್ದರಂತೆ, ಸಮಯಕ್ಕೆ ಸರಿಯಾಗಿ ಶೂಟಿಂಗ್ ಸ್ಥಳದಲ್ಲಿ ಹಾಜರಿರುತ್ತಿದ್ದರಂತೆ.
ನಟ ಗೋವಿಂದ ಅವರು ಸುಮಾರು ಒಂಬತ್ತು ಗಂಟೆಗಳ ಕಾಲ ತಡವಾಗಿ ಸೆಟ್ಗೆ ಬಂದರು ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಈ ವಿಳಂಬವು ವಾಗ್ವಾದಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಅಮರೀಶ್ ಪುರಿ ಅವರು ತಾಳ್ಮೆ ಕಳೆದುಕೊಂಡರು ಮತ್ತು ನಟ ಗೋವಿಂದ ಅವರ ಕಪಾಳಕ್ಕೆ ಜೋರಾಗಿ ಹೊಡೆದರಂತೆ.
2003ರಲ್ಲಿ, ನಟ ಅಮರೀಶ್ ಪುರಿ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ನಂತರ ಅವರ ದೇಹವು ಕ್ರಮೇಣವಾಗಿ ದುರ್ಬಲಗೊಳ್ಳಲು ಇದು ಕಾರಣವಾಯಿತು. ಅವರ ಸ್ಥಿತಿಯ ಹೊರತಾಗಿಯೂ, ಅವರು ತಮ್ಮ ಕೆಲಸಕ್ಕೆ ಬದ್ಧರಾಗಿದ್ದರು ಮತ್ತು ಅವರ ಎಲ್ಲಾ ವೃತ್ತಿಪರ ಜವಾಬ್ದಾರಿಗಳನ್ನು ಪೂರೈಸಿದರು. ಈ ಸಮಯದಲ್ಲಿ, ಅವರು ಐದು ಚಿತ್ರಗಳಿಗೆ ಸಹಿ ಹಾಕಿದರು. ಕಚ್ಚಿ ಸಡಕ್, ಮುಜ್ಸೆ ಶಾದಿ ಕರೋಗಿ, ಕಿಸ್ನಾ, ಹಲ್ಚಲ್ ಮತ್ತು ಐತ್ರಾಜ್ ಚಿತ್ರಗಳಲ್ಲಿ ನಿರ್ಣಾಯಕ ಸ್ಥಿತಿಯಲ್ಲಿಯೂ ಸಹ ತಮ್ಮ ಚಿತ್ರೀಕರಣವನ್ನು ಪೂರ್ಣಗೊಳಿಸಿದರು.
2003 ರಲ್ಲಿ, ಜಾಲ್: ದಿ ಟ್ರ್ಯಾಪ್ ಚಿತ್ರೀಕರಣದ ಸಮಯದಲ್ಲಿ, ಅಮರೀಶ್ ಪುರಿ ಅವರ ಆರೋಗ್ಯ ಕೈ ಕೊಟ್ಟಿತು, ನಂತರ ಅವರಿಗೆ ಮೈಲೋಡಿಸ್ಪ್ಲಾಸ್ಟಿಕ್ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ಈ ನಟ ಜನವರಿ 12, 2005 ರಂದು ಕೊನೆಯುಸಿರೆಳೆದರು.













